ಕರಡುಯೋಜನೆಯಲ್ಲಿ ಮಧ್ಯಂತರ ತೀರ್ಪಿನಂತೆ ತಮಿಳುನಾಡಿಗೆ ನೀಡಬೇಕಾದ 205 ಟಿಎಂಸಿ ನೀರಿನ ಪ್ರಮಾಣವನ್ನು 180 ಟಿಎಂಸಿಗೆ ಇಳಿಸಲಾಗಿಲ್ಲ. ಬಿಡಬೇಕಾದ ಒಟ್ಟು ನೀರಿನ ಪ್ರಮಾಣವನ್ನು ಕಾಲಸ ಅಂತ್ಯದ ವೇಳೆಗೆ ಲೆಕ್ಕ ಹಾಕಬೇಕು, ವಾರ ಅಥವಾ ತಿಂಗಳಿನ ಅಂತ್ಯದ ವೇಳೆಗಲ್ಲ ಎಂದು ಕರ್ನಾಟಕ ನೀರಾವರಿ ಸಚಿವ ಕೆ.ಎನ್. ನಾಗೇಗೌಡ ಕರಡನ್ನು ಟೀಕಿಸಿದ್ದಾರೆ.