<p><strong>ಬೆಂಗಳೂರು, ಜೂನ್ 7:</strong> ಹುಬ್ಬಳ್ಳಿ–ಧಾರವಾಡ ನಗರಸಭೆಯ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಶೀಘ್ರ ಚುನಾವಣೆ ಸಂಬಂಧದಲ್ಲಿ, ಸರ್ಕಾರದಿಂದ ಸ್ಪಷ್ಟ ಭರವಸೆ ಪಡೆಯಲು ಅಸಮರ್ಥರಾದ ಜನಸಂಘದ ಇಬ್ಬರು ಸದಸ್ಯರು ಇಂದು ವಿಧಾನಪರಿಷತ್ತಿನಲ್ಲಿ ಧರಣಿ ಸತ್ಯಾಗ್ರಹ ಕುಳಿತರು. </p><p>ಚುನಾವಣೆ ನಡೆಯಲು ಜೂನ್ ಅಂತ್ಯದವರೆಗೆ ಕಾಲಾವಧಿ ಇರುವಾಗ, ಸರ್ಕಾರ ಈ ಘಟ್ಟದಲ್ಲಿ ಯಾವ ರೀತಿಯಲ್ಲಿಯೂ ಹಸ್ತಕ್ಷೇಪ ಮಾಡುವಂತಿಲ್ಲ ಎಂಬುದು ಕಾನೂನು ಮಂತ್ರಿ ಡಿ.ಕೆ. ನಾಯ್ಕರ್ ಅವರ ನಿಲುವು. </p><p><strong>ಅಣ್ವಸ್ತ್ರ ಸೇನಾಪಡೆಗೆ ಭಾರತದ ಸಿದ್ಧತೆ</strong></p><p>ನವದೆಹಲಿ, ಜೂನ್ 7: ಶಾಂತಿಯುತ ಬಳಕೆಗಾಗಿ ಭಾರತ ಕೈಗೊಂಡ ಪ್ರಯೋಗಾರ್ಥ ಅಣುಸ್ಫೋಟಕ್ಕೆ ಸೇನಾ ಸಜ್ಜಿನ ಉದ್ದೇಶಗಳನ್ನು ಕಲ್ಪಿಸಿ ಪಾಕ್ ಪ್ರಧಾನಿ ಭುಟ್ಟೊ ಇಂದು ಪ್ರಧಾನಿ ಇಂದಿರಾ ಗಾಂಧಿ ಅವರ ಪತ್ರಕ್ಕೆ ಉತ್ತರವಿತ್ತಿದ್ದಾರೆ. </p><p>ಶಾಂತಿ, ಪ್ರಗತಿಯ ಉದ್ದೇಶ ಪ್ರತಿಪಾದಿಸಿ ಇಂದಿರಾ ಗಾಂಧಿ ಅವರು ಬರೆದಿದ್ದ ಪತ್ರಕ್ಕೆ 16 ದಿನಗಳ ಬಳಿಕ ಇಂದು ಭುಟ್ಟೊ ಇತ್ತಿರುವ ಉತ್ತರದಲ್ಲಿ ಅಡಕವಾಗಿರುವ ಶಂಕೆಗಳು ‘ಆಧಾರರಹಿತ ಆಪಾದನೆಗಳು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸ್ವರಣ್ ಸಿಂಗ್ ವಿವರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು, ಜೂನ್ 7:</strong> ಹುಬ್ಬಳ್ಳಿ–ಧಾರವಾಡ ನಗರಸಭೆಯ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಶೀಘ್ರ ಚುನಾವಣೆ ಸಂಬಂಧದಲ್ಲಿ, ಸರ್ಕಾರದಿಂದ ಸ್ಪಷ್ಟ ಭರವಸೆ ಪಡೆಯಲು ಅಸಮರ್ಥರಾದ ಜನಸಂಘದ ಇಬ್ಬರು ಸದಸ್ಯರು ಇಂದು ವಿಧಾನಪರಿಷತ್ತಿನಲ್ಲಿ ಧರಣಿ ಸತ್ಯಾಗ್ರಹ ಕುಳಿತರು. </p><p>ಚುನಾವಣೆ ನಡೆಯಲು ಜೂನ್ ಅಂತ್ಯದವರೆಗೆ ಕಾಲಾವಧಿ ಇರುವಾಗ, ಸರ್ಕಾರ ಈ ಘಟ್ಟದಲ್ಲಿ ಯಾವ ರೀತಿಯಲ್ಲಿಯೂ ಹಸ್ತಕ್ಷೇಪ ಮಾಡುವಂತಿಲ್ಲ ಎಂಬುದು ಕಾನೂನು ಮಂತ್ರಿ ಡಿ.ಕೆ. ನಾಯ್ಕರ್ ಅವರ ನಿಲುವು. </p><p><strong>ಅಣ್ವಸ್ತ್ರ ಸೇನಾಪಡೆಗೆ ಭಾರತದ ಸಿದ್ಧತೆ</strong></p><p>ನವದೆಹಲಿ, ಜೂನ್ 7: ಶಾಂತಿಯುತ ಬಳಕೆಗಾಗಿ ಭಾರತ ಕೈಗೊಂಡ ಪ್ರಯೋಗಾರ್ಥ ಅಣುಸ್ಫೋಟಕ್ಕೆ ಸೇನಾ ಸಜ್ಜಿನ ಉದ್ದೇಶಗಳನ್ನು ಕಲ್ಪಿಸಿ ಪಾಕ್ ಪ್ರಧಾನಿ ಭುಟ್ಟೊ ಇಂದು ಪ್ರಧಾನಿ ಇಂದಿರಾ ಗಾಂಧಿ ಅವರ ಪತ್ರಕ್ಕೆ ಉತ್ತರವಿತ್ತಿದ್ದಾರೆ. </p><p>ಶಾಂತಿ, ಪ್ರಗತಿಯ ಉದ್ದೇಶ ಪ್ರತಿಪಾದಿಸಿ ಇಂದಿರಾ ಗಾಂಧಿ ಅವರು ಬರೆದಿದ್ದ ಪತ್ರಕ್ಕೆ 16 ದಿನಗಳ ಬಳಿಕ ಇಂದು ಭುಟ್ಟೊ ಇತ್ತಿರುವ ಉತ್ತರದಲ್ಲಿ ಅಡಕವಾಗಿರುವ ಶಂಕೆಗಳು ‘ಆಧಾರರಹಿತ ಆಪಾದನೆಗಳು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸ್ವರಣ್ ಸಿಂಗ್ ವಿವರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>