ನವದೆಹಲಿ, ಮೇ 18– ಈ ತಿಂಗಳ ಇಪ್ಪತ್ತೆರಡರಂದು ಸೇರಲಿರುವ ಹನ್ನೊಂದನೇ ಲೋಕಸಭೆಯ ಪ್ರಾರಂಭಿಕ ಅಧಿವೇಶನದಲ್ಲಿ 27ರಂದೇ ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಇತ್ಯರ್ಥವಾಗಲಿದೆ. ಇಂದು ಸಂಜೆ ನಾಲ್ಕು ಗಂಟೆಗೆ ನಡೆದ ಕೇಂದ್ರ ಸಂಪುಟದ ಸಭೆಯು ಈ ಮುಂಚೆ 24ರಿಂದ ಮಾಡಬೇಕೆಂದು ತೀರ್ಮಾನಿಸಿದ್ದ ಅಧಿವೇಶನವನ್ನು 22ರಿಂದಲೇ ಆರಂಭಿಸಲು ನಿರ್ಧರಿಸಿತು.