<p><strong>ಕೆಪಿಎಸ್ಸಿ ನಿರ್ಧಾರ ತಂದಿರುವ ಆತಂಕ</strong></p>.<p>ಬೆಂಗಳೂರು, ಜೂನ್ 9– ಗ್ರಾಮೀಣ ಕೃಪಾಂಕ ನೀಡುವ ವಿಚಾರ ಇನ್ನೂ ಇತ್ಯರ್ಥವಾಗದಿರುವಾಗಲೇ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಯ ಸಂದರ್ಶನ ನಡೆಸಲು ಮುಂದಾಗಿರುವುದು ಕೃಪಾಂಕ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳನ್ನು ಆತಂಕಕ್ಕೆ ಈಡುಮಾಡಿದೆ.</p>.<p>ಸುಪ್ರೀಂ ಕೋರ್ಟ್ ಗ್ರಾಮೀಣ ಕೃಪಾಂಕ ರದ್ದುಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕುರಿತು ಅಧ್ಯಯನ ನಡೆಸಲು ಎರಡೂವರೆ ತಿಂಗಳ ಹಿಂದೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಾಮಕೃಷ್ಣ ನೇತೃತ್ವದ ಏಕಸದಸ್ಯ ಆಯೋಗವನ್ನು ರಚಿಸಿತು.</p>.<p>ನಂತರದ ಬೆಳವಣಿಗೆಗಳಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ‘ಗ್ರಾಮೀಣ ಕೃಪಾಂಕ ನೀಡುವ ಕುರಿತು ಏಕಸದಸ್ಯ ಆಯೋಗ ವರದಿ ನೀಡುವವರೆಗೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.</p>.<p><strong>ಭೀಷ್ಮ ಸಹಾನಿಗೆ ‘ಶಲಾಕ ಸಮ್ಮಾನ್’</strong></p>.<p>ನವದೆಹಲಿ, ಜೂನ್ 9 – ಹಿಂದಿ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಖ್ಯಾತ ಬರಹಗಾರ ಭೀಷ್ಮ ಸಹಾನಿ ಅವರಿಗೆ ದೆಹಲಿ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಯಾದ ‘ಶಲಾಕ ಸಮ್ಮಾನ್’ ಅನ್ನು ನೀಡಿ ಇಂದು ಗೌರವಿಸಲಾಯಿತು.</p>.<p>ಹಿಂದಿ ಅಕಾಡೆಮಿ ಸ್ಥಾಪಿಸಿರುವ ಈ ಪ್ರಶಸ್ತಿಯಲ್ಲಿ 1.11 ಲಕ್ಷ ರೂಪಾಯಿ ನಗದು ಕೂಡಾ ಸೇರಿರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಪಿಎಸ್ಸಿ ನಿರ್ಧಾರ ತಂದಿರುವ ಆತಂಕ</strong></p>.<p>ಬೆಂಗಳೂರು, ಜೂನ್ 9– ಗ್ರಾಮೀಣ ಕೃಪಾಂಕ ನೀಡುವ ವಿಚಾರ ಇನ್ನೂ ಇತ್ಯರ್ಥವಾಗದಿರುವಾಗಲೇ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಯ ಸಂದರ್ಶನ ನಡೆಸಲು ಮುಂದಾಗಿರುವುದು ಕೃಪಾಂಕ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳನ್ನು ಆತಂಕಕ್ಕೆ ಈಡುಮಾಡಿದೆ.</p>.<p>ಸುಪ್ರೀಂ ಕೋರ್ಟ್ ಗ್ರಾಮೀಣ ಕೃಪಾಂಕ ರದ್ದುಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕುರಿತು ಅಧ್ಯಯನ ನಡೆಸಲು ಎರಡೂವರೆ ತಿಂಗಳ ಹಿಂದೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಾಮಕೃಷ್ಣ ನೇತೃತ್ವದ ಏಕಸದಸ್ಯ ಆಯೋಗವನ್ನು ರಚಿಸಿತು.</p>.<p>ನಂತರದ ಬೆಳವಣಿಗೆಗಳಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ‘ಗ್ರಾಮೀಣ ಕೃಪಾಂಕ ನೀಡುವ ಕುರಿತು ಏಕಸದಸ್ಯ ಆಯೋಗ ವರದಿ ನೀಡುವವರೆಗೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.</p>.<p><strong>ಭೀಷ್ಮ ಸಹಾನಿಗೆ ‘ಶಲಾಕ ಸಮ್ಮಾನ್’</strong></p>.<p>ನವದೆಹಲಿ, ಜೂನ್ 9 – ಹಿಂದಿ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಖ್ಯಾತ ಬರಹಗಾರ ಭೀಷ್ಮ ಸಹಾನಿ ಅವರಿಗೆ ದೆಹಲಿ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಯಾದ ‘ಶಲಾಕ ಸಮ್ಮಾನ್’ ಅನ್ನು ನೀಡಿ ಇಂದು ಗೌರವಿಸಲಾಯಿತು.</p>.<p>ಹಿಂದಿ ಅಕಾಡೆಮಿ ಸ್ಥಾಪಿಸಿರುವ ಈ ಪ್ರಶಸ್ತಿಯಲ್ಲಿ 1.11 ಲಕ್ಷ ರೂಪಾಯಿ ನಗದು ಕೂಡಾ ಸೇರಿರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>