<div><p><strong>ಸಿಪಿಪಿ ನಾಯಕತ್ವಕ್ಕೆ ಸೆಣೆಸಾಟ: ಉಭಯ ಬಣಗಳ ಬಿಗಿ ಪಟ್ಟು<br />ನವದೆಹಲಿ, ಡಿ. 22 (ಯುಎನ್ಐ, ಪಿಟಿಐ)– </strong>ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷ ಸ್ಥಾನಕ್ಕೆ ಒಮ್ಮತ ಅಭ್ಯರ್ಥಿಗೆ ಬದಲಾಗಿ ಚುನಾವಣೆ ನಡೆಯಬೇಕೆಂದು ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಬೆಂಬಲಿಗರು ಪಟ್ಟು ಹಿಡಿದಿರುವುದರಿಂದ ಅಧ್ಯಕ್ಷ ಸೀತಾರಂ ಕೇಸರಿ ಹಾಗೂ ರಾವ್ ಬಣಗಳ ನಡುವೆ ಹಣಾಹಣಿ ನಡೆಯುವ ಸಂಭವವಿದೆ.</p><p>ಕಾಂಗ್ರೆಸ್ ಅಧ್ಯಕ್ಷ ಸೀತಾರಂ ಕೇಸರಿ ಅವರಿಗೆ ಪಕ್ಷದ ಹಿರಿಯ ನಾಯಕರು ಹಾಗೂ ರಾಜ್ಯ ಘಟಕಗಳ ನಾಯಕರ ಬೆಂಬಲ ಇದೆ ಎನ್ನಲಾಗಿದ್ದು, ಅವರೇ ಸಿಪಿಪಿ ನಾಯಕತ್ವಕ್ಕೆ ಒಮ್ಮತದ ಅಭ್ಯರ್ಥಿ ಎನ್ನಲಾಗುತ್ತಿದೆ.</p><p><strong>ರಂಗ ಸರ್ಕಾರಕ್ಕೆ ಬೆದರಿಕೆ ಇಲ್ಲ: ಪ್ರಧಾನಿ<br />ಕಲ್ಲಿಕೋಟೆ, ಡಿ. 22 (ಪಿಟಿಐ)–</strong> ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಯಿಂದ ಸಂಯುಕ್ತ ರಂಗ ಸರ್ಕಾರದ ಸ್ಥಿರತೆಗೆ ಒದಗಬಹುದಾದ ಬೆದರಿಕೆಯ ಕುರಿತು ತಮಗೆ ಯಾವುದೇ ಆತಂಕವಿಲ್ಲ ಎಂದು ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಿಳಿಸಿದ್ದು, ಆರ್ಥಿಕ ಸುಧಾರಣೆ ಮುಂದುವರಿಸಿಕೊಂಡು ಹೋಗುವ ತಮ್ಮ ದೃಢ ನಿರ್ಧಾರವನ್ನು ಪುನರುಚ್ಚರಿಸಿದ್ದಾರೆ.</p><p>‘ದೆಹಲಿ ಗದ್ದುಗೆ ಬಗ್ಗೆ ನನಗೆ ಚಿಂತೆಯಿಲ್ಲ. ಆದರೆ 13 ರಾಜಕೀಯ ಪಕ್ಷಗಳು ನನಗೆ ವಹಿಸಿರುವ ಕಾರ್ಯದ ಬಗ್ಗೆ ಹೆಚ್ಚು ಮುತವರ್ಜಿಯಿದೆ’ ಎಂದು ನಿನ್ನೆಯಿಂದ ನಗರಕ್ಕೆ ಭೇಟಿ ನೀಡಿರುವ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div><p><strong>ಸಿಪಿಪಿ ನಾಯಕತ್ವಕ್ಕೆ ಸೆಣೆಸಾಟ: ಉಭಯ ಬಣಗಳ ಬಿಗಿ ಪಟ್ಟು<br />ನವದೆಹಲಿ, ಡಿ. 22 (ಯುಎನ್ಐ, ಪಿಟಿಐ)– </strong>ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷ ಸ್ಥಾನಕ್ಕೆ ಒಮ್ಮತ ಅಭ್ಯರ್ಥಿಗೆ ಬದಲಾಗಿ ಚುನಾವಣೆ ನಡೆಯಬೇಕೆಂದು ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಬೆಂಬಲಿಗರು ಪಟ್ಟು ಹಿಡಿದಿರುವುದರಿಂದ ಅಧ್ಯಕ್ಷ ಸೀತಾರಂ ಕೇಸರಿ ಹಾಗೂ ರಾವ್ ಬಣಗಳ ನಡುವೆ ಹಣಾಹಣಿ ನಡೆಯುವ ಸಂಭವವಿದೆ.</p><p>ಕಾಂಗ್ರೆಸ್ ಅಧ್ಯಕ್ಷ ಸೀತಾರಂ ಕೇಸರಿ ಅವರಿಗೆ ಪಕ್ಷದ ಹಿರಿಯ ನಾಯಕರು ಹಾಗೂ ರಾಜ್ಯ ಘಟಕಗಳ ನಾಯಕರ ಬೆಂಬಲ ಇದೆ ಎನ್ನಲಾಗಿದ್ದು, ಅವರೇ ಸಿಪಿಪಿ ನಾಯಕತ್ವಕ್ಕೆ ಒಮ್ಮತದ ಅಭ್ಯರ್ಥಿ ಎನ್ನಲಾಗುತ್ತಿದೆ.</p><p><strong>ರಂಗ ಸರ್ಕಾರಕ್ಕೆ ಬೆದರಿಕೆ ಇಲ್ಲ: ಪ್ರಧಾನಿ<br />ಕಲ್ಲಿಕೋಟೆ, ಡಿ. 22 (ಪಿಟಿಐ)–</strong> ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಯಿಂದ ಸಂಯುಕ್ತ ರಂಗ ಸರ್ಕಾರದ ಸ್ಥಿರತೆಗೆ ಒದಗಬಹುದಾದ ಬೆದರಿಕೆಯ ಕುರಿತು ತಮಗೆ ಯಾವುದೇ ಆತಂಕವಿಲ್ಲ ಎಂದು ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಿಳಿಸಿದ್ದು, ಆರ್ಥಿಕ ಸುಧಾರಣೆ ಮುಂದುವರಿಸಿಕೊಂಡು ಹೋಗುವ ತಮ್ಮ ದೃಢ ನಿರ್ಧಾರವನ್ನು ಪುನರುಚ್ಚರಿಸಿದ್ದಾರೆ.</p><p>‘ದೆಹಲಿ ಗದ್ದುಗೆ ಬಗ್ಗೆ ನನಗೆ ಚಿಂತೆಯಿಲ್ಲ. ಆದರೆ 13 ರಾಜಕೀಯ ಪಕ್ಷಗಳು ನನಗೆ ವಹಿಸಿರುವ ಕಾರ್ಯದ ಬಗ್ಗೆ ಹೆಚ್ಚು ಮುತವರ್ಜಿಯಿದೆ’ ಎಂದು ನಿನ್ನೆಯಿಂದ ನಗರಕ್ಕೆ ಭೇಟಿ ನೀಡಿರುವ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>