<p><strong>ಭೀಮಾ: ರಾಜ್ಯದಿಂದಲೇ ಬ್ಯಾರೇಜ್ಗೆ ಕೃಷ್ಣ ಸಲಹೆ</strong></p>.<p>ಕಲ್ಬುರ್ಗಿ, ಫೆ. 13– ಬತ್ತಿರುವ ಭೀಮಾ ನದಿಗೆ ಮಹಾರಾಷ್ಟ್ರವಲ್ಲದೆ ರಾಜ್ಯದ ನಾರಾಯಣಪುರ ಅಣೆಕಟ್ಟೆಯಿಂದಲೂ ನೀರು ಬಿಡಿಸುವುದಾಗಿ ಇಂದು ಇಲ್ಲಿ ಹೇಳಿದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಮಹಾರಾಷ್ಟ್ರಕ್ಕೆ ತೊಂದರೆ ಕೊಡದಿರಲು ಕೆಲವು ಬ್ಯಾರೇಜ್ಗಳನ್ನು ನಿರ್ಮಾಣ ಮಾಡಿ ನಾವೇ ನೀರು ಪೂರೈಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.</p>.<p>ಮಹಾರಾಷ್ಟ್ರ ಸರ್ಕಾರ ಭೀಮಾ ನದಿಗೆ ಬಿಡಲು ಒಪ್ಪಿರುವ ನೀರಿನ ಪ್ರಮಾಣ ಸಾಲದಿರುವುದರಿಂದ ನಾರಾಯಣಪುರ ಅಣೆಕಟ್ಟೆಯಿಂದ ನೀರು ಬಿಡಲಾಗುವುದೇ? ಎಂದು ವರದಿಗಾರರು ಕೇಳಿದಾಗ, ಅಲ್ಲಿಂದಲೂ ಬಿಡಿಸುವುದಾಗಿ ತಿಳಿಸಿದರು.</p>.<p><strong>ಪ್ರತಿಕೂಲ ಪರಿಣಾಮ ಬೀರುವ ಹೊಸ ಕಂಪ್ಯೂಟರ್ ವೈರಸ್</strong></p>.<p>ಬೆಂಗಳೂರು, ಫೆ. 13– ಹೋದ ವರ್ಷವಷ್ಟೆ ‘ಐ ಲವ್ ಯೂ’ ಎಂಬ ವೈರಸ್ ಆಕ್ರಮಣದಿಂದ ಕಂಗೆಟ್ಟಿದ್ದ ಕಂಪ್ಯೂಟರ್ ರಂಗ, ಈಗ ಇನ್ನೊಂದು ಹೊಸ ವೈರಸ್ಗೆ ತುತ್ತಾಗಿದೆ.</p>.<p>‘ವಿಬಿಎಸ್/ ಎಸ್ಎಸ್ಟಿ’ ಎಂಬ ವೈರಸ್ ದಾಳಿ ಇಟ್ಟಿದ್ದು, ಇದು ಸೋಮವಾರ ಅಮೆರಿಕದಲ್ಲಿ ಪತ್ತೆ ಆಗುವ ಮೂಲಕ ಕಂಪ್ಯೂಟರ್ ತಜ್ಞರ ನಿದ್ರೆ ಕೆಡಿಸಿದೆ.</p>.<p>ಟೆನಿಸ್ ತಾರೆ ಅನ್ನಾ ಕುರ್ನಿಕೋವಾ ಅವರ ಚಿತ್ರವನ್ನು ತೆರೆದು ತೋರಿಸುವ ಆಮಿಷ ಒಡ್ಡುವ ಈ ಹೊಸ ವೈರಸ್ನಿಂದ ‘ಇ–ಮೇಲ್’ ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂಬ ಭಯ ವ್ಯಕ್ತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೀಮಾ: ರಾಜ್ಯದಿಂದಲೇ ಬ್ಯಾರೇಜ್ಗೆ ಕೃಷ್ಣ ಸಲಹೆ</strong></p>.<p>ಕಲ್ಬುರ್ಗಿ, ಫೆ. 13– ಬತ್ತಿರುವ ಭೀಮಾ ನದಿಗೆ ಮಹಾರಾಷ್ಟ್ರವಲ್ಲದೆ ರಾಜ್ಯದ ನಾರಾಯಣಪುರ ಅಣೆಕಟ್ಟೆಯಿಂದಲೂ ನೀರು ಬಿಡಿಸುವುದಾಗಿ ಇಂದು ಇಲ್ಲಿ ಹೇಳಿದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಮಹಾರಾಷ್ಟ್ರಕ್ಕೆ ತೊಂದರೆ ಕೊಡದಿರಲು ಕೆಲವು ಬ್ಯಾರೇಜ್ಗಳನ್ನು ನಿರ್ಮಾಣ ಮಾಡಿ ನಾವೇ ನೀರು ಪೂರೈಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.</p>.<p>ಮಹಾರಾಷ್ಟ್ರ ಸರ್ಕಾರ ಭೀಮಾ ನದಿಗೆ ಬಿಡಲು ಒಪ್ಪಿರುವ ನೀರಿನ ಪ್ರಮಾಣ ಸಾಲದಿರುವುದರಿಂದ ನಾರಾಯಣಪುರ ಅಣೆಕಟ್ಟೆಯಿಂದ ನೀರು ಬಿಡಲಾಗುವುದೇ? ಎಂದು ವರದಿಗಾರರು ಕೇಳಿದಾಗ, ಅಲ್ಲಿಂದಲೂ ಬಿಡಿಸುವುದಾಗಿ ತಿಳಿಸಿದರು.</p>.<p><strong>ಪ್ರತಿಕೂಲ ಪರಿಣಾಮ ಬೀರುವ ಹೊಸ ಕಂಪ್ಯೂಟರ್ ವೈರಸ್</strong></p>.<p>ಬೆಂಗಳೂರು, ಫೆ. 13– ಹೋದ ವರ್ಷವಷ್ಟೆ ‘ಐ ಲವ್ ಯೂ’ ಎಂಬ ವೈರಸ್ ಆಕ್ರಮಣದಿಂದ ಕಂಗೆಟ್ಟಿದ್ದ ಕಂಪ್ಯೂಟರ್ ರಂಗ, ಈಗ ಇನ್ನೊಂದು ಹೊಸ ವೈರಸ್ಗೆ ತುತ್ತಾಗಿದೆ.</p>.<p>‘ವಿಬಿಎಸ್/ ಎಸ್ಎಸ್ಟಿ’ ಎಂಬ ವೈರಸ್ ದಾಳಿ ಇಟ್ಟಿದ್ದು, ಇದು ಸೋಮವಾರ ಅಮೆರಿಕದಲ್ಲಿ ಪತ್ತೆ ಆಗುವ ಮೂಲಕ ಕಂಪ್ಯೂಟರ್ ತಜ್ಞರ ನಿದ್ರೆ ಕೆಡಿಸಿದೆ.</p>.<p>ಟೆನಿಸ್ ತಾರೆ ಅನ್ನಾ ಕುರ್ನಿಕೋವಾ ಅವರ ಚಿತ್ರವನ್ನು ತೆರೆದು ತೋರಿಸುವ ಆಮಿಷ ಒಡ್ಡುವ ಈ ಹೊಸ ವೈರಸ್ನಿಂದ ‘ಇ–ಮೇಲ್’ ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂಬ ಭಯ ವ್ಯಕ್ತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>