ರಾಜ್ಯದಲ್ಲಿ ಆಹಾರಧಾನ್ಯ ಅಭಾವ ನಿವಾರಣೆಗೆ ಸರ್ಕಾರದ ವಿಶೇಷ ಕ್ರಮ
ಬೆಂಗಳೂರು, ಆ. 10– ಕೊಯ್ಲಿನ ಪೂರ್ವದ ತಿಂಗಳುಗಳಲ್ಲಿ ರಾಜ್ಯದ ಕೈಗಾರಿಕಾ ಕೇಂದ್ರ
ಗಳು, ಮುಖ್ಯ ಪಟ್ಟಣಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಕಾಣಬಹುದಾದ ಆಹಾರಧಾನ್ಯ ಅಭಾವ ನಿವಾರಣೆಗೆ ಸರ್ಕಾರ ಕೆಲವೊಂದು ವಿಶೇಷ ಕ್ರಮಗಳನ್ನು ಕೈಗೊಂಡಿದೆ.
ಇದರ ಪ್ರಕಾರ, ಹೆಚ್ಚುವರಿ ಆಹಾರಧಾನ್ಯ ಇರುವ ಕಡೆಗಳಿಂದ ಕೊರತೆ ಪ್ರದೇಶಗಳಿಗೆ ಸುಲಭದಲ್ಲಿ ಆಹಾರಧಾನ್ಯ ಸಾಗಿಸುವ ವ್ಯವಸ್ಥೆಗೆ ಅನುವು ಮಾಡಿಕೊಡಲಾಗಿದೆ.
ಬೆಂಗಳೂರಿನ ಬಿಇಎಲ್, ಎಚ್ಎಂಟಿ ಮತ್ತು ಮೈಕೊ ಕಾರ್ಖಾನೆಗಳಿಗೆ ಹೆಚ್ಚುವರಿ ಪ್ರದೇಶದಿಂದ ಲೆವಿ ಇಲ್ಲದೆ ಆಹಾರಧಾನ್ಯ ಸಾಗಿಸಿ ಕಾರ್ಮಿಕರಿಗೆ ಹಂಚುವುದಕ್ಕೆ ಅವಕಾಶ ಮತ್ತು ಅನುಮತಿ ನೀಡಲಾಗಿದೆ.