<p><strong>3 ರಾಜ್ಯಗಳಲ್ಲಿ ಹಿಂಸಾಚಾರ: ಗೋಲಿಬಾರ್, 10 ಸಾವು</strong></p>.<p><strong>ನವದೆಹಲಿ, ಮೇ 2 (ಪಿಟಿಐ, ಯುಎನ್ಐ)</strong>– ಇಂದು ನಡೆದ ಎರಡನೇ ಸುತ್ತಿನ ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ಬಿಹಾರ, ಆಂಧ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ, ಮತಪತ್ರ,<br />ಮತಪೆಟ್ಟಿಗೆ, ಚುನಾವಣಾ ಸಿಬ್ಬಂದಿ ಅಪಹರಣದ ನಡುವೆ ಭುಗಿಲೆದ್ದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿಗಳು ಸೇರಿ 10 ಮಂದಿ ಸತ್ತಿದ್ದಾರೆ. ಗುಂಪು ಘರ್ಷಣೆಗಳಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹಲವೆಡೆ ನಕಲಿ ಮತದಾನ ನಡೆದಿದೆ.</p>.<p>ಚುನಾವಣಾ ಹಿಂಸಾಚಾರಕ್ಕೆ ಬಿಹಾರದಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ 9 ಮಂದಿ ಹಾಗೂ ಆಂಧ್ರದಲ್ಲಿ ನಕ್ಸಲೀಯರು ಅಡಗಿಸಿದ್ದ ನೆಲ ಬಾಂಬ್ ಸ್ಫೋಟಿಸಿ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.</p>.<p><strong>ನಕ್ಸಲೀಯರಿಂದ ಹಿಂಸಾಚಾರ: ಹತ್ಯೆ</strong></p>.<p><strong>ಹೈದರಾಬಾದ್, ಮೇ 2 (ಯುಎನ್ಐ)</strong>– ಮತದಾನ ಬಹಿಷ್ಕಾರಕ್ಕೆ ಪೀಪಲ್ಸ್ ವಾರ್ ಗ್ರೂಪ್ ಕರೆ ನೀಡಿದ್ದ ಆಂಧ್ರ ಪ್ರದೇಶದ ಉತ್ತರ ತೆಲಂಗಾಣ ಪ್ರದೇಶದಲ್ಲಿ ಪ್ರದೇಶ ಚುನಾವಣಾಧಿಕಾರಿಗಳ ವಾಹನ ಚಾಲಕನ ಅಪಹರಣ, ಸಬ್ಇನ್ಸ್ಪೆಕ್ಟರ್ ಒಬ್ಬರ ಹತ್ಯೆಯೂ ಸೇರಿದಂತೆ ವ್ಯಾಪಕ ಹಿಂಸಾಚಾರ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>3 ರಾಜ್ಯಗಳಲ್ಲಿ ಹಿಂಸಾಚಾರ: ಗೋಲಿಬಾರ್, 10 ಸಾವು</strong></p>.<p><strong>ನವದೆಹಲಿ, ಮೇ 2 (ಪಿಟಿಐ, ಯುಎನ್ಐ)</strong>– ಇಂದು ನಡೆದ ಎರಡನೇ ಸುತ್ತಿನ ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ಬಿಹಾರ, ಆಂಧ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ, ಮತಪತ್ರ,<br />ಮತಪೆಟ್ಟಿಗೆ, ಚುನಾವಣಾ ಸಿಬ್ಬಂದಿ ಅಪಹರಣದ ನಡುವೆ ಭುಗಿಲೆದ್ದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿಗಳು ಸೇರಿ 10 ಮಂದಿ ಸತ್ತಿದ್ದಾರೆ. ಗುಂಪು ಘರ್ಷಣೆಗಳಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹಲವೆಡೆ ನಕಲಿ ಮತದಾನ ನಡೆದಿದೆ.</p>.<p>ಚುನಾವಣಾ ಹಿಂಸಾಚಾರಕ್ಕೆ ಬಿಹಾರದಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ 9 ಮಂದಿ ಹಾಗೂ ಆಂಧ್ರದಲ್ಲಿ ನಕ್ಸಲೀಯರು ಅಡಗಿಸಿದ್ದ ನೆಲ ಬಾಂಬ್ ಸ್ಫೋಟಿಸಿ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.</p>.<p><strong>ನಕ್ಸಲೀಯರಿಂದ ಹಿಂಸಾಚಾರ: ಹತ್ಯೆ</strong></p>.<p><strong>ಹೈದರಾಬಾದ್, ಮೇ 2 (ಯುಎನ್ಐ)</strong>– ಮತದಾನ ಬಹಿಷ್ಕಾರಕ್ಕೆ ಪೀಪಲ್ಸ್ ವಾರ್ ಗ್ರೂಪ್ ಕರೆ ನೀಡಿದ್ದ ಆಂಧ್ರ ಪ್ರದೇಶದ ಉತ್ತರ ತೆಲಂಗಾಣ ಪ್ರದೇಶದಲ್ಲಿ ಪ್ರದೇಶ ಚುನಾವಣಾಧಿಕಾರಿಗಳ ವಾಹನ ಚಾಲಕನ ಅಪಹರಣ, ಸಬ್ಇನ್ಸ್ಪೆಕ್ಟರ್ ಒಬ್ಬರ ಹತ್ಯೆಯೂ ಸೇರಿದಂತೆ ವ್ಯಾಪಕ ಹಿಂಸಾಚಾರ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>