<h2>ಉತ್ತರ ಕನ್ನಡ ಪ್ರವಾಹ ಇಳಿಮುಖ</h2>.<p><strong>ಕಾರವಾರ, ಜೂನ್ 13–</strong> ಉತ್ತರ ಕನ್ನಡದ ಕರಾವಳಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಕ್ಕಿಹರಿದ ಉಪನದಿಗಳು, ಹಳ್ಳಗಳ ಪ್ರವಾಹ ಇಳಿಮುಖವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.</p>.<p>ಗಂಜಿ ಕೇಂದ್ರಗಳಿಂದ ನೆರೆ ಸಂತ್ರಸ್ತ ನಾಗರಿಕರು ತಮ್ಮ ಗುಡಿಸಲುಗಳಿಗೆ ಮರಳುತ್ತಿದ್ದು, ಇಂದು ಹೊನ್ನಾವರದ ನೆರೆಪೀಡಿತ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಎ. ಜೈವಂತ ಭೇಟಿ ನೀಡಿದ್ದರು.</p>.<p>ಪ್ರವಾಹಕ್ಕೆ ಸಿಕ್ಕಿ ಮರಣ ಹೊಂದಿದವರ ಕುಟುಂಬದವರಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲು ಜಿಲ್ಲಾ ಆಡಳಿತವು ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ತಿಳಿದುಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಈ ಸಂಬಂಧ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆಂದು ವರದಿಯಾಗಿದೆ.</p>.<h2>ಕಾರ್ಗಿಲ್: ಪಾಕ್ ಷೆಲ್ ದಾಳಿ ಪ್ರಧಾನಿ ಪಾರು</h2>.<p><strong>ಕಾರ್ಗಿಲ್, ಜೂನ್ 13 (ಪಿಟಿಐ)</strong>– ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನಿ ಪಡೆಗಳು ಇಂದು ನಡೆಸಿದ ಷೆಲ್ ದಾಳಿಯಿಂದ ಸ್ವಲ್ಪದರಲ್ಲಿ ಪಾರಾದರು. ಇದರಿಂದಾಗಿ ಅವರ ಡ್ರಾಸ್ ಭೇಟಿ ರದ್ದಾಯಿತು.</p>.<p>ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನ ಬೆಂಬಲಿತ ಅತಿಕ್ರಮಣಕಾರರ ವಿರುದ್ಧ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ವೀಕ್ಷಿಸಲು ಪ್ರಧಾನಿ ಆಗಮಿಸಿದಾಗ ಈ ದಾಳಿ ನಡೆಯಿತು. ವಾಜಪೇಯಿ ಅವರು ಯೋಧರನ್ನು ಉದ್ದೇಶಿಸಿ ಭಾಷಣ ಮಾಡಬೇಕಿದ್ದ ಬಾರ್ದ್ ವಿಭಾಗಾಧಿಕಾರಿ ಕಚೇರಿ ಈ ಷೆಲ್ ದಾಳಿಯಲ್ಲಿ ನಾಶವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಉತ್ತರ ಕನ್ನಡ ಪ್ರವಾಹ ಇಳಿಮುಖ</h2>.<p><strong>ಕಾರವಾರ, ಜೂನ್ 13–</strong> ಉತ್ತರ ಕನ್ನಡದ ಕರಾವಳಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಕ್ಕಿಹರಿದ ಉಪನದಿಗಳು, ಹಳ್ಳಗಳ ಪ್ರವಾಹ ಇಳಿಮುಖವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.</p>.<p>ಗಂಜಿ ಕೇಂದ್ರಗಳಿಂದ ನೆರೆ ಸಂತ್ರಸ್ತ ನಾಗರಿಕರು ತಮ್ಮ ಗುಡಿಸಲುಗಳಿಗೆ ಮರಳುತ್ತಿದ್ದು, ಇಂದು ಹೊನ್ನಾವರದ ನೆರೆಪೀಡಿತ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಎ. ಜೈವಂತ ಭೇಟಿ ನೀಡಿದ್ದರು.</p>.<p>ಪ್ರವಾಹಕ್ಕೆ ಸಿಕ್ಕಿ ಮರಣ ಹೊಂದಿದವರ ಕುಟುಂಬದವರಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲು ಜಿಲ್ಲಾ ಆಡಳಿತವು ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ತಿಳಿದುಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಈ ಸಂಬಂಧ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆಂದು ವರದಿಯಾಗಿದೆ.</p>.<h2>ಕಾರ್ಗಿಲ್: ಪಾಕ್ ಷೆಲ್ ದಾಳಿ ಪ್ರಧಾನಿ ಪಾರು</h2>.<p><strong>ಕಾರ್ಗಿಲ್, ಜೂನ್ 13 (ಪಿಟಿಐ)</strong>– ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನಿ ಪಡೆಗಳು ಇಂದು ನಡೆಸಿದ ಷೆಲ್ ದಾಳಿಯಿಂದ ಸ್ವಲ್ಪದರಲ್ಲಿ ಪಾರಾದರು. ಇದರಿಂದಾಗಿ ಅವರ ಡ್ರಾಸ್ ಭೇಟಿ ರದ್ದಾಯಿತು.</p>.<p>ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನ ಬೆಂಬಲಿತ ಅತಿಕ್ರಮಣಕಾರರ ವಿರುದ್ಧ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ವೀಕ್ಷಿಸಲು ಪ್ರಧಾನಿ ಆಗಮಿಸಿದಾಗ ಈ ದಾಳಿ ನಡೆಯಿತು. ವಾಜಪೇಯಿ ಅವರು ಯೋಧರನ್ನು ಉದ್ದೇಶಿಸಿ ಭಾಷಣ ಮಾಡಬೇಕಿದ್ದ ಬಾರ್ದ್ ವಿಭಾಗಾಧಿಕಾರಿ ಕಚೇರಿ ಈ ಷೆಲ್ ದಾಳಿಯಲ್ಲಿ ನಾಶವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>