ಮದ್ರಾಸ್, ಆ. 5– ಉಭಯ ರಾಜ್ಯಗಳ ರೈತರ ಹಿತಾಸಕ್ತಿ ರಕ್ಷಣೆ ದೃಷ್ಟಿಯಿಂದ ಇರುವ ನೀರನ್ನು ಎರಡೂ ಕಡೆಯವರು ಪರಸ್ಪರ ಲಾಭವಾಗುವಂತೆ ಹಂಚಿಕೊಳ್ಳುವ ‘ತಾತ್ಕಾಲಿಕ ವ್ಯವಸ್ಥೆ’ಗೆ ಕರ್ನಾಟಕ ಮುಖ್ಯಮಂತ್ರಿ ಜೆ.ಎಚ್. ಪಟೇಲ್
ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಇಂದು ಇಲ್ಲಿ ಒಪ್ಪುವ ಮೂಲಕ, ಶತಮಾನದಷ್ಟು ಹಳೆಯ ಶೀತಲ ಸಮರಕ್ಕೆ ತೆರೆ ಎಳೆದರು.