<p>ಕೂಗು ಕೈಮೀರುವ ಮುನ್ನ ಕೇಂದ್ರದಿಂದ ನಿರ್ದಿಷ್ಟ ನೀತಿಗೆ ಕರ್ನಾಟಕ ರಾಜ್ಯದ ಸಲಹೆ</p><p><strong>ಬೆಂಗಳೂರು, ಜೂನ್ 6:</strong> ಸ್ಥಳೀಯರಿಗೆ ಉದ್ಯೋಗ ಎಂಬ ಆಗ್ರಹ ನೆರೆರಾಜ್ಯಗಳಲ್ಲಿ ಕೆಟ್ಟ ರೂಪ ತಾಳುತ್ತಿರುವುದನ್ನು ಕಂಡು ಕಳವಳಗೊಂಡಿರುವ ಕರ್ನಾಟಕವು, ‘ಈ ದಿಸೆಯಲ್ಲಿ ಕೇಂದ್ರ ಸರ್ಕಾರವೇ ಒಂದು ನಿರ್ದಿಷ್ಟ ನೀತಿ ರೂಪಿಸಿ ಎಲ್ಲ ರಾಜ್ಯಗಳು ಅದಕ್ಕೆ ಬದ್ಧವಾಗಿರುವಂತೆ ಮಾಡುವ ವ್ಯವಸ್ಥೆ ಮಾಡಬೇಕು’ ಎಂದು ಸಲಹೆ ಮಾಡಲಿದೆ.</p><p>ಅಂಥ ಒಂದು ನೀತಿಯನ್ನು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಅಥವಾ ರಾಷ್ಟ್ರೀಯ ಐಕ್ಯ ಮಂಡಳಿ ತಯಾರಿಸಬೇಕು, ಈ ಕಾರ್ಯದಲ್ಲಿ ಪ್ರಧಾನಿಯವರೇ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂಬುದು ರಾಜ್ಯ ಸರ್ಕಾರದ ಆಶಯವಾಗಿದೆ.</p> <p><strong>ನವದೆಹಲಿ, ಜೂನ್ 6:</strong> ಅತ್ಯಗತ್ಯ ವಸ್ತುಗಳ ಕಾಯ್ದೆಯಂತೆ ಕ್ವಿಂಟಲ್ ಗೋಧಿಗೆ 150 ರೂಪಾಯಿ ಗರಿಷ್ಠ ಮಾರಾಟದ ಬೆಲೆ ನಿಗದಿ ಮಾಡಿ ಕೇಂದ್ರ ಸರ್ಕಾರವು ಇಂದು ಸುಗ್ರೀವಾಜ್ಞೆ ಹೊರಡಿಸಿತು.</p><p>ಆಹಾರ ಕೊರತೆಯಿರುವ ರಾಜ್ಯಗಳಲ್ಲಿ ಗೋಧಿ ಮಾರಾಟ ಬೆಲೆಯನ್ನು ಸೂಕ್ತವಾದ ಮಟ್ಟಕ್ಕೆ ಸೀಮಿತಗೊಳಿಸಲು ಕೈಗೊಂಡ ಈ ಕ್ರಮವು ಈಗಿಂದೀಗಲೇ ಜಾರಿಗೆ ಬರುತ್ತದೆ.</p><p>ಸರ್ಕಾರ ನಿಗದಿ ಮಾಡಿದ ಗರಿಷ್ಠ ಮಾರಾಟದ ಬೆಲೆಯಲ್ಲೇ ಎಲ್ಲ ಸಾಗಾಣಿಕೆ ವೆಚ್ಚ ಮತ್ತು ತೆರಿಗೆಗಳೂ ಸೇರಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೂಗು ಕೈಮೀರುವ ಮುನ್ನ ಕೇಂದ್ರದಿಂದ ನಿರ್ದಿಷ್ಟ ನೀತಿಗೆ ಕರ್ನಾಟಕ ರಾಜ್ಯದ ಸಲಹೆ</p><p><strong>ಬೆಂಗಳೂರು, ಜೂನ್ 6:</strong> ಸ್ಥಳೀಯರಿಗೆ ಉದ್ಯೋಗ ಎಂಬ ಆಗ್ರಹ ನೆರೆರಾಜ್ಯಗಳಲ್ಲಿ ಕೆಟ್ಟ ರೂಪ ತಾಳುತ್ತಿರುವುದನ್ನು ಕಂಡು ಕಳವಳಗೊಂಡಿರುವ ಕರ್ನಾಟಕವು, ‘ಈ ದಿಸೆಯಲ್ಲಿ ಕೇಂದ್ರ ಸರ್ಕಾರವೇ ಒಂದು ನಿರ್ದಿಷ್ಟ ನೀತಿ ರೂಪಿಸಿ ಎಲ್ಲ ರಾಜ್ಯಗಳು ಅದಕ್ಕೆ ಬದ್ಧವಾಗಿರುವಂತೆ ಮಾಡುವ ವ್ಯವಸ್ಥೆ ಮಾಡಬೇಕು’ ಎಂದು ಸಲಹೆ ಮಾಡಲಿದೆ.</p><p>ಅಂಥ ಒಂದು ನೀತಿಯನ್ನು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಅಥವಾ ರಾಷ್ಟ್ರೀಯ ಐಕ್ಯ ಮಂಡಳಿ ತಯಾರಿಸಬೇಕು, ಈ ಕಾರ್ಯದಲ್ಲಿ ಪ್ರಧಾನಿಯವರೇ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂಬುದು ರಾಜ್ಯ ಸರ್ಕಾರದ ಆಶಯವಾಗಿದೆ.</p> <p><strong>ನವದೆಹಲಿ, ಜೂನ್ 6:</strong> ಅತ್ಯಗತ್ಯ ವಸ್ತುಗಳ ಕಾಯ್ದೆಯಂತೆ ಕ್ವಿಂಟಲ್ ಗೋಧಿಗೆ 150 ರೂಪಾಯಿ ಗರಿಷ್ಠ ಮಾರಾಟದ ಬೆಲೆ ನಿಗದಿ ಮಾಡಿ ಕೇಂದ್ರ ಸರ್ಕಾರವು ಇಂದು ಸುಗ್ರೀವಾಜ್ಞೆ ಹೊರಡಿಸಿತು.</p><p>ಆಹಾರ ಕೊರತೆಯಿರುವ ರಾಜ್ಯಗಳಲ್ಲಿ ಗೋಧಿ ಮಾರಾಟ ಬೆಲೆಯನ್ನು ಸೂಕ್ತವಾದ ಮಟ್ಟಕ್ಕೆ ಸೀಮಿತಗೊಳಿಸಲು ಕೈಗೊಂಡ ಈ ಕ್ರಮವು ಈಗಿಂದೀಗಲೇ ಜಾರಿಗೆ ಬರುತ್ತದೆ.</p><p>ಸರ್ಕಾರ ನಿಗದಿ ಮಾಡಿದ ಗರಿಷ್ಠ ಮಾರಾಟದ ಬೆಲೆಯಲ್ಲೇ ಎಲ್ಲ ಸಾಗಾಣಿಕೆ ವೆಚ್ಚ ಮತ್ತು ತೆರಿಗೆಗಳೂ ಸೇರಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>