ಬೆಂಗಳೂರು, ನ. 29– ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇಂದ್ರ ಗ್ರಿಡ್ನಿಂದ ಒಟ್ಟಾರೆಯಾಗಿ 700 ಮೆ.ವಾ.ನಷ್ಟು ಹೆಚ್ಚುವರಿ ವಿದ್ಯುತ್ ಲಭ್ಯವಾಗುವುದರಿಂದ ಇನ್ನು ಒಂದು ವಾರದಲ್ಲಿ ರಾಜ್ಯದ ಸಾಮಾನ್ಯ ಗ್ರಾಹಕರು, ಎಇಎಚ್ ಹಾಗೂ ಸಣ್ಣ ಕೈಗಾರಿಕೆಯವರಿಗೆ ಬೆಳಿಗ್ಗೆ ಮತ್ತು ಸಂಜೆ ವಿದ್ಯುತ್ ಕಡಿತ ಇರುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಇಂದು ಇಲ್ಲಿ ತಿಳಿಸಿದರು.