ಒಣ ಜಿಲ್ಲೆಗಳಲ್ಲಿ ಫಲಕ್ಷೇತ್ರ
ಬೆಂಗಳೂರು, ಜ. 9– ಒಣ ಜಿಲ್ಲೆಗಳಾದ ಬಿಜಾಪುರ, ಗುಲ್ಬರ್ಗ, ರಾಯಚೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯವಿಸ್ತರಿಸುವುದರ ಜೊತೆಗೆ ಮೋಸಂಬಿ ಫಲವನ್ನು ಪಡೆಯಲು ತೋಟಗಾರಿಕೆ ಇಲಾಖೆ ಕ್ರಮ ಕೈಗೊಳ್ಳಲಿದೆ.
ಕೃಷ್ಣಾ ಮೇಲಣ ಯೋಜನೆ, ಮಲಪ್ರಭಾ, ಘಟಪ್ರಭಾ ಯೋಜನೆಗಳು ನೀರಾವರಿ ಸೌಲಭ್ಯ ನೀಡುವ ಮುನ್ನ ಏತ ನೀರಾವರಿ ಮೂಲಕ ಈ ಹಣ್ಣನ್ನು ಬೆಳೆಯುವ ಬಗ್ಗೆ ಜನರಿಗೆ ಪರಿಚಯ ಮಾಡಿಕೊಡಲಾಗುವುದು ಎಂದು ತೋಟಗಾರಿಕೆ ರಾಜ್ಯ ಸಚಿವ ಕೆ.ಟಿ.ರಾಠೋಡ್ ಸುದ್ದಿಗಾರರಿಗೆ ತಿಳಿಸಿದರು.