ನವದಹೆಲಿ, ಏ. 15 (ಯುಎನ್ಐ)– ಸಾರ್ವಜನಿಕ ಜೀವನದಿಂದ ಭ್ರಷ್ಟಾಚಾರದ ನಿರ್ಮೂಲನಕ್ಕೆ ಎಂಟು ಅಂಶಗಳ ಸಮಗ್ರ ಕಾರ್ಯಕ್ರಮ, ಕೇಂದ್ರೀಯ ತನಿಖಾ ಸಂಸ್ಥೆಯನ್ನು (ಸಿಬಿಐ) ಸರ್ಕಾರಿ ಹತೋಟಿಯಿಂದ ಮುಕ್ತಗೊಳಿಸಿ ಸ್ವಾಯತ್ತ ತನಿಖಾ ವ್ಯವಸ್ಥೆಯಾಗಿ ಮಾರ್ಪಡಿಸುವುದು, ಸಮಗ್ರ ಬೆಳೆ ವಿಮಾ ಯೋಜನೆ, ಕೃಷಿ ಉತ್ಪನ್ನ ಸಾಗಣೆ ಮೇಲಿನ ನಿಯಂತ್ರಣ ರದ್ದು. ಇವು, ಜನತಾದಳ ಇಂದು ಬಿಡು ಗಡೆ ಮಾಡಿದ ಲೋಕಸಭಾ ಚುನಾವಣಾ ಪ್ರಣಾಳಿಕೆಯ ಮುಖ್ಯ ಅಂಶಗಳು.