<p><strong>ದೇವೇಗೌಡ –ಅರಸು ಸವಾಲು ಪ್ರಕರಣಕ್ಕೆ ವಿಧಾನಸಭೆ ಅಧಿವೇಶನ ಬಲಿ</strong></p><p>ಬೆಂಗಳೂರು, ಸೆ. 3– ಸೂಚಿತ ಕಾರ್ಯಕ್ರಮ ದಂತೆ ಶನಿವಾರದವರೆಗೆ ಮುಂದುವರಿಯ<br>ಬೇಕಿದ್ದ ವಿಧಾನಸಭೆ ಅಧಿವೇಶನವು ಮೂರು ದಿನಗಳಿಂದ ಇತ್ಯರ್ಥ ಕಾಣದ ‘ಅರಸು–ದೇವೇಗೌಡರ ಸವಾಲು– ಜವಾಬುಗಳ ಪ್ರಕರಣ’ಕ್ಕೆ ಬಲಿಯಾಗಿ, ಅನಿರ್ದಿಷ್ಟ ಕಾಲದವರೆಗೆ ಮುಂದಕ್ಕೆ ಹೋಯಿತು.</p>.<p>ತಾವು ಬಿಜಾಪುರದಲ್ಲಿ ಮಾಡಿದ ಭಾಷಣ ಮತ್ತು ಅದಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಮಾಡಿರುವ ಸವಾಲಿನ ಬಗ್ಗೆ ಯಾವುದೇ ಹೇಳಿಕೆ ಕೊಡಲು ನಿರಾಕರಿಸಿದ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ‘ಈ ಸಂದರ್ಭದಲ್ಲಿ ಹೇಳಿಕೆ ಸೂಕ್ತವಲ್ಲ; ಈ ಸಭೆಯಲ್ಲಿ ಹೇಳಿಕೆ ಕೊಡುವ ಅಗತ್ಯವೂ ಇಲ್ಲ’ ಎಂದು ಒಂದು ಘಟ್ಟದಲ್ಲಿ ವಿರೋಧ ಪಕ್ಷದವರಿಗೆ ಸ್ಪಷ್ಟಪಡಿಸಿದರು.</p>.<p><strong>ಕೊಯ್ನಾ ಜಲಾಶಯದಲ್ಲಿ ರಾಜ್ಯಕ್ಕೆ ಪಾಲು ಇಲ್ಲ: ಅರಸು</strong></p>.<p>ಬೆಂಗಳೂರು, ಸೆ. 3– ಮಹಾರಾಷ್ಟ್ರದ ಕೊಯ್ನಾ ಜಲಾಶಯದಲ್ಲಿ ಕರ್ನಾಟಕದ ಪಾಲು ಪಡೆಯಲು ಇದ್ದ ಅವಕಾಶವನ್ನು ಕಳೆದುಕೊಂಡ ವಿಷಯವನ್ನು ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ಬಹಿರಂಗಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವೇಗೌಡ –ಅರಸು ಸವಾಲು ಪ್ರಕರಣಕ್ಕೆ ವಿಧಾನಸಭೆ ಅಧಿವೇಶನ ಬಲಿ</strong></p><p>ಬೆಂಗಳೂರು, ಸೆ. 3– ಸೂಚಿತ ಕಾರ್ಯಕ್ರಮ ದಂತೆ ಶನಿವಾರದವರೆಗೆ ಮುಂದುವರಿಯ<br>ಬೇಕಿದ್ದ ವಿಧಾನಸಭೆ ಅಧಿವೇಶನವು ಮೂರು ದಿನಗಳಿಂದ ಇತ್ಯರ್ಥ ಕಾಣದ ‘ಅರಸು–ದೇವೇಗೌಡರ ಸವಾಲು– ಜವಾಬುಗಳ ಪ್ರಕರಣ’ಕ್ಕೆ ಬಲಿಯಾಗಿ, ಅನಿರ್ದಿಷ್ಟ ಕಾಲದವರೆಗೆ ಮುಂದಕ್ಕೆ ಹೋಯಿತು.</p>.<p>ತಾವು ಬಿಜಾಪುರದಲ್ಲಿ ಮಾಡಿದ ಭಾಷಣ ಮತ್ತು ಅದಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಮಾಡಿರುವ ಸವಾಲಿನ ಬಗ್ಗೆ ಯಾವುದೇ ಹೇಳಿಕೆ ಕೊಡಲು ನಿರಾಕರಿಸಿದ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ‘ಈ ಸಂದರ್ಭದಲ್ಲಿ ಹೇಳಿಕೆ ಸೂಕ್ತವಲ್ಲ; ಈ ಸಭೆಯಲ್ಲಿ ಹೇಳಿಕೆ ಕೊಡುವ ಅಗತ್ಯವೂ ಇಲ್ಲ’ ಎಂದು ಒಂದು ಘಟ್ಟದಲ್ಲಿ ವಿರೋಧ ಪಕ್ಷದವರಿಗೆ ಸ್ಪಷ್ಟಪಡಿಸಿದರು.</p>.<p><strong>ಕೊಯ್ನಾ ಜಲಾಶಯದಲ್ಲಿ ರಾಜ್ಯಕ್ಕೆ ಪಾಲು ಇಲ್ಲ: ಅರಸು</strong></p>.<p>ಬೆಂಗಳೂರು, ಸೆ. 3– ಮಹಾರಾಷ್ಟ್ರದ ಕೊಯ್ನಾ ಜಲಾಶಯದಲ್ಲಿ ಕರ್ನಾಟಕದ ಪಾಲು ಪಡೆಯಲು ಇದ್ದ ಅವಕಾಶವನ್ನು ಕಳೆದುಕೊಂಡ ವಿಷಯವನ್ನು ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ಬಹಿರಂಗಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>