ನಿರಾಶ್ರಿತರ ನಿರ್ವಹಣೆ ವ್ಯವಸ್ಥೆ ಕೇಂದ್ರ ಸರ್ಕಾರ ವಹಿಸಿಕೊಳ್ಳಲು ಪಶ್ಚಿಮ ಬಂಗಾಳದ ತುರ್ತು ಸಂದೇಶ
ಕಲ್ಕತ್ತ, ಮೇ 29– ಬಂಗ್ಲಾದೇಶದ ನಿರಾಶ್ರಿತರು ಭಾರೀ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅವರ ನಿರ್ವಹಣೆಯ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಬೇಕೆಂದು ಪಶ್ಚಿಮ ಬಂಗಾಳ ಸರ್ಕಾರ ತುರ್ತು ಸಂದೇಶವೊಂದನ್ನು ಕಳುಹಿಸಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಅಜಯಕುಮಾರ್ ಮುಖರ್ಜಿ ಅವರ ಜತೆಮಾತುಕತೆ ನಡೆಸಿದ ಆನಂತರ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಉಪಮುಖ್ಯಮಂತ್ರಿ ಬಿ.ಎಸ್. ನಹರ್ ಅವರು, ‘ಮಳೆಗಾಲದ ಮುನ್ನಿನ ಮಳೆ ಆರಂಭವಾಗಿದೆ. ನಿರಾಶ್ರಿತರನ್ನು ನೋಡಿಕೊಳ್ಳುವುದು ನಮಗೆ ಅಸಾಧ್ಯ’ ಎಂದರು.