<p><strong>ಕಾವೇರಿ ಸೂತ್ರಕ್ಕೆ ಜಯಾ ತಿರಸ್ಕಾರ, ಮತ್ತೆ ಚಿಕ್ಕಟ್ಟು</strong></p>.<p><strong>ನವದೆಹಲಿ, ಆ. 8 (ಪಿಟಿಐ, ಯುಎನ್ಐ):</strong> ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ಗೆ ಇದೇ ತಿಂಗಳು 12ರೊಳಗೆ ಯೋಜನೆಯೊಂದನ್ನು ಸಲ್ಲಿಸಲು ಕೇಂದ್ರ ಸಜ್ಜಾಗುತ್ತಿರುವ ಬೆನ್ನ ಹಿಂದೆಯೇ ಆಡಳಿತಾ ರೂಢ ಬಿಜೆಪಿ ಮಿತ್ರ ಪಕ್ಷವಾದ ಎಐಎಡಿಎಂಕೆ ಹಾಗೂ ಅದರ ಬೆಂಬಲಿಗ ಪಕ್ಷಗಳು ಈ ಯೋಜನೆಯನ್ನು ತಿರಸ್ಕರಿಸಿವೆ.</p>.<p>ಇದರಿಂದಾಗಿ ಕಾವೇರಿ ನೀರು ಹಂಚಿಕೆ ಸಂಬಂಧದಲ್ಲಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಮಧ್ಯೆ ಶುಕ್ರವಾರ ಆದ ಒಪ್ಪಂದದ ಜಾರಿಗೆ ರಾಜಕೀಯ ತೊಡಕು ಎದುರಾಗಿದೆ.</p>.<p><strong>ಊಹಾಪೋಹಕ್ಕೆ ಎಡೆಮಾಡಿಕೊಟ್ಟಿರುವ ‘ಕಿವಿಮಾತು’ ಸಭೆ</strong></p>.<p><strong>ಬೆಂಗಳೂರು, ಆ. 8–</strong> ಯಾವುದೇ ಗಳಿಗೆಯಲ್ಲಿ ಲೋಕಸಭೆಗೆ ಚುನಾವಣೆ ನಡೆಯಬಹುದೆಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನತಾದಳವನ್ನು ಬಲಪಡಿಸುವ ಉದ್ದೇಶದಿಂದ ಜಿಲ್ಲಾ ಅಧ್ಯಕ್ಷರು ಹಾಗೂ ಶಾಸಕರಿಗೆ ‘ಕಿವಿಮಾತು’ ಹೇಳಲು ಆಗಸ್ಟ್ 12 ಹಾಗೂ 13ರಂದು ನಗರದಲ್ಲಿ ಸಭೆ ಕರೆಯುವ ಸಂಭವವಿದ್ದು ಇದು ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ.</p>.<p>ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳು ಕರೆದಿದ್ದ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ಜೆ.ಎಚ್.ಪಟೇಲರು, ಉಪ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಹಿರಿಯ ಸಚಿವರ ತಂಡದೊಂದಿಗೆ ಪಕ್ಷದ ವರಿಷ್ಠರು ಈ ವಿಚಾರದಲ್ಲಿ ಸುಧೀರ್ಘ ಚರ್ಚೆ ನಡೆಸಿದರೆಂದು ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾವೇರಿ ಸೂತ್ರಕ್ಕೆ ಜಯಾ ತಿರಸ್ಕಾರ, ಮತ್ತೆ ಚಿಕ್ಕಟ್ಟು</strong></p>.<p><strong>ನವದೆಹಲಿ, ಆ. 8 (ಪಿಟಿಐ, ಯುಎನ್ಐ):</strong> ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ಗೆ ಇದೇ ತಿಂಗಳು 12ರೊಳಗೆ ಯೋಜನೆಯೊಂದನ್ನು ಸಲ್ಲಿಸಲು ಕೇಂದ್ರ ಸಜ್ಜಾಗುತ್ತಿರುವ ಬೆನ್ನ ಹಿಂದೆಯೇ ಆಡಳಿತಾ ರೂಢ ಬಿಜೆಪಿ ಮಿತ್ರ ಪಕ್ಷವಾದ ಎಐಎಡಿಎಂಕೆ ಹಾಗೂ ಅದರ ಬೆಂಬಲಿಗ ಪಕ್ಷಗಳು ಈ ಯೋಜನೆಯನ್ನು ತಿರಸ್ಕರಿಸಿವೆ.</p>.<p>ಇದರಿಂದಾಗಿ ಕಾವೇರಿ ನೀರು ಹಂಚಿಕೆ ಸಂಬಂಧದಲ್ಲಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಮಧ್ಯೆ ಶುಕ್ರವಾರ ಆದ ಒಪ್ಪಂದದ ಜಾರಿಗೆ ರಾಜಕೀಯ ತೊಡಕು ಎದುರಾಗಿದೆ.</p>.<p><strong>ಊಹಾಪೋಹಕ್ಕೆ ಎಡೆಮಾಡಿಕೊಟ್ಟಿರುವ ‘ಕಿವಿಮಾತು’ ಸಭೆ</strong></p>.<p><strong>ಬೆಂಗಳೂರು, ಆ. 8–</strong> ಯಾವುದೇ ಗಳಿಗೆಯಲ್ಲಿ ಲೋಕಸಭೆಗೆ ಚುನಾವಣೆ ನಡೆಯಬಹುದೆಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನತಾದಳವನ್ನು ಬಲಪಡಿಸುವ ಉದ್ದೇಶದಿಂದ ಜಿಲ್ಲಾ ಅಧ್ಯಕ್ಷರು ಹಾಗೂ ಶಾಸಕರಿಗೆ ‘ಕಿವಿಮಾತು’ ಹೇಳಲು ಆಗಸ್ಟ್ 12 ಹಾಗೂ 13ರಂದು ನಗರದಲ್ಲಿ ಸಭೆ ಕರೆಯುವ ಸಂಭವವಿದ್ದು ಇದು ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ.</p>.<p>ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳು ಕರೆದಿದ್ದ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ಜೆ.ಎಚ್.ಪಟೇಲರು, ಉಪ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಹಿರಿಯ ಸಚಿವರ ತಂಡದೊಂದಿಗೆ ಪಕ್ಷದ ವರಿಷ್ಠರು ಈ ವಿಚಾರದಲ್ಲಿ ಸುಧೀರ್ಘ ಚರ್ಚೆ ನಡೆಸಿದರೆಂದು ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>