ಕಂಠೀರವ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ದಾಂಧಲೆ ಗೋಪಾಲಕೃಷ್ಣ ಹೆಗಡೆ
ಬೆಂಗಳೂರು, ಜೂನ್ 9– ರಾಷ್ಟ್ರೀಯ ಕ್ರೀಡೆಗಳ ಆರಂಭೋತ್ಸವದ ಕಹಿ ನೆನಪು ಮಾಸುವ ಮೊದಲೇ ಇನ್ನೊಂದು ಅಹಿತಕರ ಘಟನೆ ರಾಜ್ಯ ಕ್ರೀಡಾರಂಗಕ್ಕೆ ಮಸಿ ಬಳಿಯಿತು. ಕಂಠೀರವ ಕ್ರೀಡಾಂಗಣದಲ್ಲಿ ಇಂದು ರಾತ್ರಿ ಕರ್ನಾಟಕ ರಿಲೆ ತಂಡದ ಅನರ್ಹತೆಯನ್ನು ಸಹಿಸದ ಪ್ರೇಕ್ಷಕರು ಕುರ್ಚಿ ಎಸೆದು ಗಲಾಟೆ ಮಾಡಿದರು. ಕುರ್ಚಿ ಎಸೆತದಿಂದ ಚಂಡೀಗಢದ ಅಥ್ಲೀಟ್ ಒಬ್ಬಳು ಗಾಯಗೊಂಡಳು.