<p><strong>ಸರ್ಕಾರದ ಜೊತೆ ಪೂರ್ಣ ಅಸಹಕಾರ: ಸೋಷಲಿಸ್ಟರ ಚಳವಳಿಗೆ ಸಿಪಿಐ ವಿರೋಧ</strong></p><p><strong>ನವದೆಹಲಿ, ಜುಲೈ 1–</strong> ಸೋಷಲಿಸ್ಟ್ ಪಕ್ಷವು ಸೂಚಿಸಿರುವ ‘ಸರ್ಕಾರದ ಜೊತೆ ಸಂಪೂರ್ಣ ಅಸಹಕಾರ’ ಚಳವಳಿಯನ್ನು ಭಾರತದ ಕಮ್ಯುನಿಸ್ಟ್ ಪಕ್ಷವು ವಿರೋಧಿಸುವುದೆಂದು ಸಿ.ಪಿ.ಐ.ನ ಪ್ರಧಾನ ಕಾರ್ಯದರ್ಶಿ ರಾಜೇಶ್ವರರಾವ್ ಅವರು ಇಂದು ಇಲ್ಲಿ ತಿಳಿಸಿದರು.</p><p>ಸೋಷಲಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸುರೇಂದ್ರಮೋಹನ್ ಅವರ ಹೇಳಿಕೆಗೆ ಪ್ರತಿ ಹೇಳಿಕೆಯೊಂದನ್ನು ನೀಡಿ ರಾಜೇಶ್ವರ ರಾಯರು ಸಿ.ಪಿ.ಐ. ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.</p><p>ಪ್ರಗತಿಪರ ಕಾಂಗ್ರೆಸ್ಸಿಗರ ಜೊತೆ ಮೈತ್ರಿಯುತ ಬಾಂಧವ್ಯ ಅಂತೆಯೇ ಸರ್ಕಾರದ ಜನತಾ ವಿರೋಧಿ ನೀತಿಗಳ ವಿರುದ್ಧ ಹೋರಾಟ ಕುರಿತ ಸಿ.ಪಿ.ಐ. ಧೋರಣೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.</p>.<p><strong>ರಾಷ್ಟ್ರದಲ್ಲಿ ನೈತಿಕ ಪುನರುತ್ಥಾನವೇ ತಮ್ಮ ಚಳವಳಿ ಗುರಿ ಎಂದು ಜೆ.ಪಿ.</strong></p><p><strong>ರಾಂಚಿ, ಜುಲೈ 1–</strong> ಗುಜರಾತಿನಲ್ಲಿ ಮಾಡಿದಂಥ ತಪ್ಪನ್ನೇ ಮತ್ತೆ ಮಾಡಬೇಡಿ ಎಂದು ಬಿಹಾರ ರಾಜ್ಯದ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ಕರೆ ನೀಡಿದ್ದಾರೆ.</p><p>ಧ್ಯೇಯೋದ್ದೇಶಗಳ ಈಡೇರಿಕೆಗಾಗಿ ಸಂಘರ್ಷ ಸಮಿತಿಗಳನ್ನು ವ್ಯವಸ್ಥೆಗೊಳಿಸಲು ಗ್ರಾಮಗಳಿಗೆ ಹೋಗುವಂತೆಯೂ ಅವರು ಹೇಳಿದ್ದಾರೆ.</p><p>ನಿನ್ನೆ ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ‘ನಿಜವಾದ ಉತ್ತಮ ಪ್ರಜಾಸತ್ತಾತ್ಮಕ ಸರ್ಕಾರ ಸ್ಥಾಪಿಸಲು ಮುಂದಿನ ಚುನಾವಣೆಗೆ ಸರಿಯಾದ ಜನರನ್ನು ಆಯ್ಕೆ ಮಾಡಲು ಅನುವಾಗುವಂತೆ ಸೂಕ್ತ ಅಡಿಪಾಯ ಹಾಕಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸರ್ಕಾರದ ಜೊತೆ ಪೂರ್ಣ ಅಸಹಕಾರ: ಸೋಷಲಿಸ್ಟರ ಚಳವಳಿಗೆ ಸಿಪಿಐ ವಿರೋಧ</strong></p><p><strong>ನವದೆಹಲಿ, ಜುಲೈ 1–</strong> ಸೋಷಲಿಸ್ಟ್ ಪಕ್ಷವು ಸೂಚಿಸಿರುವ ‘ಸರ್ಕಾರದ ಜೊತೆ ಸಂಪೂರ್ಣ ಅಸಹಕಾರ’ ಚಳವಳಿಯನ್ನು ಭಾರತದ ಕಮ್ಯುನಿಸ್ಟ್ ಪಕ್ಷವು ವಿರೋಧಿಸುವುದೆಂದು ಸಿ.ಪಿ.ಐ.ನ ಪ್ರಧಾನ ಕಾರ್ಯದರ್ಶಿ ರಾಜೇಶ್ವರರಾವ್ ಅವರು ಇಂದು ಇಲ್ಲಿ ತಿಳಿಸಿದರು.</p><p>ಸೋಷಲಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸುರೇಂದ್ರಮೋಹನ್ ಅವರ ಹೇಳಿಕೆಗೆ ಪ್ರತಿ ಹೇಳಿಕೆಯೊಂದನ್ನು ನೀಡಿ ರಾಜೇಶ್ವರ ರಾಯರು ಸಿ.ಪಿ.ಐ. ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.</p><p>ಪ್ರಗತಿಪರ ಕಾಂಗ್ರೆಸ್ಸಿಗರ ಜೊತೆ ಮೈತ್ರಿಯುತ ಬಾಂಧವ್ಯ ಅಂತೆಯೇ ಸರ್ಕಾರದ ಜನತಾ ವಿರೋಧಿ ನೀತಿಗಳ ವಿರುದ್ಧ ಹೋರಾಟ ಕುರಿತ ಸಿ.ಪಿ.ಐ. ಧೋರಣೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.</p>.<p><strong>ರಾಷ್ಟ್ರದಲ್ಲಿ ನೈತಿಕ ಪುನರುತ್ಥಾನವೇ ತಮ್ಮ ಚಳವಳಿ ಗುರಿ ಎಂದು ಜೆ.ಪಿ.</strong></p><p><strong>ರಾಂಚಿ, ಜುಲೈ 1–</strong> ಗುಜರಾತಿನಲ್ಲಿ ಮಾಡಿದಂಥ ತಪ್ಪನ್ನೇ ಮತ್ತೆ ಮಾಡಬೇಡಿ ಎಂದು ಬಿಹಾರ ರಾಜ್ಯದ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ಕರೆ ನೀಡಿದ್ದಾರೆ.</p><p>ಧ್ಯೇಯೋದ್ದೇಶಗಳ ಈಡೇರಿಕೆಗಾಗಿ ಸಂಘರ್ಷ ಸಮಿತಿಗಳನ್ನು ವ್ಯವಸ್ಥೆಗೊಳಿಸಲು ಗ್ರಾಮಗಳಿಗೆ ಹೋಗುವಂತೆಯೂ ಅವರು ಹೇಳಿದ್ದಾರೆ.</p><p>ನಿನ್ನೆ ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ‘ನಿಜವಾದ ಉತ್ತಮ ಪ್ರಜಾಸತ್ತಾತ್ಮಕ ಸರ್ಕಾರ ಸ್ಥಾಪಿಸಲು ಮುಂದಿನ ಚುನಾವಣೆಗೆ ಸರಿಯಾದ ಜನರನ್ನು ಆಯ್ಕೆ ಮಾಡಲು ಅನುವಾಗುವಂತೆ ಸೂಕ್ತ ಅಡಿಪಾಯ ಹಾಕಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>