<p><strong>ಪರಿಶಿಷ್ಟರಿಗೆ ಮೀಸಲಾತಿ ಇನ್ನೂ ಹತ್ತು ವರ್ಷ</strong></p><p>ನವದೆಹಲಿ, ಅ. 25– ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒದಗಿಸಲಾಗಿರುವ ಮೀಸಲಾತಿ ವ್ಯವಸ್ಥೆಯನ್ನು ಮತ್ತೆ ಹತ್ತು ವರ್ಷಗಳವರೆಗೆ ವಿಸ್ತರಿಸಲು ಅವಶ್ಯ ಕಾಯ್ದೆಯೊಂದನ್ನು ಕೇಂದ್ರ ಸರ್ಕಾರ ತರಲಿದೆ.</p><p>ಅದೇ ರೀತಿ ಈಗ ಕೆಲವು ರಾಜ್ಯಗಳಲ್ಲಿರುವ ಶೇ 50ಕ್ಕೂ ಹೆಚ್ಚಿನ ಮೀಸಲಾತಿ ವ್ಯವಸ್ಥೆಯನ್ನು ಸಕ್ರಮಗೊಳಿಸಲು ಅವಶ್ಯ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿದೆ. </p><p>ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಇಂದು ಸೆಂಟ್ರಲ್ ಹಾಲ್ನಲ್ಲಿ ಹದಿಮೂರನೇ ಲೋಕಸಭೆಯ ಅಸ್ತಿತ್ವದ ನಂತರ ಆರಂಭಗೊಂಡ ಸಂಸತ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತ ನೂತನ ಸರ್ಕಾರದ ಗೊತ್ತುಗುರಿಗಳ ಬಗೆಗೆ ಬೆಳಕು ಚೆಲ್ಲಿದರು.</p><p><strong>ಲವಲವಿಕೆ ವಾತಾವರಣದಲ್ಲಿ ಶಾಸಕರ ಪ್ರಮಾಣವಚನ</strong></p><p>ಬೆಂಗಳೂರು, ಅ. 25– ಹನ್ನೊಂದನೇ ವಿಧಾನಸಭೆ ಕಲಾಪ ಇಂದು ಪ್ರಾರಂಭವಾದಾಗ ಹೊಸ ಶಾಸಕರಲ್ಲಿ ಮತ್ತು ಸಚಿವರಲ್ಲಿ ಎಲ್ಲಿಲ್ಲದ ಉತ್ಸಾಹ, ಲವಲವಿಕೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಎದುರು 207 ಮಂದಿ ಶಾಸಕರಾಗಿ ಪ್ರಮಾಣವಚನ<br>ಸ್ವೀಕರಿಸಿದರು.</p><p>ವಿಧಾನಸಭಾಧ್ಯಕ್ಷರ ಆಯ್ಕೆ ಇನ್ನೂ ಆಗಿಲ್ಲದ ಕಾರಣ, ಹಿರಿಯ ಶಾಸಕ ಅಜೀಜ್ ಸೇಟ್ ಅವರು ಹಂಗಾಮಿಯಾಗಿ ಆ ಸ್ಥಾನವನ್ನು ಅಲಂಕರಿಸಿ ಕಲಾಪ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪರಿಶಿಷ್ಟರಿಗೆ ಮೀಸಲಾತಿ ಇನ್ನೂ ಹತ್ತು ವರ್ಷ</strong></p><p>ನವದೆಹಲಿ, ಅ. 25– ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒದಗಿಸಲಾಗಿರುವ ಮೀಸಲಾತಿ ವ್ಯವಸ್ಥೆಯನ್ನು ಮತ್ತೆ ಹತ್ತು ವರ್ಷಗಳವರೆಗೆ ವಿಸ್ತರಿಸಲು ಅವಶ್ಯ ಕಾಯ್ದೆಯೊಂದನ್ನು ಕೇಂದ್ರ ಸರ್ಕಾರ ತರಲಿದೆ.</p><p>ಅದೇ ರೀತಿ ಈಗ ಕೆಲವು ರಾಜ್ಯಗಳಲ್ಲಿರುವ ಶೇ 50ಕ್ಕೂ ಹೆಚ್ಚಿನ ಮೀಸಲಾತಿ ವ್ಯವಸ್ಥೆಯನ್ನು ಸಕ್ರಮಗೊಳಿಸಲು ಅವಶ್ಯ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿದೆ. </p><p>ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಇಂದು ಸೆಂಟ್ರಲ್ ಹಾಲ್ನಲ್ಲಿ ಹದಿಮೂರನೇ ಲೋಕಸಭೆಯ ಅಸ್ತಿತ್ವದ ನಂತರ ಆರಂಭಗೊಂಡ ಸಂಸತ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತ ನೂತನ ಸರ್ಕಾರದ ಗೊತ್ತುಗುರಿಗಳ ಬಗೆಗೆ ಬೆಳಕು ಚೆಲ್ಲಿದರು.</p><p><strong>ಲವಲವಿಕೆ ವಾತಾವರಣದಲ್ಲಿ ಶಾಸಕರ ಪ್ರಮಾಣವಚನ</strong></p><p>ಬೆಂಗಳೂರು, ಅ. 25– ಹನ್ನೊಂದನೇ ವಿಧಾನಸಭೆ ಕಲಾಪ ಇಂದು ಪ್ರಾರಂಭವಾದಾಗ ಹೊಸ ಶಾಸಕರಲ್ಲಿ ಮತ್ತು ಸಚಿವರಲ್ಲಿ ಎಲ್ಲಿಲ್ಲದ ಉತ್ಸಾಹ, ಲವಲವಿಕೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಎದುರು 207 ಮಂದಿ ಶಾಸಕರಾಗಿ ಪ್ರಮಾಣವಚನ<br>ಸ್ವೀಕರಿಸಿದರು.</p><p>ವಿಧಾನಸಭಾಧ್ಯಕ್ಷರ ಆಯ್ಕೆ ಇನ್ನೂ ಆಗಿಲ್ಲದ ಕಾರಣ, ಹಿರಿಯ ಶಾಸಕ ಅಜೀಜ್ ಸೇಟ್ ಅವರು ಹಂಗಾಮಿಯಾಗಿ ಆ ಸ್ಥಾನವನ್ನು ಅಲಂಕರಿಸಿ ಕಲಾಪ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>