<p><strong>ಭಾನುವಾರ 24.6.1973</strong></p><p>ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ಲಾಠಿ, ಅಶ್ರುವಾಯು ಪ್ರಯೋಗ</p><p>ಬೆಂಗಳೂರು, ಜೂನ್ 23– ಬೆಲೆ ಏರಿಕೆಯನ್ನು ಪ್ರತಿಭಟಿಸಲು ಸಂಜೆ ವಿಧಾನ ಸೌಧದ ಬಳಿ ಸೇರಿದ್ದ ಭಾರಿ ಕಾರ್ಮಿಕ ಸಮೂಹದ ಒಂದು ಕಡೆ ಕಲ್ಲು ಬಿದ್ದ ನಂತರ ಪೊಲೀಸರು ಲಾಠಿ ಪ್ರಯೋಗ ಮಾಡಿ ಚದುರಿಸಿದರು.</p><p>ಲಾಠಿ ಪ್ರಯೋಗ ಆರಂಭವಾದ ನಂತರ ಅದಕ್ಕೆ ಉತ್ತರವಾಗಿ ಉದ್ರಿಕ್ತ ಕಾರ್ಮಿಕರು ಕಲ್ಲುಗಳನ್ನು ತೂರಲು ಆರಂಭಿಸಿದ ಪರಿಣಾಮವಾಗಿ 29 ಪೊಲೀಸರು ಹಾಗೂ ಅನೇಕ ಕಾರ್ಮಿಕರು ಗಾಯಗೊಂಡರು.</p><p>ಪೊಲೀಸರು ಒಟ್ಟು 100 ಅಶ್ರು ವಾಯು ಶೆಲ್ಗಳನ್ನು ಆಕಾಶದತ್ತ ಹಾರಿಸಿದರು.</p><p>ಕಬ್ಬನ್ ಪಾರ್ಕಿನಿಂದ ನಾನಾ ದಿಕ್ಕುಗಳಲ್ಲಿ ಚೆದುರಿದ ಕಾರ್ಮಿಕರು ಹೋದ ರಸ್ತೆಗಳಲ್ಲಿ ಒಟ್ಟು 10 ಬಿ.ಟಿ.ಎಸ್. ಬಸ್ಸುಗಳಿಗೆ ನಷ್ಟವಾದವು.</p><p>ಇನ್ನೂ ಮೂರು ತಿಂಗಳು ಅಭಾವ ಪರಿಹಾರ ಕಾರ್ಯ; ಫಸಲು ಬಂದರೆ ನಿಲುಗಡೆ</p><p>ಮದರಾಸು, ಜೂನ್ 23– ಮೈಸೂರು ರಾಜ್ಯದ ಅಭಾವ ಪರಿಹಾರ ಕಾಮಗಾರಿಗಳು ಕನಿಷ್ಠ ಇನ್ನು ಮೂರು ತಿಂಗಳಾದರೂ ಮುಂದುವರಿಯುವುದೆಂದು ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಇಂದು ಸುದ್ದಿಗಾರರಿಗೆ ತಿಳಿಸಿದರು.</p><p>ಅಭಾವ ಪರಿಹಾರಕ್ಕಾಗಿ ಇದುವರೆಗೆ ನಲವತ್ತು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಹೇಳಿದ ಅರಸು ಅವರು, ‘ಎಂಟು ಲಕ್ಷ ಮಂದಿ ಸ್ವಯಂ ಸೇವಕರು ಎಡೆಬಿಡದೆ ಕೆಲಸ ಮಾಡುತ್ತಿದ್ದಾರೆ. ಹೊಸ ಬೆಳೆ ಆಗುವವರೆಗೆ ಕಾಮಗಾರಿಗಳು ನಡೆಯುತ್ತಾ ಇರುತ್ತವೆ’ ಎಂದರು.</p><p>ಮೈಸೂರು ರಾಜ್ಯದ ಅಭಾವ ಪರಿಹಾರ ನಿಧಿಗೆ ಕಾಣಿಕೆ ನೀಡಬೇಕೆಂದು ಅವರು ಇಲ್ಲಿನ ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾನುವಾರ 24.6.1973</strong></p><p>ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ಲಾಠಿ, ಅಶ್ರುವಾಯು ಪ್ರಯೋಗ</p><p>ಬೆಂಗಳೂರು, ಜೂನ್ 23– ಬೆಲೆ ಏರಿಕೆಯನ್ನು ಪ್ರತಿಭಟಿಸಲು ಸಂಜೆ ವಿಧಾನ ಸೌಧದ ಬಳಿ ಸೇರಿದ್ದ ಭಾರಿ ಕಾರ್ಮಿಕ ಸಮೂಹದ ಒಂದು ಕಡೆ ಕಲ್ಲು ಬಿದ್ದ ನಂತರ ಪೊಲೀಸರು ಲಾಠಿ ಪ್ರಯೋಗ ಮಾಡಿ ಚದುರಿಸಿದರು.</p><p>ಲಾಠಿ ಪ್ರಯೋಗ ಆರಂಭವಾದ ನಂತರ ಅದಕ್ಕೆ ಉತ್ತರವಾಗಿ ಉದ್ರಿಕ್ತ ಕಾರ್ಮಿಕರು ಕಲ್ಲುಗಳನ್ನು ತೂರಲು ಆರಂಭಿಸಿದ ಪರಿಣಾಮವಾಗಿ 29 ಪೊಲೀಸರು ಹಾಗೂ ಅನೇಕ ಕಾರ್ಮಿಕರು ಗಾಯಗೊಂಡರು.</p><p>ಪೊಲೀಸರು ಒಟ್ಟು 100 ಅಶ್ರು ವಾಯು ಶೆಲ್ಗಳನ್ನು ಆಕಾಶದತ್ತ ಹಾರಿಸಿದರು.</p><p>ಕಬ್ಬನ್ ಪಾರ್ಕಿನಿಂದ ನಾನಾ ದಿಕ್ಕುಗಳಲ್ಲಿ ಚೆದುರಿದ ಕಾರ್ಮಿಕರು ಹೋದ ರಸ್ತೆಗಳಲ್ಲಿ ಒಟ್ಟು 10 ಬಿ.ಟಿ.ಎಸ್. ಬಸ್ಸುಗಳಿಗೆ ನಷ್ಟವಾದವು.</p><p>ಇನ್ನೂ ಮೂರು ತಿಂಗಳು ಅಭಾವ ಪರಿಹಾರ ಕಾರ್ಯ; ಫಸಲು ಬಂದರೆ ನಿಲುಗಡೆ</p><p>ಮದರಾಸು, ಜೂನ್ 23– ಮೈಸೂರು ರಾಜ್ಯದ ಅಭಾವ ಪರಿಹಾರ ಕಾಮಗಾರಿಗಳು ಕನಿಷ್ಠ ಇನ್ನು ಮೂರು ತಿಂಗಳಾದರೂ ಮುಂದುವರಿಯುವುದೆಂದು ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಇಂದು ಸುದ್ದಿಗಾರರಿಗೆ ತಿಳಿಸಿದರು.</p><p>ಅಭಾವ ಪರಿಹಾರಕ್ಕಾಗಿ ಇದುವರೆಗೆ ನಲವತ್ತು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಹೇಳಿದ ಅರಸು ಅವರು, ‘ಎಂಟು ಲಕ್ಷ ಮಂದಿ ಸ್ವಯಂ ಸೇವಕರು ಎಡೆಬಿಡದೆ ಕೆಲಸ ಮಾಡುತ್ತಿದ್ದಾರೆ. ಹೊಸ ಬೆಳೆ ಆಗುವವರೆಗೆ ಕಾಮಗಾರಿಗಳು ನಡೆಯುತ್ತಾ ಇರುತ್ತವೆ’ ಎಂದರು.</p><p>ಮೈಸೂರು ರಾಜ್ಯದ ಅಭಾವ ಪರಿಹಾರ ನಿಧಿಗೆ ಕಾಣಿಕೆ ನೀಡಬೇಕೆಂದು ಅವರು ಇಲ್ಲಿನ ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>