ಪಾಕಿಸ್ತಾನದ ಮೇಲೆ ಯುದ್ಧ ಹೂಡುವ ಮಾತು ಬೇಡ: ‘ತಾಳ್ಮೆ’ಗೆ ಇಂದಿರಾ ಮನವಿ
ನವದೆಹಲಿ, ಜೂನ್ 28– ಬಾಂಗ್ಲಾ ದೇಶದ ವಿಷಯ ಪ್ರಸ್ತಾಪ ಮಾಡುವಾಗ, ಪಾಕಿಸ್ತಾನದ ಮೇಲೆ ಯುದ್ಧ ಹೂಡ ಬೇಕೆಂಬ ಯಾವ ಸಲಹೆಯೂ ಸರಿಯಲ್ಲವೆಂದು ಇಂದು ಬೆಳಿಗ್ಗೆ ಸುಮಾರು ಒಂದು ಗಂಟೆ ಕಾಲ ಭೇಟಿ ಮಾಡಿ ಚರ್ಚೆ ನಡೆಸಿದ ಲೋಕಸಭೆ ವಿರೋಧ ಪಕ್ಷಗಳ ನಾಯಕರಿಗೆ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಸೂಚಿಸಿದುದಾಗಿ ತಿಳಿದುಬಂದಿದೆ.