<p><strong>ರಾಜಧನ, ವಿಶೇಷ ಹಕ್ಕು ರದ್ದತಿಗೆ ಎರಡು ಮಸೂದೆ</strong><br /><strong>ನವದೆಹಲಿ, ಏ. 26–</strong> ಸಂವಿಧಾನಕ್ಕೆ ತಿದ್ದುಪಡಿ ತರುವ ಮಸೂದೆಯೊಂದನ್ನು ಮಾಜಿ ರಾಜರ ವಿಶೇಷ ಹಕ್ಕುಬಾಧ್ಯತೆ ರದ್ದು ಮಾಡಲು ಅವಕಾಶವಿರುವ ಮತ್ತೊಂದು ಮಸೂದೆಯನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಲಾಗುವುದು.</p>.<p>ಈ ವಿಷಯವನ್ನು ಉಭಯ ಸದನಗಳ ಕಾರ್ಯಾಲಯಗಳಿಗೆ ಸರ್ಕಾರ ಈಗಾಗಲೇ ತಿಳಿಸಿದೆ.</p>.<p>ಮಾಜಿ ರಾಜರಿಗಿರುವ ವಿಶೇಷ ಹಕ್ಕುಗಳನ್ನು ರದ್ದು ಮಾಡಬೇಕಾದರೆ, ಜಾರಿಯಲ್ಲಿರುವ ಕೆಲವೊಂದು ಕೇಂದ್ರ ಕಾನೂನುಗಳನ್ನು ತಿದ್ದಬೇಕಾಗುವುದು. ಉದಾಹರಣೆಗೆ, ಕೆಲವೊಂದು ವಸ್ತುಗಳ ವಿಷಯದಲ್ಲಿ ಮಾಜಿ ರಾಜರಿಗೆ ವಿದೇಶಿ ಸುಂಕ ವಿನಾಯಿತಿ ಇದೆ. ಆದ್ದರಿಂದ ಸಮುದ್ರ ಸುಂಕ ಶಾಸನವನ್ನು ತಿದ್ದಬೇಕಾಗುವುದು.</p>.<p><strong>ಹಿಮಾಚಲ ಪ್ರದೇಶಕ್ಕೆ ಶೀಘ್ರದಲ್ಲೇ ರಾಜ್ಯ ಸ್ಥಾನಮಾನ</strong><br /><strong>ಮುಂಬಯಿ, ಏ. 26–</strong> ಕೇಂದ್ರಾಡಳಿತ ಪ್ರದೇಶವಾಗಿರುವ ಹಿಮಾಚಲ ಪ್ರದೇಶಕ್ಕೆ ಅತಿ ಶೀಘ್ರದಲ್ಲೇ ರಾಜ್ಯ ಸ್ಥಾನಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ವೈ.ಎಸ್.ಪಾರ್ಮಾರ್ ಇಂದು ಸುದ್ದಿಗಾರರಿಗೆ ತಿಳಿಸಿದರು.</p>.<p>ಮುಖ್ಯಮಂತ್ರಿಯೊಂದಿಗೆ ಇಲ್ಲಿಗೆ ಆಗಮಿಸಿದ ಸಂಸತ್ ಸದಸ್ಯೆ ಶ್ರೀಮತಿ ಸತ್ಯವತಿ ಡಾಂಗ್ ಅವರು ‘ಮುಂದಿನ ಸಂಸತ್ ಅಧಿವೇಶನದೊಳಗಾಗಿ ರಾಜ್ಯ ಸ್ಥಾನಮಾನ ಪಡೆಯಲಿರುವ ತಮ್ಮ ರಾಜ್ಯವು ರಾಜ್ಯ ಸ್ಥಾನಮಾನ ಪಡೆಯುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊತ್ತ ಮೊದಲನೆಯದು’ ಎಂದು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜಧನ, ವಿಶೇಷ ಹಕ್ಕು ರದ್ದತಿಗೆ ಎರಡು ಮಸೂದೆ</strong><br /><strong>ನವದೆಹಲಿ, ಏ. 26–</strong> ಸಂವಿಧಾನಕ್ಕೆ ತಿದ್ದುಪಡಿ ತರುವ ಮಸೂದೆಯೊಂದನ್ನು ಮಾಜಿ ರಾಜರ ವಿಶೇಷ ಹಕ್ಕುಬಾಧ್ಯತೆ ರದ್ದು ಮಾಡಲು ಅವಕಾಶವಿರುವ ಮತ್ತೊಂದು ಮಸೂದೆಯನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಲಾಗುವುದು.</p>.<p>ಈ ವಿಷಯವನ್ನು ಉಭಯ ಸದನಗಳ ಕಾರ್ಯಾಲಯಗಳಿಗೆ ಸರ್ಕಾರ ಈಗಾಗಲೇ ತಿಳಿಸಿದೆ.</p>.<p>ಮಾಜಿ ರಾಜರಿಗಿರುವ ವಿಶೇಷ ಹಕ್ಕುಗಳನ್ನು ರದ್ದು ಮಾಡಬೇಕಾದರೆ, ಜಾರಿಯಲ್ಲಿರುವ ಕೆಲವೊಂದು ಕೇಂದ್ರ ಕಾನೂನುಗಳನ್ನು ತಿದ್ದಬೇಕಾಗುವುದು. ಉದಾಹರಣೆಗೆ, ಕೆಲವೊಂದು ವಸ್ತುಗಳ ವಿಷಯದಲ್ಲಿ ಮಾಜಿ ರಾಜರಿಗೆ ವಿದೇಶಿ ಸುಂಕ ವಿನಾಯಿತಿ ಇದೆ. ಆದ್ದರಿಂದ ಸಮುದ್ರ ಸುಂಕ ಶಾಸನವನ್ನು ತಿದ್ದಬೇಕಾಗುವುದು.</p>.<p><strong>ಹಿಮಾಚಲ ಪ್ರದೇಶಕ್ಕೆ ಶೀಘ್ರದಲ್ಲೇ ರಾಜ್ಯ ಸ್ಥಾನಮಾನ</strong><br /><strong>ಮುಂಬಯಿ, ಏ. 26–</strong> ಕೇಂದ್ರಾಡಳಿತ ಪ್ರದೇಶವಾಗಿರುವ ಹಿಮಾಚಲ ಪ್ರದೇಶಕ್ಕೆ ಅತಿ ಶೀಘ್ರದಲ್ಲೇ ರಾಜ್ಯ ಸ್ಥಾನಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ವೈ.ಎಸ್.ಪಾರ್ಮಾರ್ ಇಂದು ಸುದ್ದಿಗಾರರಿಗೆ ತಿಳಿಸಿದರು.</p>.<p>ಮುಖ್ಯಮಂತ್ರಿಯೊಂದಿಗೆ ಇಲ್ಲಿಗೆ ಆಗಮಿಸಿದ ಸಂಸತ್ ಸದಸ್ಯೆ ಶ್ರೀಮತಿ ಸತ್ಯವತಿ ಡಾಂಗ್ ಅವರು ‘ಮುಂದಿನ ಸಂಸತ್ ಅಧಿವೇಶನದೊಳಗಾಗಿ ರಾಜ್ಯ ಸ್ಥಾನಮಾನ ಪಡೆಯಲಿರುವ ತಮ್ಮ ರಾಜ್ಯವು ರಾಜ್ಯ ಸ್ಥಾನಮಾನ ಪಡೆಯುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊತ್ತ ಮೊದಲನೆಯದು’ ಎಂದು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>