<p><strong>ರಾಜ್ಯದ ನಾಲ್ಕು ಹೊಸ ರೈಲು ಮಾರ್ಗ ಯೋಜನೆಗೆ ಒಪ್ಪಿಗೆ</strong></p><p>ನವದೆಹಲಿ, ಫೆ. 4– ಕರ್ನಾಟಕದ ನಾಲ್ಕು ಹೊಸ ರೈಲು ಮಾರ್ಗಗಳು ಸೇರಿದಂತೆ ಒಟ್ಟು ಹನ್ನೆರಡು ಯೋಜನೆಗಳಿಗೆ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿಯು ಇಂದು ಒಪ್ಪಿಗೆ ನೀಡಿತು. </p><p>ಅವುಗಳೆಂದರೆ, ಬೆಂಗಳೂರು–ಸತ್ಯಮಂಗಲ (271 ಕಿ.ಮೀ), ಬೀದರ್– ಕಲ್ಬುರ್ಗಿ (116 ಕಿ. ಮೀ), ರಾಯಚೂರು–ಆಂಧ್ರಪ್ರದೇಶದ ಗಢವಾಲ್ (60 ಕಿ.ಮೀ), ಯಶವಂತಪುರ– ತುಮಕೂರು (64 ಕಿ.ಮೀ). </p>. <p><strong>ಭಿನ್ನಮತೀಯ ಚಟುವಟಿಕೆಗೆ ಮುಖ್ಯಮಂತ್ರಿ ನಿರ್ಲಕ್ಷ್ಯ</strong></p><p>ಬೆಂಗಳೂರು, ಫೆ. 4– ‘ಪಕ್ಷದ ಭಿನ್ನಮತೀಯ ಚಟುವಟಿಕೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳವುದಿಲ್ಲ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ಆಡಳಿತ ಯಂತ್ರವನ್ನು ಚುರುಕುಗೊಳಿ<br>ಸುವಲ್ಲಿ ಮಗ್ನನಾಗಿದ್ದೇನೆ’ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಹೇಳಿದರು. </p><p>ಪಕ್ಷದಲ್ಲಿ ಪ್ರಾರಂಭವಾಗಿರುವ ಭಿನ್ನಮತೀಯ ಚಟುವಟಿಕೆಗಳ ಬಗ್ಗೆ ಇಂದು ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಪತ್ರಕರ್ತರು ಅವರ ಗಮನ ಸೆಳೆದಾಗ, ಪಟೇಲ್ ಈ ಪ್ರತಿಕ್ರಿಯೆ ನೀಡಿದರು. </p><p>‘ಭಿನ್ನಮತೀಯ ಚಟುವಟಿಕೆಗಳ ಬಗ್ಗೆ ಇಂದಿನ ಪತ್ರಿಕೆಗಳಲ್ಲಿ ನೋಡಿದ್ದೇನೆ. ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದು ನನಗೆ ತಿಳಿಯದು. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಪಕ್ಷದಲ್ಲಿ ಶಿಸ್ತು ಇರಬೇಕು. ಇದು ಪ್ರಜಾಪ್ರಭುತ್ವ ಅಲ್ಲವೇ, ಆದ್ದರಿಂದ ಅವರಿಗೆ ಏನು ಮಾಡಬೇಕೆಂದು ಅನ್ನಿಸು<br>ತ್ತದೆಯೋ ಅದನ್ನು ಮಾಡಿಕೊಳ್ಳಲಿ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯದ ನಾಲ್ಕು ಹೊಸ ರೈಲು ಮಾರ್ಗ ಯೋಜನೆಗೆ ಒಪ್ಪಿಗೆ</strong></p><p>ನವದೆಹಲಿ, ಫೆ. 4– ಕರ್ನಾಟಕದ ನಾಲ್ಕು ಹೊಸ ರೈಲು ಮಾರ್ಗಗಳು ಸೇರಿದಂತೆ ಒಟ್ಟು ಹನ್ನೆರಡು ಯೋಜನೆಗಳಿಗೆ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿಯು ಇಂದು ಒಪ್ಪಿಗೆ ನೀಡಿತು. </p><p>ಅವುಗಳೆಂದರೆ, ಬೆಂಗಳೂರು–ಸತ್ಯಮಂಗಲ (271 ಕಿ.ಮೀ), ಬೀದರ್– ಕಲ್ಬುರ್ಗಿ (116 ಕಿ. ಮೀ), ರಾಯಚೂರು–ಆಂಧ್ರಪ್ರದೇಶದ ಗಢವಾಲ್ (60 ಕಿ.ಮೀ), ಯಶವಂತಪುರ– ತುಮಕೂರು (64 ಕಿ.ಮೀ). </p>. <p><strong>ಭಿನ್ನಮತೀಯ ಚಟುವಟಿಕೆಗೆ ಮುಖ್ಯಮಂತ್ರಿ ನಿರ್ಲಕ್ಷ್ಯ</strong></p><p>ಬೆಂಗಳೂರು, ಫೆ. 4– ‘ಪಕ್ಷದ ಭಿನ್ನಮತೀಯ ಚಟುವಟಿಕೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳವುದಿಲ್ಲ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ಆಡಳಿತ ಯಂತ್ರವನ್ನು ಚುರುಕುಗೊಳಿ<br>ಸುವಲ್ಲಿ ಮಗ್ನನಾಗಿದ್ದೇನೆ’ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಹೇಳಿದರು. </p><p>ಪಕ್ಷದಲ್ಲಿ ಪ್ರಾರಂಭವಾಗಿರುವ ಭಿನ್ನಮತೀಯ ಚಟುವಟಿಕೆಗಳ ಬಗ್ಗೆ ಇಂದು ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಪತ್ರಕರ್ತರು ಅವರ ಗಮನ ಸೆಳೆದಾಗ, ಪಟೇಲ್ ಈ ಪ್ರತಿಕ್ರಿಯೆ ನೀಡಿದರು. </p><p>‘ಭಿನ್ನಮತೀಯ ಚಟುವಟಿಕೆಗಳ ಬಗ್ಗೆ ಇಂದಿನ ಪತ್ರಿಕೆಗಳಲ್ಲಿ ನೋಡಿದ್ದೇನೆ. ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದು ನನಗೆ ತಿಳಿಯದು. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಪಕ್ಷದಲ್ಲಿ ಶಿಸ್ತು ಇರಬೇಕು. ಇದು ಪ್ರಜಾಪ್ರಭುತ್ವ ಅಲ್ಲವೇ, ಆದ್ದರಿಂದ ಅವರಿಗೆ ಏನು ಮಾಡಬೇಕೆಂದು ಅನ್ನಿಸು<br>ತ್ತದೆಯೋ ಅದನ್ನು ಮಾಡಿಕೊಳ್ಳಲಿ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>