ಲಖನೌ: ಮೇ 8– ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಲು ಸರ್ಕಾರ ನಿರ್ಧಾರ ಕೈಗೊಂಡಿರುವುದೆಂದು ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಘೋಷಿಸಿದರು.
ಇದಕ್ಕಾಗಿ ಕಟ್ಟುನಿಟ್ಟಾದ ಬೆಲೆ ಹತೋಟಿ ಅಥವಾ ಹೆಚ್ಚು ಸಂಖ್ಯೆಯಲ್ಲಿ ನ್ಯಾಯ ಬೆಲೆ ಅಂಗಡಿಗಳನ್ನು ಆರಂಭಿಸುವುದು ಇಲ್ಲವೇ ಎರಡೂ ಕೈಮಗ್ಗ ಗಳನ್ನು ಒಟ್ಟಾರೆ ಕಾರ್ಯರೂಕ್ಕೆ ತರುವುದನ್ನು ಅವರು ಪ್ರಕಟಿಸಿದರು.
ಕುಮಾಂವ್ ಗಿರಿಧಾಮದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡುತ್ತಾ, ಜನರು ಮತ್ತು ಹಿಂದುಳಿದ ಪ್ರದೇಶಗಳ ಕಲ್ಯಾಣಕ್ಕಾಗಿ ಸರ್ಕಾರ ತೀವ್ರ ಗಮನ ನೀಡುವುದೆಂದು ಹೇಳಿದರು.