ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಶುಕ್ರವಾರ, 3–11–1995

Last Updated 2 ನವೆಂಬರ್ 2020, 19:30 IST
ಅಕ್ಷರ ಗಾತ್ರ

ವೀರಪ್ಪನ್‌ ಷರತ್ತಿಗೆ ಇಂದು ತಮಿಳುನಾಡು ಉತ್ತರ

ಈರೋಡ್‌, ನ. 2 (ಪಿಟಿಐ)– ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಯನ್ನು ಅಪಹರಿಸಿರುವ ದಂತಚೋರ ವೀರಪ್ಪನ್‌ ತಂಡದ ಬೇಡಿಕೆಗಳಿಗೆ ತಮಿಳುನಾಡು ಸರ್ಕಾರ ನಾಳೆ ಉತ್ತರಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

5 ವರ್ಷ ಸಿನಿಮಾ ನಿರ್ಷಧ: ಸ್ಪೀಕರ್‌ ಸಲಹೆ

ಬೆಂಗಳೂರು, ನ. 2– ‘ಭಾರತೀಯ ಯುವಜನಾಂಗದ ನಂಬರ್‌ ಒನ್‌ ಶತ್ರುವಾಗಿರುವ ಸಿನಿಮಾಗಳ ತಯಾರಿಕೆ, ಪ್ರದರ್ಶನವನ್ನು ಕಡೇಪಕ್ಷ ಐದು ವರ್ಷದ ಅವಧಿಗಾದರೂ ನಿಷೇಧಿಸಬೇಕಾದ’ ಅಗತ್ಯವನ್ನು ವಿಧಾನಸಭೆಯ ಅಧ್ಯಕ್ಷ ರಮೇಶ್‌ ಕುಮಾರ್‌ ಇಂದು ಇಲ್ಲಿ ಪ್ರತಿಪಾದಿಸಿದರು.

ಭಾರತೀಯ ವಿದ್ಯಾರ್ಥಿ ಫೆಡರೇಷನ್‌ ಆಶ್ರಯದಲ್ಲಿ ನಡೆದ ‘ಅಖಿಲ ಭಾರತ ಶೈಕ್ಷಣಿಕ ಸಮಾವೇಶ’ದ ಅಧ್ಯಕ್ಷತೆ ವಹಿಸಿದ್ದ ಅವರು, ತಾವು ಮೊದಲಿನಿಂದಲೂ ಸಿನಿಮಾ ಮತ್ತು ಟಿ.ವಿ ವಿರೋಧಿ ಎಂದು ಹೇಳಲಾಗುತ್ತಿದೆ. ಆದರೆ, ಈಗ ಬರುತ್ತಿರುವ ಸಿನಿಮಾಗಳನ್ನು ನೋಡಿದರೆ ಪ್ರತಿಯೊಬ್ಬರೂ ಅದನ್ನು ವಿರೋಧಿಸಬೇಕಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT