<p><strong>ಸಂಸ್ಥಾ ಕಾಂಗ್ರೆಸ್ ಪಕ್ಷದ ಸರ್ಕಾರ ಅಸಂಭವ</strong></p>.<p><strong>ಬೆಂಗಳೂರು, ಏ. 12– </strong>ಸ್ವಶಕ್ತಿಯ ಮೇಲೆ ಮತ್ತೆ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವ ಸಂಸ್ಥಾ ಕಾಂಗ್ರೆಸ್ ಪಕ್ಷ ಈ ಪ್ರಯತ್ನವನ್ನು ಕೈಬಿಡುವ ಸಂಭವ ಹೆಚ್ಚಾಗಿದೆ.</p>.<p>ಅಲ್ಪಸಂಖ್ಯಾತ ಸರ್ಕಾರ ರಚಿಸುವ ತಂಡದ ನಿರ್ಧಾರ ಹಾಗೂ ತಮ್ಮ ಪಕ್ಷದ ಅಂದಾಜು ಆಲೋಚನೆಗಳಿಗೆ ಸಾಮರಸ್ಯ ಉಂಟಾಗದಿರುವ ಪರಿಸ್ಥಿತಿಯನ್ನು ವಿಮರ್ಶಿಸಿ ಪಕ್ಷದ ನಾಯಕ ಶ್ರೀ ವೀರೇಂದ್ರ ಪಾಟೀಲ್ ಅವರು ರಾತ್ರಿ ನಿರ್ಧಾರಕೈಗೊಳ್ಳಲಿದ್ದಾರೆ.</p>.<p>ತಾವು ಮಂತ್ರಿಮಂಡಲವನ್ನು ರಚಿಸು ವುದಿಲ್ಲವೆಂದು ಶ್ರೀ ಪಾಟೀಲರು ನಾಳೆ ತಿಳಿಸಿದಲ್ಲಿ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಲಿದ್ದಾರೆ.</p>.<p><strong>ಜನಸಂಖ್ಯೆ 54 ಕೋಟಿ</strong></p>.<p><strong>ನವದೆಹಲಿ, ಏ. 12– </strong>ಈ ವರ್ಷದ ಜನಗಣತಿ ಪ್ರಕಾರ, ಭಾರತದ ಜನಸಂಖ್ಯೆ ಐವತ್ನಾಲ್ಕು ಕೋಟಿ ಎಪ್ಪತ್ತು ಲಕ್ಷ.</p>.<p>1971ರ ಜನಗಣತಿ ಪ್ರಕಾರ, ರಾಷ್ಟ್ರದಲ್ಲಿ ಉತ್ತರ ಪ್ರದೇಶವು ಅತ್ಯಂತ ಹೆಚ್ಚು ಜನಭರಿತ ರಾಜ್ಯವಾಗಿದ್ದು, ಅದರ ಜನಸಂಖ್ಯೆ 8,82,99,453.</p>.<p>ಹೆಚ್ಚು ಜನಸಂಖ್ಯೆ ಪಡೆದಿರುವ ಇತರ ರಾಜ್ಯಗಳ ಪೈಕಿ ಮೈಸೂರು ರಾಜ್ಯವು 8ನೇ ಸ್ಥಾನ ಪಡೆದಿದ್ದು, ಅದರ ಜನಸಂಖ್ಯೆ 2,92,24,046.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಸ್ಥಾ ಕಾಂಗ್ರೆಸ್ ಪಕ್ಷದ ಸರ್ಕಾರ ಅಸಂಭವ</strong></p>.<p><strong>ಬೆಂಗಳೂರು, ಏ. 12– </strong>ಸ್ವಶಕ್ತಿಯ ಮೇಲೆ ಮತ್ತೆ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವ ಸಂಸ್ಥಾ ಕಾಂಗ್ರೆಸ್ ಪಕ್ಷ ಈ ಪ್ರಯತ್ನವನ್ನು ಕೈಬಿಡುವ ಸಂಭವ ಹೆಚ್ಚಾಗಿದೆ.</p>.<p>ಅಲ್ಪಸಂಖ್ಯಾತ ಸರ್ಕಾರ ರಚಿಸುವ ತಂಡದ ನಿರ್ಧಾರ ಹಾಗೂ ತಮ್ಮ ಪಕ್ಷದ ಅಂದಾಜು ಆಲೋಚನೆಗಳಿಗೆ ಸಾಮರಸ್ಯ ಉಂಟಾಗದಿರುವ ಪರಿಸ್ಥಿತಿಯನ್ನು ವಿಮರ್ಶಿಸಿ ಪಕ್ಷದ ನಾಯಕ ಶ್ರೀ ವೀರೇಂದ್ರ ಪಾಟೀಲ್ ಅವರು ರಾತ್ರಿ ನಿರ್ಧಾರಕೈಗೊಳ್ಳಲಿದ್ದಾರೆ.</p>.<p>ತಾವು ಮಂತ್ರಿಮಂಡಲವನ್ನು ರಚಿಸು ವುದಿಲ್ಲವೆಂದು ಶ್ರೀ ಪಾಟೀಲರು ನಾಳೆ ತಿಳಿಸಿದಲ್ಲಿ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಲಿದ್ದಾರೆ.</p>.<p><strong>ಜನಸಂಖ್ಯೆ 54 ಕೋಟಿ</strong></p>.<p><strong>ನವದೆಹಲಿ, ಏ. 12– </strong>ಈ ವರ್ಷದ ಜನಗಣತಿ ಪ್ರಕಾರ, ಭಾರತದ ಜನಸಂಖ್ಯೆ ಐವತ್ನಾಲ್ಕು ಕೋಟಿ ಎಪ್ಪತ್ತು ಲಕ್ಷ.</p>.<p>1971ರ ಜನಗಣತಿ ಪ್ರಕಾರ, ರಾಷ್ಟ್ರದಲ್ಲಿ ಉತ್ತರ ಪ್ರದೇಶವು ಅತ್ಯಂತ ಹೆಚ್ಚು ಜನಭರಿತ ರಾಜ್ಯವಾಗಿದ್ದು, ಅದರ ಜನಸಂಖ್ಯೆ 8,82,99,453.</p>.<p>ಹೆಚ್ಚು ಜನಸಂಖ್ಯೆ ಪಡೆದಿರುವ ಇತರ ರಾಜ್ಯಗಳ ಪೈಕಿ ಮೈಸೂರು ರಾಜ್ಯವು 8ನೇ ಸ್ಥಾನ ಪಡೆದಿದ್ದು, ಅದರ ಜನಸಂಖ್ಯೆ 2,92,24,046.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>