<p>ಕಾವೇರಿ ವಿವಾದ: ಲಭ್ಯ ನೀರು ಹಂಚಿಕೆಗೆ ‘ತಾತ್ಕಾಲಿಕ ಒಪ್ಪಂದ’</p>.<p>ಮದ್ರಾಸ್, ಆ. 5– ಉಭಯ ರಾಜ್ಯಗಳ ರೈತರ ಹಿತಾಸಕ್ತಿ ರಕ್ಷಣೆ ದೃಷ್ಟಿಯಿಂದ ಇರುವ ನೀರನ್ನು ಎರಡೂ ಕಡೆಯವರು ಪರಸ್ಪರ ಲಾಭವಾಗುವಂತೆ ಹಂಚಿಕೊಳ್ಳುವ ‘ತಾತ್ಕಾಲಿಕ ವ್ಯವಸ್ಥೆ’ಗೆ ಕರ್ನಾಟಕ ಮುಖ್ಯಮಂತ್ರಿ ಜೆ.ಎಚ್. ಪಟೇಲ್<br />ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಇಂದು ಇಲ್ಲಿ ಒಪ್ಪುವ ಮೂಲಕ, ಶತಮಾನದಷ್ಟು ಹಳೆಯ ಶೀತಲ ಸಮರಕ್ಕೆ ತೆರೆ ಎಳೆದರು.</p>.<p>ಕಾವೇರಿ ವಿವಾದ ಬಗೆಹರಿಸಿಕೊಳ್ಳುವ ವಿಚಾರದಲ್ಲಿ ಇಬ್ಬರೂ ಮುಖ್ಯಮಂತ್ರಿಗಳು ಮಾತುಕತೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶಕ್ಕೆ ತಲೆಬಾಗಿ ಇಂದಿನ ಸಭೆ ನಡೆಯಿತು ಎಂದು ಪಟೇಲ್ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.</p>.<p>ಸಿಬಿಐ ತನಿಖೆಗೆ ಪ್ರಧಾನಿ ಆದೇಶ</p>.<p>ನವದೆಹಲಿ, ಆ. 5 (ಯುಎನ್ಐ)– ರಾಜಕೀಯ ನಾಯಕರ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪ್ರಧಾನಿ ಎಚ್.ಡಿ. ದೇವೇಗೌಡರು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಆದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾವೇರಿ ವಿವಾದ: ಲಭ್ಯ ನೀರು ಹಂಚಿಕೆಗೆ ‘ತಾತ್ಕಾಲಿಕ ಒಪ್ಪಂದ’</p>.<p>ಮದ್ರಾಸ್, ಆ. 5– ಉಭಯ ರಾಜ್ಯಗಳ ರೈತರ ಹಿತಾಸಕ್ತಿ ರಕ್ಷಣೆ ದೃಷ್ಟಿಯಿಂದ ಇರುವ ನೀರನ್ನು ಎರಡೂ ಕಡೆಯವರು ಪರಸ್ಪರ ಲಾಭವಾಗುವಂತೆ ಹಂಚಿಕೊಳ್ಳುವ ‘ತಾತ್ಕಾಲಿಕ ವ್ಯವಸ್ಥೆ’ಗೆ ಕರ್ನಾಟಕ ಮುಖ್ಯಮಂತ್ರಿ ಜೆ.ಎಚ್. ಪಟೇಲ್<br />ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಇಂದು ಇಲ್ಲಿ ಒಪ್ಪುವ ಮೂಲಕ, ಶತಮಾನದಷ್ಟು ಹಳೆಯ ಶೀತಲ ಸಮರಕ್ಕೆ ತೆರೆ ಎಳೆದರು.</p>.<p>ಕಾವೇರಿ ವಿವಾದ ಬಗೆಹರಿಸಿಕೊಳ್ಳುವ ವಿಚಾರದಲ್ಲಿ ಇಬ್ಬರೂ ಮುಖ್ಯಮಂತ್ರಿಗಳು ಮಾತುಕತೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶಕ್ಕೆ ತಲೆಬಾಗಿ ಇಂದಿನ ಸಭೆ ನಡೆಯಿತು ಎಂದು ಪಟೇಲ್ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.</p>.<p>ಸಿಬಿಐ ತನಿಖೆಗೆ ಪ್ರಧಾನಿ ಆದೇಶ</p>.<p>ನವದೆಹಲಿ, ಆ. 5 (ಯುಎನ್ಐ)– ರಾಜಕೀಯ ನಾಯಕರ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪ್ರಧಾನಿ ಎಚ್.ಡಿ. ದೇವೇಗೌಡರು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಆದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>