ರೈತರು ಮತ್ತು ವರ್ತಕರ ಘೋಷಿತ ದಾಸ್ತಾನಿನ ಅರ್ಧಭಾಗ ಸರ್ಕಾರದ ವಶಕ್ಕೆ
ಬೆಂಗಳೂರು, ಆಗಸ್ಟ್ 23– ವರ್ತಕರು ಹಾಗೂ ರೈತರ ಬಳಿಯಿರುವ ಘೋಷಿತ ದಾಸ್ತಾನಿನಲ್ಲಿ ಶೇ 50ರಷ್ಟನ್ನು ಸ್ವಾಧೀನಪಡಿಸಿಕೊಳ್ಳಲು ಆರಂಭಿಸಿರುವ ಸರ್ಕಾರ ಇಂದು ಆ ಧಾನ್ಯಕ್ಕೆ ಬೆಲೆ ನಿಗದಿ ಮಾಡಿತು.
ಇಂದು ನಡೆದ ಮಂತ್ರಿಮಂಡಲದ ತೀರ್ಮಾನದ ಪ್ರಕಾರ, ಹಾಗೆ ಸ್ವಾಧೀನಕ್ಕೆ ತೆಗೆದುಕೊಳ್ಳುವ ಅಕ್ಕಿ ಹಾಗೂ ಜೋಳಕ್ಕೆ ಆಹಾರ ಕಾರ್ಪೊರೇಷನ್ ನೀಡುವ ಬೆಲೆಯನ್ನು ಕೊಡಲಾಗುವುದು.
ಆಗಸ್ಟ್ 1ರಿಂದ ಈ ರೀತಿ ದಾಸ್ತಾನನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ಆರಂಭಿಸಲಾಗಿದೆ.
ಮಾರುಕಟ್ಟೆಯಲ್ಲಿ ಬೆಲೆ ಏರದಂತೆ ಮಾಡುವುದೇ ಸರ್ಕಾರದ ಈ ಕ್ರಮದ ಉದ್ದೇಶ.
ವಾಪಸಾದ ಬಳಿಕ ಶರಾವತಿ ವಿಚಾರಣೆ ಕುರಿತು ನಿರ್ಧಾರ
ಬೆಂಗಳೂರು, ಆಗಸ್ಟ್ 23– ಮುಖ್ಯ ಮಂತ್ರಿಗಳ ದೆಹಲಿ ಭೇಟಿಯ ನಂತರ ಶರಾವತಿ ಯೋಜನೆ ಕುರಿತು ವಿಚಾರಣೆ ನಡೆಸುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.
ಶರಾವತಿ ವಿದ್ಯುಜ್ಜನಕ ಯಂತ್ರಗಳಿಗೆ ಉಂಟಾಗಿರುವ ನಷ್ಟವನ್ನು ಪರಿಶೀಲಿಸಿ ನಿನ್ನೆ ನಗರಕ್ಕೆ ಹಿಂದುರುಗಿದ ಮುಖ್ಯಮಂತ್ರಿ ಗಳು, ಸಂಜೆ ದೆಹಲಿಗೆ ತೆರಳಿದ್ದು, 26 ಅಥವಾ 27ಕ್ಕೆ ನಗರಕ್ಕೆ ಹಿಂದಿರುಗುವರು.