ಯಡಿಯೂರಪ್ಪ ವಿರುದ್ಧ ಹಕ್ಕುಚ್ಯುತಿ ಮಂಡನೆ: ವಿವಿಧ ಪಕ್ಷಗಳು ಸಜ್ಜು
ಬೆಂಗಳೂರು, ಆ. 19– ವಿಧಾನಸಭೆಯ ಹೊರಗೆ ಸಭ್ಯಾಧ್ಯಕ್ಷರ ರೂಲಿಂಗನ್ನು ಪ್ರಶ್ನಿಸುವ ರೀತಿಯಲ್ಲಿ ಮಾತನಾಡಿದ್ದಾರೆಂಬ ಆರೋಪ ಹೊತ್ತಿರುವ ವಿರೋಧಿ ನಾಯಕ ಯಡಿಯೂರಪ್ಪ ಮತ್ತು ಇದರಿಂದ ಮನ ನೊಂದಿರುವ ಸಭಾಧ್ಯಕ್ಷ ರಮೇಶ್ ಕುಮಾರ್ ಪ್ರಕರಣದಲ್ಲಿ ಬಿಜೆಪಿಯನ್ನು ಹಣ್ಣುಗಾಯಿ–ನೀರುಗಾಯಿ ಮಾಡಲು ಆಡಳಿತಾರೂಢ ಜನತಾ ದಳವೂ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಈಗ ಸಜ್ಜಾಗಿವೆ.