ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಶನಿವಾರ, 2 ಜೂನ್ 1973

Published 1 ಜೂನ್ 2023, 21:40 IST
Last Updated 1 ಜೂನ್ 2023, 21:40 IST
ಅಕ್ಷರ ಗಾತ್ರ

ಗದುಗಿನ ಗಿರಣಿ ಹಣ ಹೂಡಿಕೆ ಕೃಷಿ ಸಚಿವರ ಸ್ಥಾನ ಪ್ರಭಾವ ಪ್ರಯೋಗ

ಬೆಂಗಳೂರು, ಜೂನ್‌ 1– ಗದುಗಿನ ಸಹಕಾರಿ ಜವಳಿ ಗಿಣಿಗೆ ಕೃಷಿ ಕೈಗಾರಿಕೆ ಕಾರ್ಪೋರೇಷನ್ನಿನಿಂದ ಬಂಡವಾಳ ಕೊಡಿಸಲು ಕೃಷಿ ಸಚಿವರು ತಮ್ಮ ಸ್ಥಾನ ಮತ್ತು ಅಧಿಕಾರದ ಪ್ರಭಾವ ಬಳಸಿದ್ದಾರೆಂದು ಅದರ ಬಗ್ಗೆ  ತನಿಖೆ ಮಾಡಿದ ಸರ್ಕಾರಿ ಉದ್ಯಮಗಳಿಗೆ ಸಂಬಂಧಪಟ್ಟ ಸಮಿತಿ ತೀವ್ರ ಸ್ವರೂಪದ ಸ್ಪಷ್ಟ ತೀರ್ಮಾನ ನೀಡಿದೆ.

ಸಚಿವರು ಕಾರ್ಪೋರೇಷನ್ನಿನ ವಿವಿಧ ಅಧಿಕಾರಿಗಳ ಮೇಲೆ ಪ್ರಭಾವ ಬೀರಿರುವರೆಂಬುದು ಸಮಿತಿಯ ಅಭಿಪ್ರಾಯ.

ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಶ್ರೀ ಎಚ್‌.ಡಿ.ದೇವೇಗೌಡ ಮತ್ತು ಶ್ರೀ ಸಿ.ಎಂ.ಆರ್ಮುಗಂ ಅವರು ಕೃಷಿ ಸಚಿವ ಶ್ರೀ ಕೆ.ಎಚ್‌.ಪಾಟೀಲರ ಮೇಲೆ ಆಪಾದನೆ ಮಾಡಿದ ನಂತರ ಅಧ್ಯಕ್ಷರ ಸೂಚನೆ ಮೇರೆಗೆ ಸಮಿತಿಯು ಕೃಷಿ ಕೈಗಾರಿಕಾ ಕಾರ್ಪೋರೇಷನ್ನಿನ ವ್ಯವಹಾರ ತನಿಖೆ ಮಾಡಿತು.

 ಸಕಲ ಗೌರವಗಳೊಡನೆ ಕುಮಾರಮಂಗಳಂ ಅವರ ಅಂತ್ಯಕ್ರಿಯೆ

ನವದೆಹಲಿ, ಜೂನ್‌ 1– ಗುರುವಾರ ರಾತ್ರಿ ದೆಹಲಿ ಬಳಿ ವಿಮಾನ ದುರಂತದಲ್ಲಿ ಸಾವಿಗೀಡಾದ ಕೇಂದ್ರ ಉಕ್ಕು ಮತ್ತು ಗಣಿಗಳ ಸಚಿವ ಮೋಹನ ಕುಮಾರ ಮಂಗಳಂ ಅವರ ಪಾರ್ಥೀವ ದೇಹಕ್ಕೆ ಇಂದು ಸಂಜೆ ಯಮುನೆಯ ದಡದ ಮೇಲಿರುವ ವಿದ್ಯುತ್ ಚಿತಾಗಾರದಲ್ಲಿ ಸಕಲ ರಾಷ್ಟ್ರ ಗೌರವಗಳೊಡನೆ ಅಂತ್ಯಕ್ರಿಯೆ ನಡೆಸಲಾಯಿತು.

ಅವರ ದುರಂತ ಸಾವಿನಿಂದ ದಿಗ್ಭ್ರಾಂತಗೊಂಡ ರಾಷ್ಟ್ರವು ಅಗಲಿದ ನಾಯಕನಿಗೆ ಅಂತಿಮ ಗೌರವ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT