<p><em><strong>ಸೋಮವಾರ 20.7.1998</strong></em></p>.<h2>ಸೀಬರ್ಡ್: ನಿಷ್ಫಲವಾದ ರಕ್ಷಣಾ ಸಚಿವರ ಸಭೆ</h2>.<p>ಕಾರವಾರ, ಜುಲೈ 19– ‘ಸೀಬರ್ಡ್’ ನಿರಾಶ್ರಿತರ ಪುನರ್ವಸತಿ ಮತ್ತು ಪರಿಹಾರ ಕುರಿತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇಂದು ಇಲ್ಲಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ಮುಖ್ಯಮಂತ್ರಿ ಪಟೇಲ್ ಅವರ ಉಪಸ್ಥಿತಿಯಲ್ಲಿ ನಡೆದ ಅತಿ ಮಹತ್ವದ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ.</p>.<p>ಇದರಿಂದಾಗಿ ಇಲ್ಲಿಯವರೆಗಿದ್ದ ಅನಿಶ್ಚಿತತೆ ಮತ್ತೆ ಮುಂದುವರಿದಂತಾಗಿದೆ.</p>.<p>ಏಷ್ಯಾದಲ್ಲಿಯೇ ಅತಿ ದೊಡ್ಡ ನೌಕಾ ನೆಲೆಯಾಗಲಿರುವ ‘ಸೀಬರ್ಡ್’ ನೌಕಾ ನೆಲೆ ಯೋಜನೆಯ ಜಾರಿಗೆ ಅಡ್ಡಿಯಾಗಿರುವ ಪುನರ್ವಸತಿ ಮತ್ತು ನಿರಾಶ್ರಿತರಿಗೆ ನೀಡಬೇಕಾಗಿರುವ ಪರಿಹಾರ ಕುರಿತು ಚರ್ಚಿಸಲೆಂದೇ ರಕ್ಷಣಾ ಸಚಿವರು ಇಂದು ಮುಖ್ಯಮಂತ್ರಿ, ಕಂದಾಯ ಸಚಿವರೊಂದಿಗೆ ಇಲ್ಲಿಗೆ ಆಗಮಿಸಿದ್ದರು.</p>.<p>****</p>. <h2><strong>ಬಾಗೂರು ನವಿಲೆ: ಚಳವಳಿ ಅಂತ್ಯ</strong></h2>.<p>ಚನ್ನರಾಯಪಟ್ಟಣ, ಜುಲೈ 19– ನಾಲೆಗೆ ಮಣ್ಣು ಸುರಿದು ಕಳೆದ 96 ದಿನಗಳಿಂದ ಅನಿರ್ಧಿಷ್ಟ ನೀರು ತಡೆ ಚಳವಳಿ ನಡೆಸುತ್ತಿದ್ದ ಬಾಗೂರು–ನವಿಲೆ ಸುರಂಗ ಸಂತ್ರಸ್ತ ರೈತರು ಇಂದು ಸ್ವಯಂ ಬಂಧನಕ್ಕೆ ಒಳಗಾಗಿ, ನಾಲೆಯನ್ನು ತೆರವು ಮಾಡಿದ್ದರಿಂದ ಅನಿರ್ಧಿಷ್ಟ ನೀರು ಬಂದ್ ಚಳವಳಿ ಅಂತ್ಯವಾಯಿತು.</p>.<p>ಈ ತಿಂಗಳ 14ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಗೋಪಾಲ್, ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಮುಖಂಡ ಎಚ್.ವಿ.ಅನಂತಸುಬ್ಬರಾವ್ ಅವರೂ ಸೇರಿದಂತೆ ಸುಮಾರು 100 ಜನ ಬಂಧನಕ್ಕೆ ಒಳಗಾದರು.</p>.<p>ಚನ್ನರಾಯಪಟ್ಟಣ ತಾಲ್ಲೂಕು ಮತ್ತು ಹಾಸನ ನಗರದಲ್ಲಿ ಇಂದಿನಿಂದ ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಸೋಮವಾರ 20.7.1998</strong></em></p>.<h2>ಸೀಬರ್ಡ್: ನಿಷ್ಫಲವಾದ ರಕ್ಷಣಾ ಸಚಿವರ ಸಭೆ</h2>.<p>ಕಾರವಾರ, ಜುಲೈ 19– ‘ಸೀಬರ್ಡ್’ ನಿರಾಶ್ರಿತರ ಪುನರ್ವಸತಿ ಮತ್ತು ಪರಿಹಾರ ಕುರಿತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇಂದು ಇಲ್ಲಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ಮುಖ್ಯಮಂತ್ರಿ ಪಟೇಲ್ ಅವರ ಉಪಸ್ಥಿತಿಯಲ್ಲಿ ನಡೆದ ಅತಿ ಮಹತ್ವದ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ.</p>.<p>ಇದರಿಂದಾಗಿ ಇಲ್ಲಿಯವರೆಗಿದ್ದ ಅನಿಶ್ಚಿತತೆ ಮತ್ತೆ ಮುಂದುವರಿದಂತಾಗಿದೆ.</p>.<p>ಏಷ್ಯಾದಲ್ಲಿಯೇ ಅತಿ ದೊಡ್ಡ ನೌಕಾ ನೆಲೆಯಾಗಲಿರುವ ‘ಸೀಬರ್ಡ್’ ನೌಕಾ ನೆಲೆ ಯೋಜನೆಯ ಜಾರಿಗೆ ಅಡ್ಡಿಯಾಗಿರುವ ಪುನರ್ವಸತಿ ಮತ್ತು ನಿರಾಶ್ರಿತರಿಗೆ ನೀಡಬೇಕಾಗಿರುವ ಪರಿಹಾರ ಕುರಿತು ಚರ್ಚಿಸಲೆಂದೇ ರಕ್ಷಣಾ ಸಚಿವರು ಇಂದು ಮುಖ್ಯಮಂತ್ರಿ, ಕಂದಾಯ ಸಚಿವರೊಂದಿಗೆ ಇಲ್ಲಿಗೆ ಆಗಮಿಸಿದ್ದರು.</p>.<p>****</p>. <h2><strong>ಬಾಗೂರು ನವಿಲೆ: ಚಳವಳಿ ಅಂತ್ಯ</strong></h2>.<p>ಚನ್ನರಾಯಪಟ್ಟಣ, ಜುಲೈ 19– ನಾಲೆಗೆ ಮಣ್ಣು ಸುರಿದು ಕಳೆದ 96 ದಿನಗಳಿಂದ ಅನಿರ್ಧಿಷ್ಟ ನೀರು ತಡೆ ಚಳವಳಿ ನಡೆಸುತ್ತಿದ್ದ ಬಾಗೂರು–ನವಿಲೆ ಸುರಂಗ ಸಂತ್ರಸ್ತ ರೈತರು ಇಂದು ಸ್ವಯಂ ಬಂಧನಕ್ಕೆ ಒಳಗಾಗಿ, ನಾಲೆಯನ್ನು ತೆರವು ಮಾಡಿದ್ದರಿಂದ ಅನಿರ್ಧಿಷ್ಟ ನೀರು ಬಂದ್ ಚಳವಳಿ ಅಂತ್ಯವಾಯಿತು.</p>.<p>ಈ ತಿಂಗಳ 14ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಗೋಪಾಲ್, ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಮುಖಂಡ ಎಚ್.ವಿ.ಅನಂತಸುಬ್ಬರಾವ್ ಅವರೂ ಸೇರಿದಂತೆ ಸುಮಾರು 100 ಜನ ಬಂಧನಕ್ಕೆ ಒಳಗಾದರು.</p>.<p>ಚನ್ನರಾಯಪಟ್ಟಣ ತಾಲ್ಲೂಕು ಮತ್ತು ಹಾಸನ ನಗರದಲ್ಲಿ ಇಂದಿನಿಂದ ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>