ಯು.ಪಿ., ಬಿಹಾರ ರಾಜ್ಯಪಾಲರ ವರ್ತನೆ: ಸಂಸತ್ತಿನಲ್ಲಿ ಚಕಮಕಿ ನಿರೀಕ್ಷೆ
ನವದೆಹಲಿ, ಫೆ. 18: ಮಂತ್ರಿಮಂಡಲ ರಚಿಸುವಂತೆ ಉತ್ತರ ಪ್ರದೇಶದಲ್ಲಿ ಶ್ರೀ ಚರಣಸಿಂಗ್ ಅವರನ್ನು, ಬಿಹಾರದಲ್ಲಿ ಶ್ರೀ ದರೋಗಾರಾಯ್ ಅವರನ್ನು ರಾಜ್ಯಪಾಲರು ಆಹ್ವಾನಿಸಿದ ಕ್ರಮದ ಔಚಿತ್ಯ ಕುರಿತು ಶುಕ್ರವಾರದಿಂದ ಆರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕೆಲವು ವಿರೋಧ ಪಕ್ಷಗಳು ಪ್ರಶ್ನಿಸುವ ಸಂಭವವಿದೆ.