<p><strong>ಅಪಪ್ರಚಾರ: ಸೋನಿಯಾ ಖಂಡನೆ</strong> </p><p>ನವದೆಹಲಿ, ಮೇ 6 (ಪಿಟಿಐ)– ತಮ್ಮ ವಿದೇಶಿ ಮೂಲದ ವಿಷಯದಲ್ಲಿ ‘ಕೀಳುಮಟ್ಟದ ಪ್ರಚಾರ’ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಭಾರತೀಯ ಜನತಾ ಪಕ್ಷವನ್ನು ತರಾಟೆಗೆ ತೆಗೆದುಕೊಂಡು, ಇಂಥ ಪ್ರಚಾರ ಯಶಸ್ವಿಯಾಗದು ಎಂಬ ವಿಶ್ವಾಸ ವ್ಯಕ್ತಪಡಿಸಿದರು. </p><p>‘ಬಿಜೆಪಿಯು ಅನುಕಂಪದ ಅಲೆಯನ್ನು ಕೃತಕವಾಗಿ ಉತ್ಪಾದಿಸಲು ಯತ್ನಿಸುತ್ತಿದೆ. ನಮ್ಮ ವಿರುದ್ಧ ಬಲು ಕೀಳುಮಟ್ಟದ ಪ್ರಚಾರವನ್ನು ಪ್ರಾರಂಭಿಸಿದೆ. ಇದು ಅವರ ಭಯ, ಅಭದ್ರತೆಯ ಭಾವನೆಯನ್ನೂ ಬಯಲುಗೊಳಿ<br>ಸುತ್ತದೆ’ ಎಂದು ಅವರು ವಿವಿಧ ರಾಜ್ಯಗಳ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರ ಸಭೆಯಲ್ಲಿ ಹೇಳಿದರು. </p><p><strong>ಬಾದಾಮಿ: ಭಾರಿ ಗಾಳಿ, ಮಳೆ</strong></p><p>ಬಾದಾಮಿ, ಮೇ 6– ಕಳೆದ ರಾತ್ರಿ ಬೀಸಿದ ಭಾರಿ ಗಾಳಿ ಹಾಗೂ ಸುರಿದ ಮಳೆಯಿಂದಾಗಿ ಓರ್ವ ಅಸುನೀಗಿದ್ದು, ಹಲವಾರು ಮರಗಳು ನೆಲಕ್ಕೆ ಉರುಳಿವೆ. </p><p>ಒಂದೇ ದಿನದಲ್ಲಿ ಸುಮಾರು 27 ಮಿ.ಮೀ. ಮಳೆಯಾಗಿದ್ದು, ಅಪಾರ ಮಾವಿನ ಫಸಲು ನೆಲಕಚ್ಚಿದೆ. ಸುಮಾರು ಮೂರು ತಾಸು ರಸ್ತೆಸಂಚಾರ ಸ್ಥಗಿತಗೊಂಡಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಪಪ್ರಚಾರ: ಸೋನಿಯಾ ಖಂಡನೆ</strong> </p><p>ನವದೆಹಲಿ, ಮೇ 6 (ಪಿಟಿಐ)– ತಮ್ಮ ವಿದೇಶಿ ಮೂಲದ ವಿಷಯದಲ್ಲಿ ‘ಕೀಳುಮಟ್ಟದ ಪ್ರಚಾರ’ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಭಾರತೀಯ ಜನತಾ ಪಕ್ಷವನ್ನು ತರಾಟೆಗೆ ತೆಗೆದುಕೊಂಡು, ಇಂಥ ಪ್ರಚಾರ ಯಶಸ್ವಿಯಾಗದು ಎಂಬ ವಿಶ್ವಾಸ ವ್ಯಕ್ತಪಡಿಸಿದರು. </p><p>‘ಬಿಜೆಪಿಯು ಅನುಕಂಪದ ಅಲೆಯನ್ನು ಕೃತಕವಾಗಿ ಉತ್ಪಾದಿಸಲು ಯತ್ನಿಸುತ್ತಿದೆ. ನಮ್ಮ ವಿರುದ್ಧ ಬಲು ಕೀಳುಮಟ್ಟದ ಪ್ರಚಾರವನ್ನು ಪ್ರಾರಂಭಿಸಿದೆ. ಇದು ಅವರ ಭಯ, ಅಭದ್ರತೆಯ ಭಾವನೆಯನ್ನೂ ಬಯಲುಗೊಳಿ<br>ಸುತ್ತದೆ’ ಎಂದು ಅವರು ವಿವಿಧ ರಾಜ್ಯಗಳ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರ ಸಭೆಯಲ್ಲಿ ಹೇಳಿದರು. </p><p><strong>ಬಾದಾಮಿ: ಭಾರಿ ಗಾಳಿ, ಮಳೆ</strong></p><p>ಬಾದಾಮಿ, ಮೇ 6– ಕಳೆದ ರಾತ್ರಿ ಬೀಸಿದ ಭಾರಿ ಗಾಳಿ ಹಾಗೂ ಸುರಿದ ಮಳೆಯಿಂದಾಗಿ ಓರ್ವ ಅಸುನೀಗಿದ್ದು, ಹಲವಾರು ಮರಗಳು ನೆಲಕ್ಕೆ ಉರುಳಿವೆ. </p><p>ಒಂದೇ ದಿನದಲ್ಲಿ ಸುಮಾರು 27 ಮಿ.ಮೀ. ಮಳೆಯಾಗಿದ್ದು, ಅಪಾರ ಮಾವಿನ ಫಸಲು ನೆಲಕಚ್ಚಿದೆ. ಸುಮಾರು ಮೂರು ತಾಸು ರಸ್ತೆಸಂಚಾರ ಸ್ಥಗಿತಗೊಂಡಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>