ನವದೆಹಲಿ, ಜುಲೈ 22– ಕೃಷಿ ಗ್ರಾಮೀಣಾಭಿವೃದ್ಧಿ, ಬಡತನ ನಿವಾರಣೆಗೆ ವಿಶೇಷ ಒತ್ತು. ಹೊಸ ನೇರ ತೆರಿಗೆಯಿಂದ ಮುಕ್ತ, ಹಿಂದಿನ ಸರ್ಕಾರದ ಆರ್ಥಿಕ ಸುಧಾರಣೆಗೆ ಬೆಂಬಲ, ವೇತನದಾರರಿಗೆ ಆದಾಯ ತೆರಿಗೆಯಲ್ಲಿ ಅಲ್ಪ ರಿಯಾಯಿತಿ, ಉದ್ಯಮ ಕ್ಷೇತ್ರಕ್ಕೆ ಶೇ. 54ರಷ್ಟು ಸರ್ಚಾರ್ಚ್ ಇಳಿತ, ಸಣ್ಣ ಉದ್ಯಮಗಳಿಗೆ ರಿಯಾಯಿತಿ ನೀಡುವ ಸಂಯುಕ್ತ ರಂಗ ಸರ್ಕಾರದ 1996–97ರ ಚೊಚ್ಚಲ ಬಜೆಟ್ಅನ್ನು ಹಣಕಾಸು ಸಚಿವ ಪಿ. ಚಿದಂಬರಂ ಇಂದು ಮಂಡಿಸಿದರು.