ನವದೆಹಲಿ, ನ. 21– ಡಿಎಂಕೆಯ ಮೂವರು ಸಚಿವರನ್ನು ಸರ್ಕಾರದಿಂದ ಕೈಬಿಡಬೇಕೆಂಬ ಕಾಂಗ್ರೆಸ್ ಪಕ್ಷದ ಬೇಡಿಕೆಯನ್ನು ಸಂಯುಕ್ತ ರಂಗ ತಳ್ಳಿಹಾಕಿದೆ. ಈಗ ಉದ್ಭವಿಸಿರುವ ಬಿಕ್ಕಟ್ಟಿಗೆ ಸೀತಾರಾಂ ಕೇಸರಿ ಅವರ ಜೊತೆ ಚರ್ಚಿಸಿ ಪರಿಹಾರ ಕಂಡುಹಿಡಿಯಲು ಸಂಯುಕ್ತರಂಗದ ಪ್ರಮುಖರ ಸಭೆಯು ಪ್ರಧಾನಿ ಐ.ಕೆ. ಗುಜ್ರಾಲ್ ಅವರಿಗೆ ಇಂದು ಅಧಿಕಾರ ನೀಡಿತು.