ಗದುಗಿನ ಗಿರಣಿ ಹಣ ಹೂಡಿಕೆ ಕೃಷಿ ಸಚಿವರ ಸ್ಥಾನ ಪ್ರಭಾವ ಪ್ರಯೋಗ
ಬೆಂಗಳೂರು, ಜೂನ್ 1– ಗದುಗಿನ ಸಹಕಾರಿ ಜವಳಿ ಗಿಣಿಗೆ ಕೃಷಿ ಕೈಗಾರಿಕೆ ಕಾರ್ಪೋರೇಷನ್ನಿನಿಂದ ಬಂಡವಾಳ ಕೊಡಿಸಲು ಕೃಷಿ ಸಚಿವರು ತಮ್ಮ ಸ್ಥಾನ ಮತ್ತು ಅಧಿಕಾರದ ಪ್ರಭಾವ ಬಳಸಿದ್ದಾರೆಂದು ಅದರ ಬಗ್ಗೆ ತನಿಖೆ ಮಾಡಿದ ಸರ್ಕಾರಿ ಉದ್ಯಮಗಳಿಗೆ ಸಂಬಂಧಪಟ್ಟ ಸಮಿತಿ ತೀವ್ರ ಸ್ವರೂಪದ ಸ್ಪಷ್ಟ ತೀರ್ಮಾನ ನೀಡಿದೆ.
ಸಚಿವರು ಕಾರ್ಪೋರೇಷನ್ನಿನ ವಿವಿಧ ಅಧಿಕಾರಿಗಳ ಮೇಲೆ ಪ್ರಭಾವ ಬೀರಿರುವರೆಂಬುದು ಸಮಿತಿಯ ಅಭಿಪ್ರಾಯ.
ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಶ್ರೀ ಎಚ್.ಡಿ.ದೇವೇಗೌಡ ಮತ್ತು ಶ್ರೀ ಸಿ.ಎಂ.ಆರ್ಮುಗಂ ಅವರು ಕೃಷಿ ಸಚಿವ ಶ್ರೀ ಕೆ.ಎಚ್.ಪಾಟೀಲರ ಮೇಲೆ ಆಪಾದನೆ ಮಾಡಿದ ನಂತರ ಅಧ್ಯಕ್ಷರ ಸೂಚನೆ ಮೇರೆಗೆ ಸಮಿತಿಯು ಕೃಷಿ ಕೈಗಾರಿಕಾ ಕಾರ್ಪೋರೇಷನ್ನಿನ ವ್ಯವಹಾರ ತನಿಖೆ ಮಾಡಿತು.