<p><strong>ಅತಿಕ್ರಮಣಕ್ಕೆ ತಡೆ, ಪ್ರಮುಖ ನೆಲೆ ವಶ</strong></p><p>ನವದೆಹಲಿ, ಮೇ 30 (ಪಿಟಿಐ, ಯುಎನ್ಐ)– ಜಮ್ಮು ಮತ್ತು ಕಾಶ್ಮೀರ ವಲಯದ ಬಟಾಲಿಕ್ನಲ್ಲಿ ಕಳೆದ ರಾತ್ರಿ ಪಾಕ್ ಅತಿಕ್ರಮಣಕಾರರು ಮತ್ತು ಸೇನೆಯ ಮಧ್ಯೆ ನಡೆದ ನೇರ ಹೋರಾಟದಲ್ಲಿ ಭಾರತೀಯ ಮೇಜರ್ ಒಬ್ಬರು ಮೃತಪಟ್ಟು, ಕನಿಷ್ಠ ಆರು ಮಂದಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಸತ್ತಿದ್ದಾರೆ.</p><p>ಈ ನಡುವೆ, ಕಾರ್ಗಿಲ್ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ಉಪಶಮನಗೊಳಿಸಲು ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿನಿಧಿಯನ್ನು ಕಳುಹಿಸಿಕೊಡುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರ ಸೂಚನೆಯನ್ನು ಭಾರತ ತಿರಸ್ಕರಿಸಿದೆ.</p><p><strong>ಇಂಟರ್ನೆಟ್ ಪ್ರಕಟಣೆ: ಗೊಂದಲ</strong></p><p>ಬೆಂಗಳೂರು, ಮೇ 30– ಎಸ್ಎಸ್ಎಲ್ಸಿ ಫಲಿತಾಂಶ ಅಧಿಕೃತವಾಗಿ ಶಾಲೆಗಳಲ್ಲಿ ಪ್ರಕಟ ಆಗುವುದಕ್ಕೆ ಒಂದು ದಿನ ಮುಂಚಿತವಾಗಿ ಇಂದು ಇಂಟರ್ನೆಟ್ನಲ್ಲಿ ಪ್ರಕಟವಾದ್ದರಿಂದ ವಿದ್ಯಾರ್ಥಿ ಮತ್ತು ಪೋಷಕ ವೃಂದದವರಲ್ಲಿ ಗೊಂದಲ ಮೂಡಿತು.</p><p>ಇಂಟರ್ನೆಟ್ ಫಲಿತಾಂಶವನ್ನು ಎಟುಕಿಸಿಕೊಳ್ಳಲಾಗದವರು ಪರದಾಡಿದರು. ಇಂಟರ್ನೆಟ್ ಸೌಲಭ್ಯ ಪಡೆಯಲಾಗದವರು ನಾಳೆಯವರೆಗೆ ಕಾಯಲಾಗದೆ ಪರಿತಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅತಿಕ್ರಮಣಕ್ಕೆ ತಡೆ, ಪ್ರಮುಖ ನೆಲೆ ವಶ</strong></p><p>ನವದೆಹಲಿ, ಮೇ 30 (ಪಿಟಿಐ, ಯುಎನ್ಐ)– ಜಮ್ಮು ಮತ್ತು ಕಾಶ್ಮೀರ ವಲಯದ ಬಟಾಲಿಕ್ನಲ್ಲಿ ಕಳೆದ ರಾತ್ರಿ ಪಾಕ್ ಅತಿಕ್ರಮಣಕಾರರು ಮತ್ತು ಸೇನೆಯ ಮಧ್ಯೆ ನಡೆದ ನೇರ ಹೋರಾಟದಲ್ಲಿ ಭಾರತೀಯ ಮೇಜರ್ ಒಬ್ಬರು ಮೃತಪಟ್ಟು, ಕನಿಷ್ಠ ಆರು ಮಂದಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಸತ್ತಿದ್ದಾರೆ.</p><p>ಈ ನಡುವೆ, ಕಾರ್ಗಿಲ್ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ಉಪಶಮನಗೊಳಿಸಲು ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿನಿಧಿಯನ್ನು ಕಳುಹಿಸಿಕೊಡುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರ ಸೂಚನೆಯನ್ನು ಭಾರತ ತಿರಸ್ಕರಿಸಿದೆ.</p><p><strong>ಇಂಟರ್ನೆಟ್ ಪ್ರಕಟಣೆ: ಗೊಂದಲ</strong></p><p>ಬೆಂಗಳೂರು, ಮೇ 30– ಎಸ್ಎಸ್ಎಲ್ಸಿ ಫಲಿತಾಂಶ ಅಧಿಕೃತವಾಗಿ ಶಾಲೆಗಳಲ್ಲಿ ಪ್ರಕಟ ಆಗುವುದಕ್ಕೆ ಒಂದು ದಿನ ಮುಂಚಿತವಾಗಿ ಇಂದು ಇಂಟರ್ನೆಟ್ನಲ್ಲಿ ಪ್ರಕಟವಾದ್ದರಿಂದ ವಿದ್ಯಾರ್ಥಿ ಮತ್ತು ಪೋಷಕ ವೃಂದದವರಲ್ಲಿ ಗೊಂದಲ ಮೂಡಿತು.</p><p>ಇಂಟರ್ನೆಟ್ ಫಲಿತಾಂಶವನ್ನು ಎಟುಕಿಸಿಕೊಳ್ಳಲಾಗದವರು ಪರದಾಡಿದರು. ಇಂಟರ್ನೆಟ್ ಸೌಲಭ್ಯ ಪಡೆಯಲಾಗದವರು ನಾಳೆಯವರೆಗೆ ಕಾಯಲಾಗದೆ ಪರಿತಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>