<p><strong>ಚಿತ್ರೀಕರಣ ವೇಳೆ ಹೆಜ್ಜೇನು ಕಚ್ಚಿ ಕ್ಯಾಮೆರಾಮನ್ ಸಾವು</strong></p>.<p>ಚನ್ನಪಟ್ಟಣ, ಜ. 7– ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಆವರಣ ದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ‘ಹುಚ್ಚ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಹೆಜ್ಜೇನು<br>ಕಚ್ಚಿದ ಪರಿಣಾಮವಾಗಿ ಇಂದು ಮಧ್ಯಾಹ್ನ ಕ್ಯಾಮೆರಾಮನ್ ಸತ್ತು, ಇತರ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಚಿತ್ರೀಕರಣದಲ್ಲಿದ್ದ ಕ್ಯಾಮೆರಾಮನ್ ಸಹಾಯಕ ಕರುಣಾಕರ ಶೆಟ್ಟಿ (30) ಮೃತಪಟ್ಟಿದ್ದಾರೆ. ಓಂಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ‘ಸ್ಪರ್ಶ’ ಖ್ಯಾತಿಯ ಸುದೀಪ್ ಮತ್ತು ರೇಖಾ ನಾಯಕ ನಾಯಕಿಯಾಗಿ ನಟಿಸುತ್ತಿದ್ದು, ಭಾನುವಾರ ಹಾಡಿನ ಚಿತ್ರೀಕರಣದಲ್ಲಿ ಮುಂಬೈನ ನರ್ತಕ, ನರ್ತಕಿಯರು ಭಾಗವಹಿಸಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.</p>.<p><strong>ರಾಣಿ ಮುಖರ್ಜಿ, ಪ್ರೀತಿ ಜಿಂಟಾ ವಿಚಾರಣೆ ಸಂಭವ</strong></p><p>ಮುಂಬೈ, ಜ. 7 (ಪಿಟಿಐ)– ಭೂಗತ ಜಗತ್ತು ಮತ್ತು ಬಾಲಿವುಡ್ ಸಂಪರ್ಕ ಕುರಿತಂತೆ ಒಂದೆರಡು ದಿನಗಳಲ್ಲಿ ಹಿಂದಿ ಚಿತ್ರರಂಗದ ಖ್ಯಾತ ತಾರೆಯರಾದ ರಾಣಿ ಮುಖರ್ಜಿ ಮತ್ತು ಪ್ರೀತಿ ಜಿಂಟಾ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮುಂಬೈ ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಬಾಲಿವುಡ್ ಮತ್ತು ಭೂಗತ ಜಗತ್ತಿನ ಸಂಪರ್ಕ ಸಾಕಷ್ಟು ಸಾಕ್ಷ್ಯಾಧಾರಗಳೊಂದಿಗೆ ಬಹಿರಂಗವಾಗುತ್ತಿದೆ. ಅಲ್ಲದೆ, ಬಾಲಿವುಡ್ನಲ್ಲಿ ತಯಾರಾಗುವ ಸುಮಾರು ಶೇ 60ರಷ್ಟು ಚಿತ್ರಗಳಿಗೆ ಮಾಫಿಯಾ ಗುಂಪುಗಳೇ ಹಣನೀಡುತ್ತವೆ ಎಂದು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರೀಕರಣ ವೇಳೆ ಹೆಜ್ಜೇನು ಕಚ್ಚಿ ಕ್ಯಾಮೆರಾಮನ್ ಸಾವು</strong></p>.<p>ಚನ್ನಪಟ್ಟಣ, ಜ. 7– ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಆವರಣ ದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ‘ಹುಚ್ಚ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಹೆಜ್ಜೇನು<br>ಕಚ್ಚಿದ ಪರಿಣಾಮವಾಗಿ ಇಂದು ಮಧ್ಯಾಹ್ನ ಕ್ಯಾಮೆರಾಮನ್ ಸತ್ತು, ಇತರ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಚಿತ್ರೀಕರಣದಲ್ಲಿದ್ದ ಕ್ಯಾಮೆರಾಮನ್ ಸಹಾಯಕ ಕರುಣಾಕರ ಶೆಟ್ಟಿ (30) ಮೃತಪಟ್ಟಿದ್ದಾರೆ. ಓಂಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ‘ಸ್ಪರ್ಶ’ ಖ್ಯಾತಿಯ ಸುದೀಪ್ ಮತ್ತು ರೇಖಾ ನಾಯಕ ನಾಯಕಿಯಾಗಿ ನಟಿಸುತ್ತಿದ್ದು, ಭಾನುವಾರ ಹಾಡಿನ ಚಿತ್ರೀಕರಣದಲ್ಲಿ ಮುಂಬೈನ ನರ್ತಕ, ನರ್ತಕಿಯರು ಭಾಗವಹಿಸಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.</p>.<p><strong>ರಾಣಿ ಮುಖರ್ಜಿ, ಪ್ರೀತಿ ಜಿಂಟಾ ವಿಚಾರಣೆ ಸಂಭವ</strong></p><p>ಮುಂಬೈ, ಜ. 7 (ಪಿಟಿಐ)– ಭೂಗತ ಜಗತ್ತು ಮತ್ತು ಬಾಲಿವುಡ್ ಸಂಪರ್ಕ ಕುರಿತಂತೆ ಒಂದೆರಡು ದಿನಗಳಲ್ಲಿ ಹಿಂದಿ ಚಿತ್ರರಂಗದ ಖ್ಯಾತ ತಾರೆಯರಾದ ರಾಣಿ ಮುಖರ್ಜಿ ಮತ್ತು ಪ್ರೀತಿ ಜಿಂಟಾ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮುಂಬೈ ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಬಾಲಿವುಡ್ ಮತ್ತು ಭೂಗತ ಜಗತ್ತಿನ ಸಂಪರ್ಕ ಸಾಕಷ್ಟು ಸಾಕ್ಷ್ಯಾಧಾರಗಳೊಂದಿಗೆ ಬಹಿರಂಗವಾಗುತ್ತಿದೆ. ಅಲ್ಲದೆ, ಬಾಲಿವುಡ್ನಲ್ಲಿ ತಯಾರಾಗುವ ಸುಮಾರು ಶೇ 60ರಷ್ಟು ಚಿತ್ರಗಳಿಗೆ ಮಾಫಿಯಾ ಗುಂಪುಗಳೇ ಹಣನೀಡುತ್ತವೆ ಎಂದು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>