<p><strong>ಕಡೆಗೂ ಅದ್ದೂರಿ ಜಂಬೂ ಸವಾರಿ: ಲಕ್ಷಾಂತರ ಜನರ ವೀಕ್ಷಣೆ</strong></p><p>ಮೈಸೂರು, ಅ. 1– ಕಡೇ ಗಳಿಗೆಯ ಅಡಚಣೆಗಳ ನಡುವೆಯೂ ದಸರಾ ಜಂಬೂ ಸವಾರಿ ಇಂದು ಮಧ್ಯಾಹ್ನ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಆರಂಭವಾಯಿತು. ನಂತರ ಸುಸೂತ್ರವಾಗಿ ನಡೆಯಿತು.</p><p>ಆನೆ ‘ಬಲರಾಮ’ನ ಮೇಲೆ ಚಿನ್ನದ ಅಂಬಾರಿಯನ್ನು ಕಟ್ಟಲು ಬೇಕಾದ ಹಗ್ಗವನ್ನು ಕೊಡಲು ಕಡೇ ಗಳಿಗೆಯವರೆಗೂ ಸತಾಯಿಸಿದ ಅರಮನೆ ಸಿಬ್ಬಂದಿ, ಅಂಬಾರಿಯನ್ನು ಸರಿಯಾಗಿ ಕಟ್ಟಲಾಗದೆ, ಎರಡನೆಯ ಬಾರಿ ಅದರ ಸಿದ್ಧತೆ ಮೊದಲಾದ ಅಡಚಣೆಗಳು ಎದುರಾದುವು.</p><p>ಬೆಳಿಗ್ಗೆಯೇ ಮೈಸೂರಿನಲ್ಲಿ ಹಬ್ಬದ ಸಡಗರ. ಮಧ್ಯಾಹ್ನ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ವಿಜಯದಶಮಿಯ ದಿನವಾದ ಇಂದು ವಿಧ್ಯುಕ್ತವಾಗಿ ಜಂಬೂಸವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.</p>.<p><strong>ದೋಣಿ ಮುಳುಗಿ ರಾಜ್ಯದ 16 ಯಾತ್ರಿಗಳ ಸಾವು</strong></p><p>ನವದೆಹಲಿ, ಅ. 1– ಉತ್ತರ ಭಾರತದ ಪ್ರವಾಸಕ್ಕೆ ಬಂದಿದ್ದ ಕರ್ನಾಟಕದ 36 ಮಂದಿ ಯಾತ್ರಾರ್ಥಿಗಳಿದ್ದ ದೋಣಿಯೊಂದು ಬುಧವಾರ ಬೆಳಿಗ್ಗೆ ವಾರಾಣಸಿಯ ಗಂಗಾ ನಂದಿಯಲ್ಲಿ ಮುಳುಗಿದ ದುರಂತದಲ್ಲಿ 16 ಮಂದಿ ಸತ್ತಿರುವುದಾಗಿ ಶಂಕಿಸಲಾಗಿದೆ.</p><p>ಇದುವರೆಗೆ ಏಳು ಮಂದಿಯ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಇನ್ನೂ ಒಂಬತ್ತು ಮಂದಿ ಕಣ್ಮರೆಯಾಗಿದ್ದು ಅವರ ಮೃತ ದೇಹಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ. </p><p>ಸತ್ತಿರುವವರಲ್ಲಿ ಬೆಂಗಳೂರಿನ ಸಂಜಯನಗರ, ಜಯನಗರ ಮತ್ತು ಹುಬ್ಬಳ್ಳಿಯ ಅರವಿಂದ ನಗರ ಕಾರ್ಪೋರೇಷನ್ ಬ್ಯಾಂಕಿನ ಸಿಬ್ಬಂದಿ ಮತ್ತು ಕುಟುಂಬಕ್ಕೆ ಸೇರಿದವರು ಎಂದು ವಾರಾಣಸಿಯ ಜಿಲ್ಲಾಧಿಕಾರಿ ಎ.ಕೆ. ಅವಸ್ಥಿ ಅವರು ತಮ್ಮನ್ನು ಇಲ್ಲಿಂದ ಸಂಪರ್ಕಿಸಿದ ‘ಪ್ರಜಾವಾಣಿ’ಗೆ ವಿವರ ನೀಡಿದರು.</p><p>ಬೆಳಿಗ್ಗೆ 10.45ರಲ್ಲಿ ಗಂಗಾ ನದಿಯ ಶಿರಾಲ ಘಾಟ್ ಬಳಿ ದೋಣಿ ಹೋಗುವಾಗ ಇದ್ದಕ್ಕಿದ್ದಂತೆ ನದಿಯಲ್ಲಿ ನೀರಿನ ರಭಸ ಹೆಚ್ಚಾಗಿ ಸೇತುವೆಯ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದು ಮುಳುಗಿತು ಎಂದು ಜಿಲ್ಲಾಧಿಕಾರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೆಗೂ ಅದ್ದೂರಿ ಜಂಬೂ ಸವಾರಿ: ಲಕ್ಷಾಂತರ ಜನರ ವೀಕ್ಷಣೆ</strong></p><p>ಮೈಸೂರು, ಅ. 1– ಕಡೇ ಗಳಿಗೆಯ ಅಡಚಣೆಗಳ ನಡುವೆಯೂ ದಸರಾ ಜಂಬೂ ಸವಾರಿ ಇಂದು ಮಧ್ಯಾಹ್ನ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಆರಂಭವಾಯಿತು. ನಂತರ ಸುಸೂತ್ರವಾಗಿ ನಡೆಯಿತು.</p><p>ಆನೆ ‘ಬಲರಾಮ’ನ ಮೇಲೆ ಚಿನ್ನದ ಅಂಬಾರಿಯನ್ನು ಕಟ್ಟಲು ಬೇಕಾದ ಹಗ್ಗವನ್ನು ಕೊಡಲು ಕಡೇ ಗಳಿಗೆಯವರೆಗೂ ಸತಾಯಿಸಿದ ಅರಮನೆ ಸಿಬ್ಬಂದಿ, ಅಂಬಾರಿಯನ್ನು ಸರಿಯಾಗಿ ಕಟ್ಟಲಾಗದೆ, ಎರಡನೆಯ ಬಾರಿ ಅದರ ಸಿದ್ಧತೆ ಮೊದಲಾದ ಅಡಚಣೆಗಳು ಎದುರಾದುವು.</p><p>ಬೆಳಿಗ್ಗೆಯೇ ಮೈಸೂರಿನಲ್ಲಿ ಹಬ್ಬದ ಸಡಗರ. ಮಧ್ಯಾಹ್ನ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ವಿಜಯದಶಮಿಯ ದಿನವಾದ ಇಂದು ವಿಧ್ಯುಕ್ತವಾಗಿ ಜಂಬೂಸವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.</p>.<p><strong>ದೋಣಿ ಮುಳುಗಿ ರಾಜ್ಯದ 16 ಯಾತ್ರಿಗಳ ಸಾವು</strong></p><p>ನವದೆಹಲಿ, ಅ. 1– ಉತ್ತರ ಭಾರತದ ಪ್ರವಾಸಕ್ಕೆ ಬಂದಿದ್ದ ಕರ್ನಾಟಕದ 36 ಮಂದಿ ಯಾತ್ರಾರ್ಥಿಗಳಿದ್ದ ದೋಣಿಯೊಂದು ಬುಧವಾರ ಬೆಳಿಗ್ಗೆ ವಾರಾಣಸಿಯ ಗಂಗಾ ನಂದಿಯಲ್ಲಿ ಮುಳುಗಿದ ದುರಂತದಲ್ಲಿ 16 ಮಂದಿ ಸತ್ತಿರುವುದಾಗಿ ಶಂಕಿಸಲಾಗಿದೆ.</p><p>ಇದುವರೆಗೆ ಏಳು ಮಂದಿಯ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಇನ್ನೂ ಒಂಬತ್ತು ಮಂದಿ ಕಣ್ಮರೆಯಾಗಿದ್ದು ಅವರ ಮೃತ ದೇಹಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ. </p><p>ಸತ್ತಿರುವವರಲ್ಲಿ ಬೆಂಗಳೂರಿನ ಸಂಜಯನಗರ, ಜಯನಗರ ಮತ್ತು ಹುಬ್ಬಳ್ಳಿಯ ಅರವಿಂದ ನಗರ ಕಾರ್ಪೋರೇಷನ್ ಬ್ಯಾಂಕಿನ ಸಿಬ್ಬಂದಿ ಮತ್ತು ಕುಟುಂಬಕ್ಕೆ ಸೇರಿದವರು ಎಂದು ವಾರಾಣಸಿಯ ಜಿಲ್ಲಾಧಿಕಾರಿ ಎ.ಕೆ. ಅವಸ್ಥಿ ಅವರು ತಮ್ಮನ್ನು ಇಲ್ಲಿಂದ ಸಂಪರ್ಕಿಸಿದ ‘ಪ್ರಜಾವಾಣಿ’ಗೆ ವಿವರ ನೀಡಿದರು.</p><p>ಬೆಳಿಗ್ಗೆ 10.45ರಲ್ಲಿ ಗಂಗಾ ನದಿಯ ಶಿರಾಲ ಘಾಟ್ ಬಳಿ ದೋಣಿ ಹೋಗುವಾಗ ಇದ್ದಕ್ಕಿದ್ದಂತೆ ನದಿಯಲ್ಲಿ ನೀರಿನ ರಭಸ ಹೆಚ್ಚಾಗಿ ಸೇತುವೆಯ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದು ಮುಳುಗಿತು ಎಂದು ಜಿಲ್ಲಾಧಿಕಾರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>