<p><strong>14 ಭಾರಿ ಬ್ಯಾಂಕುಗಳ ರಾಷ್ಟ್ರೀಕರಣ: ರಾಷ್ಟ್ರಪತಿ ಸುಗ್ರೀವಾಜ್ಞೆ</strong></p>.<p><strong>ನವದೆಹಲಿ, ಜುಲೈ 19–</strong> ಹದಿನಾಲ್ಕು ಭಾರಿ ಭಾರತೀಯ ವಾಣಿಜ್ಯ ಬ್ಯಾಂಕ್ಗಳನ್ನು ಕೇಂದ್ರ ಸರ್ಕಾರ ಇಂದು ರಾಷ್ಟ್ರೀಕರಿಸಿತು.</p>.<p>ರಾಷ್ಟ್ರೀಕೃತವಾದ ಬ್ಯಾಂಕುಗಳಲ್ಲಿ ರಾಜ್ಯದಲ್ಲಿ ನೆಲೆ ಹೊಂದಿರುವ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕುಗಳು ಸೇರಿವೆ. ರಾಷ್ಟ್ರಪತಿಯ ಸುಗ್ರೀವಾಜ್ಞೆಯೊಂದರ ಮೂಲಕ ಬ್ಯಾಂಕುಗಳ ರಾಷ್ಟ್ರೀಕರಣವನ್ನು ಇಂದು ಜಾರಿಗೆ ತರಲಾಯಿತು.</p>.<p>‘ರಾಷ್ಟ್ರೀಯ ಆದ್ಯತೆ ಮತ್ತು ಗುರಿಗಳಿಗೆ ಅನುಗುಣವಾಗಿ ಆರ್ಥಿಕ ವ್ಯವಸ್ಥೆಯ ಅಭಿವೃದ್ಧಿಯ ಅಗತ್ಯವನ್ನು ಇನ್ನೂ ಉತ್ತಮಪಡಿಸಲು’ ಈ ರಾಷ್ಟ್ರೀಕರಣ ಕ್ರಮ ಕೈಗೊಳ್ಳಲಾಗಿದೆಯೆಂದು ಕೇಂದ್ರ ವಿವರಿಸಿದೆ.</p>.<p><strong>‘ಬರಸಿಡಿಲು’ ಕೆನರಾ ಬ್ಯಾಂಕ್ ಅಧ್ಯಕ್ಷ ಪ್ರತಿಕ್ರಿಯೆ</strong></p>.<p><strong>ಮಂಗಳೂರು, ಜುಲೈ 19–</strong> ದೇಶದ 14 ಬ್ಯಾಂಕುಗಳನ್ನು ಕೇಂದ್ರ ಸರ್ಕಾರ ರಾಷ್ಟ್ರೀಕರಣ ಮಾಡಿರುವ ಸುದ್ದಿ ಬರಸಿಡಿಲಿನಂತೆ ಎರಗಿದೆಯೆಂದು ಕೆನರಾ ಬ್ಯಾಂಕಿನ ಅಧ್ಯಕ್ಷ ಶ್ರೀ ಕೆ.ಪಿ.ಜೆ. ಪ್ರಭು ಅವರು ಇಂದು ಇಲ್ಲಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು.</p>.<p>ರಾಷ್ಟ್ರೀಕರಣದ ಮಾತು ಬಹಳ ದಿನಗಳಿಂದ ಕೇಳಿಬರುತ್ತಿದ್ದರೂ, ಆರ್ಡಿ ನೆನ್ಸ್ ಮೂಲಕ ರಾಷ್ಟ್ರೀಕರಣವಾಗಿರುವುದು ಆಶ್ಚರ್ಯಕರವೆಂದು ಅವರು ಹೇಳಿದರು.</p>.<p>ವ್ಯಾಪಾರ ಮತ್ತು ವಾಣಿಜ್ಯ ವಹಿವಾಟಿನ ಮೇಲೆ ರಾಷ್ಟ್ರೀಕರಣದ ಪರಿಣಾಮವನ್ನು ಕಾದು ನೋಡಬೇಕಾಗಿದೆಯೆಂದು ಅವರು ನುಡಿದರು.</p>.<p><strong>ಡಾ. ನಾಗನಗೌಡ ಅವರ ನಿಧನ</strong></p>.<p><strong>ಬೆಂಗಳೂರು, ಜುಲೈ 19–</strong> ಮಾಜಿ ಸಚಿವರು, ವಿಧಾನಸಭಾ ಸದಸ್ಯರೂ ಆದ ಡಾ. ಆರ್. ನಾಗನಗೌಡ ಅವರು ಇಂದು ಸಂಜೆ ಬಳ್ಳಾರಿ ಆಸ್ಪತ್ರೆಯಲ್ಲಿ ನಿಧನರಾದರು.</p>.<p>ಅನಾರೋಗ್ಯದ ಕಾರಣ, ಕಳೆದ ಬುಧವಾರ ಬಳ್ಳಾರಿ ಆಸ್ಪತ್ರೆಗೆ ಶ್ರೀಯುತರನ್ನು ಸೇರಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>14 ಭಾರಿ ಬ್ಯಾಂಕುಗಳ ರಾಷ್ಟ್ರೀಕರಣ: ರಾಷ್ಟ್ರಪತಿ ಸುಗ್ರೀವಾಜ್ಞೆ</strong></p>.<p><strong>ನವದೆಹಲಿ, ಜುಲೈ 19–</strong> ಹದಿನಾಲ್ಕು ಭಾರಿ ಭಾರತೀಯ ವಾಣಿಜ್ಯ ಬ್ಯಾಂಕ್ಗಳನ್ನು ಕೇಂದ್ರ ಸರ್ಕಾರ ಇಂದು ರಾಷ್ಟ್ರೀಕರಿಸಿತು.</p>.<p>ರಾಷ್ಟ್ರೀಕೃತವಾದ ಬ್ಯಾಂಕುಗಳಲ್ಲಿ ರಾಜ್ಯದಲ್ಲಿ ನೆಲೆ ಹೊಂದಿರುವ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕುಗಳು ಸೇರಿವೆ. ರಾಷ್ಟ್ರಪತಿಯ ಸುಗ್ರೀವಾಜ್ಞೆಯೊಂದರ ಮೂಲಕ ಬ್ಯಾಂಕುಗಳ ರಾಷ್ಟ್ರೀಕರಣವನ್ನು ಇಂದು ಜಾರಿಗೆ ತರಲಾಯಿತು.</p>.<p>‘ರಾಷ್ಟ್ರೀಯ ಆದ್ಯತೆ ಮತ್ತು ಗುರಿಗಳಿಗೆ ಅನುಗುಣವಾಗಿ ಆರ್ಥಿಕ ವ್ಯವಸ್ಥೆಯ ಅಭಿವೃದ್ಧಿಯ ಅಗತ್ಯವನ್ನು ಇನ್ನೂ ಉತ್ತಮಪಡಿಸಲು’ ಈ ರಾಷ್ಟ್ರೀಕರಣ ಕ್ರಮ ಕೈಗೊಳ್ಳಲಾಗಿದೆಯೆಂದು ಕೇಂದ್ರ ವಿವರಿಸಿದೆ.</p>.<p><strong>‘ಬರಸಿಡಿಲು’ ಕೆನರಾ ಬ್ಯಾಂಕ್ ಅಧ್ಯಕ್ಷ ಪ್ರತಿಕ್ರಿಯೆ</strong></p>.<p><strong>ಮಂಗಳೂರು, ಜುಲೈ 19–</strong> ದೇಶದ 14 ಬ್ಯಾಂಕುಗಳನ್ನು ಕೇಂದ್ರ ಸರ್ಕಾರ ರಾಷ್ಟ್ರೀಕರಣ ಮಾಡಿರುವ ಸುದ್ದಿ ಬರಸಿಡಿಲಿನಂತೆ ಎರಗಿದೆಯೆಂದು ಕೆನರಾ ಬ್ಯಾಂಕಿನ ಅಧ್ಯಕ್ಷ ಶ್ರೀ ಕೆ.ಪಿ.ಜೆ. ಪ್ರಭು ಅವರು ಇಂದು ಇಲ್ಲಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು.</p>.<p>ರಾಷ್ಟ್ರೀಕರಣದ ಮಾತು ಬಹಳ ದಿನಗಳಿಂದ ಕೇಳಿಬರುತ್ತಿದ್ದರೂ, ಆರ್ಡಿ ನೆನ್ಸ್ ಮೂಲಕ ರಾಷ್ಟ್ರೀಕರಣವಾಗಿರುವುದು ಆಶ್ಚರ್ಯಕರವೆಂದು ಅವರು ಹೇಳಿದರು.</p>.<p>ವ್ಯಾಪಾರ ಮತ್ತು ವಾಣಿಜ್ಯ ವಹಿವಾಟಿನ ಮೇಲೆ ರಾಷ್ಟ್ರೀಕರಣದ ಪರಿಣಾಮವನ್ನು ಕಾದು ನೋಡಬೇಕಾಗಿದೆಯೆಂದು ಅವರು ನುಡಿದರು.</p>.<p><strong>ಡಾ. ನಾಗನಗೌಡ ಅವರ ನಿಧನ</strong></p>.<p><strong>ಬೆಂಗಳೂರು, ಜುಲೈ 19–</strong> ಮಾಜಿ ಸಚಿವರು, ವಿಧಾನಸಭಾ ಸದಸ್ಯರೂ ಆದ ಡಾ. ಆರ್. ನಾಗನಗೌಡ ಅವರು ಇಂದು ಸಂಜೆ ಬಳ್ಳಾರಿ ಆಸ್ಪತ್ರೆಯಲ್ಲಿ ನಿಧನರಾದರು.</p>.<p>ಅನಾರೋಗ್ಯದ ಕಾರಣ, ಕಳೆದ ಬುಧವಾರ ಬಳ್ಳಾರಿ ಆಸ್ಪತ್ರೆಗೆ ಶ್ರೀಯುತರನ್ನು ಸೇರಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>