ನವದೆಹಲಿ ಜ.23(ಪಿಟಿಐ, ಯುಎನ್ಐ): ಜೈನ್ ಹವಾಲಾ ಹಗರಣದಲ್ಲಿ ಮಾಜಿ ಕೇಂದ್ರ ಸಚಿವರಾದ ವಿ.ಸಿ ಶುಕ್ಲಾ, ಮಾಧವರಾವ್ ಸಿಂಧಿಯಾ ಮತ್ತು ಬಲರಾಂ ಜಾಖಡ್ ಅವರ ವಿರುದ್ಧ ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ) ಇಂದು ಆರೋಪ ಪಟ್ಟಿ ಸಲ್ಲಿಸಿತು.ಈ ಮಧ್ಯೆ ಹವಾಲಾ ಆರೋಪಿ ಎಸ್..ಕೆ. ಜೈನ್ನಿಂದ ತಾವು ನೇರವಾಗಿ ಆಗಲಿ ಅಥವಾ ಮಧ್ಯವರ್ತಿ ಮೂಲಕವಾಗಲಿ ಹಣ ಪಡೆದಿಲ್ಲ ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಇಂದು ರಾತ್ರಿ ಅಧಿಕೃತ ಸ್ಪಷ್ಟೀಕರಣ ನೀಡಿದ್ದಾರೆ.