ಮುಂದಿನ ಮುಂಗಡಪತ್ರದಲ್ಲಿ ಬರ ನಿವಾರಣೆಯ ಶಾಶ್ವತ ಕ್ರಮಗಳಿಗೆ ಆದ್ಯತೆ
ಬೆಂಗಳೂರು, ಜ. 30– ಫೆಬ್ರುವರಿ ತಿಂಗಳ ಮೂರನೇ ವಾರದ ಸುಮಾರಿನಲ್ಲಿ ವಿಧಾನ ಮಂಡಲದಲ್ಲಿ ಮಂಡಿತವಾಗಲಿರುವ 1973–74ನೇ ಸಾಲಿನ ಬಜೆಟ್ನಲ್ಲಿ ರಾಜ್ಯದ ಮೂರರಲ್ಲಿ ಒಂದು ಭಾಗದಲ್ಲಿ ತೀವ್ರ ಅಭಾವ ಪರಿಸ್ಥಿತಿಯಿರುವ ಪ್ರದೇಶಗಳ ಜನ ಮತ್ತು ಜಾನುವಾರು ರಕ್ಷಣೆ ಹಾಗೂ ಶಾಶ್ವತ ಬರ ನಿವಾರಣಾ ಕ್ರಮಗಳು ಆದ್ಯತೆ ಪಡೆಯಲಿವೆ.