‘ಅಹಮದಾಬಾದ್ ಮತ್ತು ಬೆಂಗಳೂರಿಗೆ ರೈಲೊಂದನ್ನು ಬಿಡುವ ವಿಚಾರವು ಪರಿಶೀಲನೆಯಲ್ಲಿದೆ. ಹುಬ್ಬಳ್ಳಿಗೆ ನೈರುತ್ಯ ರೈಲ್ವೆ ವಲಯ ಮಂಜೂರು ಮಾಡದೇ ಹೋದುದಕ್ಕಾಗಿ ಆ ಭಾಗದ ಜನರಿಗೆ ಸಮಾಧಾನಕರವಾಗಿ ಈ ಹೊಸ ರೈಲಿನ ಜತೆಗೆ ಹುಬ್ಬಳ್ಳಿಯ ಕಾರ್ಯಾಗಾರವನ್ನು ಆಧುನೀಕರಣಗೊಳಿಸಲು ಒಟ್ಟು ₹ 55 ಕೋಟಿಯನ್ನು ಕಾಯ್ದಿರಿಸಲಾಗುವುದು. ಇದರಲ್ಲಿ ತಕ್ಷಣವೇ ಹತ್ತು ಕೋಟಿಯನ್ನು ಬಿಡುಗಡೆ ಮಾಡಲು ಪ್ರಧಾನಿ ಅವರು ಒಪ್ಪಿದ್ದಾರೆ.