ನವದೆಹಲಿ, ಏ.15– ಸಂಯುಕ್ತ ರಂಗವು ಪ್ರಧಾನಿ ಎಚ್.ಡಿ ದೇವೇಗೌಡ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ ಕೂಡಲೇ, ಕಾಂಗ್ರೆಸ್ ಪಕ್ಷವು ಕಳೆದ ಮಾರ್ಚ್ 31 ರಂದು ಸರ್ಕಾರ ರಚಿಸುವುದಾಗಿ ರಾಷ್ಟ್ರಪತಿ ಅವರಿಗೆ ಬರೆದ ಪತ್ರವನ್ನು ಹಿಂತೆಗೆದು ಕೊಳ್ಳುವುದಾಗಿ ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿ ಅವರು ರಂಗಕ್ಕೆ ಅಧಿಕೃತವಾಗಿ ತಿಳಿಸಿದ್ದಾರೆ.