ಕಟಕ್, ಮಾರ್ಚ್ 22 (ಯುಎನ್ಐ) – ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಸುರಕ್ಷಿತ ಲಾಕರ್ನಲ್ಲಿ ಕಳೆದ 46 ವರ್ಷಗಳಿಂದ ಇರುವ ಮಹಾತ್ಮ ಗಾಂಧಿ ಅವರ ಚಿತಾಭಸ್ಮವನ್ನು ಪಡೆಯಲು ಬಾಪೂಜಿ ಅವರ ಮರಿ ಮೊಮ್ಮಗ ತುಷಾರ್ ಅರುಣ್ ಗಾಂಧಿ ಭಗೀರಥ ಯತ್ನವನ್ನೇ ನಡೆಸಿದ್ದಾರೆ. ಇಂದು ಅವರು ಬ್ಯಾಂಕಿಗೆ ತೆರಳಿ ಚಿತಾಭಸ್ಮವನ್ನು ನೋಡುವ ಯತ್ನ ನಡೆಸಿದರಾದರೂ ಅದು ಸಾಧ್ಯವಾಗಲಿಲ್ಲ.