<p><strong>ಬರಗಾಲ ಪರಿಹಾರ ವೆಚ್ಚದ ಹಣ ಕಸಿದ ಆರೋಪ: ತನಿಖೆಗೆ ಆಗ್ರಹ</strong></p><p>ಬೆಂಗಳೂರು, ಮೇ 28– ಬರಪರಿಹಾರ ಕಾಮಗಾರಿ ವೆಚ್ಚದಲ್ಲಿ ಶೇ 25ರಷ್ಟು ಹಣವನ್ನು ಸಂಸ್ಥಾ ಕಾಂಗ್ರೆಸ್ಸಿನ ಏಜೆಂಟರು ಕಸಿದುಕೊಂಡಿದ್ದಾರೆಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಮಾಡಿದ್ದರೆನ್ನಲಾದ ಚುನಾವಣೆ ಭಾಷಣವನ್ನು ವಿಧಾನ ಪರಿಷತ್ತಿನಲ್ಲಿ ಇಂದು ತೀವ್ರವಾಗಿ ಆಕ್ಷೇಪಿಸಿದ ವಿರೋಧ ಪಕ್ಷದ ನಾಯಕ ರಾಮಕೃಷ್ಣ ಹೆಗಡೆ ಅವರು, ಆ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದರು.</p><p>‘ಗಂಡಸುತನ ಇದ್ದರೆ ನ್ಯಾಯಾಂಗ ತನಿಖೆ ನಡೆಸಿ ಆಪಾದನೆಯನ್ನು ಸಾಬೀತು ಮಾಡಿ. ಇಲ್ಲವಾದರೆ ಆ ಮಾತನ್ನು ವಾಪಸು ತೆಗೆದುಕೊಳ್ಳಿ’ ಎಂದರು.</p><p><strong>ಹಿಡುವಳಿ ಘೋಷಣೆ ಅವಧಿ ವಿಸ್ತರಣೆ: ಇಂದು ತುರ್ತು ಶಾಸನ</strong></p><p>ಬೆಂಗಳೂರು, ಮೇ 28– ರಾಜ್ಯದ ಭೂಸುಧಾರಣೆ ತಿದ್ದುಪಡಿ ಶಾಸನದ ರೀತ್ಯ ಹಿಡುವಳಿದಾರರು ಸರ್ಕಾರಕ್ಕೆ ತಮ್ಮ ಜಮೀನಿನ ಬಗ್ಗೆ ಘೋಷಣೆ ಸಲ್ಲಿಸಲು ಇದ್ದ ಅವಧಿಯನ್ನು 90 ದಿನಗಳಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬರಗಾಲ ಪರಿಹಾರ ವೆಚ್ಚದ ಹಣ ಕಸಿದ ಆರೋಪ: ತನಿಖೆಗೆ ಆಗ್ರಹ</strong></p><p>ಬೆಂಗಳೂರು, ಮೇ 28– ಬರಪರಿಹಾರ ಕಾಮಗಾರಿ ವೆಚ್ಚದಲ್ಲಿ ಶೇ 25ರಷ್ಟು ಹಣವನ್ನು ಸಂಸ್ಥಾ ಕಾಂಗ್ರೆಸ್ಸಿನ ಏಜೆಂಟರು ಕಸಿದುಕೊಂಡಿದ್ದಾರೆಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಮಾಡಿದ್ದರೆನ್ನಲಾದ ಚುನಾವಣೆ ಭಾಷಣವನ್ನು ವಿಧಾನ ಪರಿಷತ್ತಿನಲ್ಲಿ ಇಂದು ತೀವ್ರವಾಗಿ ಆಕ್ಷೇಪಿಸಿದ ವಿರೋಧ ಪಕ್ಷದ ನಾಯಕ ರಾಮಕೃಷ್ಣ ಹೆಗಡೆ ಅವರು, ಆ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದರು.</p><p>‘ಗಂಡಸುತನ ಇದ್ದರೆ ನ್ಯಾಯಾಂಗ ತನಿಖೆ ನಡೆಸಿ ಆಪಾದನೆಯನ್ನು ಸಾಬೀತು ಮಾಡಿ. ಇಲ್ಲವಾದರೆ ಆ ಮಾತನ್ನು ವಾಪಸು ತೆಗೆದುಕೊಳ್ಳಿ’ ಎಂದರು.</p><p><strong>ಹಿಡುವಳಿ ಘೋಷಣೆ ಅವಧಿ ವಿಸ್ತರಣೆ: ಇಂದು ತುರ್ತು ಶಾಸನ</strong></p><p>ಬೆಂಗಳೂರು, ಮೇ 28– ರಾಜ್ಯದ ಭೂಸುಧಾರಣೆ ತಿದ್ದುಪಡಿ ಶಾಸನದ ರೀತ್ಯ ಹಿಡುವಳಿದಾರರು ಸರ್ಕಾರಕ್ಕೆ ತಮ್ಮ ಜಮೀನಿನ ಬಗ್ಗೆ ಘೋಷಣೆ ಸಲ್ಲಿಸಲು ಇದ್ದ ಅವಧಿಯನ್ನು 90 ದಿನಗಳಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>