<p>ಹಠಾತ್ ಭೇಟಿ – ಸಚಿವರಿಗೆ ದೇವೇಗೌಡ ಸೂಚನೆ ರಾಜ್ಯದಲ್ಲಿ ಆಡಳಿತ ಚುರುಕಿಗೆ ತೀವ್ರ ಕ್ರಮ</p>.<p>ನವದೆಹಲಿ, ಡಿ. 22– ತಾಲ್ಲೂಕು ಮಟ್ಟದಲ್ಲಿ ಆಡಳಿತವೇ ಇಲ್ಲ ಎನ್ನುವಂತಿರುವ ಕರ್ನಾಟಕದಲ್ಲಿನ ಸರ್ಕಾರಿ ಯಂತ್ರವನ್ನು ಚುರುಕುಗೊಳಿಸಿ ಜನಸಾಮಾನ್ಯರಿಗೆ ಸ್ಪಂದಿಸುವಂತೆ ಮಾಡಲು ತಿಂಗಳಿಗೆ<br />ತಾವು ಹತ್ತು ದಿನ ಪ್ರವಾಸ ಮಾಡುವುದಲ್ಲದೆ ಪ್ರತಿಯೊಬ್ಬ ಸಚಿವರು ಮತ್ತು ಇಲಾಖೆಗಳ ಮುಖ್ಯಸ್ಥರು ಆಗಿಂದಾಗ್ಗೆ ಪ್ರವಾಸ ಮಾಡಿ ಕಚೇರಿಗಳಿಗೆ ಹಠಾತ್ ಭೇಟಿ ನೀಡುವ ಮೂಲಕ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರು ಇಂದು ಇಲ್ಲಿ ತಿಳಿಸಿದರು.</p>.<p>ದೆಹಲಿಯಲ್ಲಿ ಇರುವ ಕರ್ನಾಟಕ ಪತ್ರಕರ್ತರನ್ನು ಕರೆದು ತಮ್ಮ ಸರ್ಕಾರದ ಮುನ್ನೋಟದ ಬಗೆಗೆ ಮಾತನಾಡಿದ ಅವರು, ಸಚಿವರು ಮತ್ತು ಹಿರಿಯ ಅಧಿಕಾರಿಗಳು ತಮ್ಮ ಪ್ರವಾಸ ಕಾಲದಲ್ಲಿ ನಡೆಸುವ ತನಿಖೆಯಿಂದ ಗೊತ್ತಾಗುವ ಮಾಹಿತಿಯನ್ನು ತಮಗೆ ವರದಿ ಮಾಡು<br />ವರು, ತಪ್ಪಿತಸ್ಥ ಅಧಿಕಾರಿ ಯಾವುದೇ ಜಾತಿಗೆ ಸೇರಿದ್ದರೂ ಯಾವ ವಿನಾಯಿತಿ<br />ಯನ್ನೂ ನೀಡದೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.</p>.<p>ಶಂಕರಾನಂದ, ಕಲ್ಪನಾಥ ರಾಯ್, ಠಾಕೂರ್ ರಾಜೀನಾಮೆ</p>.<p>ನವದೆಹಲಿ, ಡಿ. 22 (ಪಿಟಿಐ, ಯುಎನ್ಐ)– ಹಗರಣಗಳಲ್ಲಿ ಸಿಲುಕಿ ದೋಷಾರೋಪಣೆಗೆ ಒಳಗಾಗಿರುವ ಕೇಂದ್ರ ಆರೋಗ್ಯ ಸಚಿವ ಬಿ. ಶಂಕರಾನಂದ, ಆಹಾರ ಖಾತೆ ರಾಜ್ಯ ಸಚಿವ ಕಲ್ಪನಾಥ ರಾಯ್ ಹಾಗೂ ಗ್ರಾಮೀಣ ಅಭಿವೃದ್ಧಿ ಖಾತೆ ರಾಜ್ಯ ಸಚಿವ ರಾಮೇಶ್ವರ ಠಾಕೂರ್ ಅವರನ್ನು ಪ್ರಧಾನಿ ಅವರು ಇಂದು ತಮ್ಮ ಸಂಪುಟದಿಂದ ಕೈಬಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಠಾತ್ ಭೇಟಿ – ಸಚಿವರಿಗೆ ದೇವೇಗೌಡ ಸೂಚನೆ ರಾಜ್ಯದಲ್ಲಿ ಆಡಳಿತ ಚುರುಕಿಗೆ ತೀವ್ರ ಕ್ರಮ</p>.<p>ನವದೆಹಲಿ, ಡಿ. 22– ತಾಲ್ಲೂಕು ಮಟ್ಟದಲ್ಲಿ ಆಡಳಿತವೇ ಇಲ್ಲ ಎನ್ನುವಂತಿರುವ ಕರ್ನಾಟಕದಲ್ಲಿನ ಸರ್ಕಾರಿ ಯಂತ್ರವನ್ನು ಚುರುಕುಗೊಳಿಸಿ ಜನಸಾಮಾನ್ಯರಿಗೆ ಸ್ಪಂದಿಸುವಂತೆ ಮಾಡಲು ತಿಂಗಳಿಗೆ<br />ತಾವು ಹತ್ತು ದಿನ ಪ್ರವಾಸ ಮಾಡುವುದಲ್ಲದೆ ಪ್ರತಿಯೊಬ್ಬ ಸಚಿವರು ಮತ್ತು ಇಲಾಖೆಗಳ ಮುಖ್ಯಸ್ಥರು ಆಗಿಂದಾಗ್ಗೆ ಪ್ರವಾಸ ಮಾಡಿ ಕಚೇರಿಗಳಿಗೆ ಹಠಾತ್ ಭೇಟಿ ನೀಡುವ ಮೂಲಕ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರು ಇಂದು ಇಲ್ಲಿ ತಿಳಿಸಿದರು.</p>.<p>ದೆಹಲಿಯಲ್ಲಿ ಇರುವ ಕರ್ನಾಟಕ ಪತ್ರಕರ್ತರನ್ನು ಕರೆದು ತಮ್ಮ ಸರ್ಕಾರದ ಮುನ್ನೋಟದ ಬಗೆಗೆ ಮಾತನಾಡಿದ ಅವರು, ಸಚಿವರು ಮತ್ತು ಹಿರಿಯ ಅಧಿಕಾರಿಗಳು ತಮ್ಮ ಪ್ರವಾಸ ಕಾಲದಲ್ಲಿ ನಡೆಸುವ ತನಿಖೆಯಿಂದ ಗೊತ್ತಾಗುವ ಮಾಹಿತಿಯನ್ನು ತಮಗೆ ವರದಿ ಮಾಡು<br />ವರು, ತಪ್ಪಿತಸ್ಥ ಅಧಿಕಾರಿ ಯಾವುದೇ ಜಾತಿಗೆ ಸೇರಿದ್ದರೂ ಯಾವ ವಿನಾಯಿತಿ<br />ಯನ್ನೂ ನೀಡದೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.</p>.<p>ಶಂಕರಾನಂದ, ಕಲ್ಪನಾಥ ರಾಯ್, ಠಾಕೂರ್ ರಾಜೀನಾಮೆ</p>.<p>ನವದೆಹಲಿ, ಡಿ. 22 (ಪಿಟಿಐ, ಯುಎನ್ಐ)– ಹಗರಣಗಳಲ್ಲಿ ಸಿಲುಕಿ ದೋಷಾರೋಪಣೆಗೆ ಒಳಗಾಗಿರುವ ಕೇಂದ್ರ ಆರೋಗ್ಯ ಸಚಿವ ಬಿ. ಶಂಕರಾನಂದ, ಆಹಾರ ಖಾತೆ ರಾಜ್ಯ ಸಚಿವ ಕಲ್ಪನಾಥ ರಾಯ್ ಹಾಗೂ ಗ್ರಾಮೀಣ ಅಭಿವೃದ್ಧಿ ಖಾತೆ ರಾಜ್ಯ ಸಚಿವ ರಾಮೇಶ್ವರ ಠಾಕೂರ್ ಅವರನ್ನು ಪ್ರಧಾನಿ ಅವರು ಇಂದು ತಮ್ಮ ಸಂಪುಟದಿಂದ ಕೈಬಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>