ಬೆಂಗಳೂರು, ಮೇ 11– ಎರಡು ವರ್ಷದ ಗೇಣಿ ಬಾಕಿಯನ್ನು ಗೇಣಿದಾರ ಪಾವತಿ ಮಾಡಿದಲ್ಲಿ, ಆತನನ್ನು ಒಕ್ಕಲೆಬ್ಬಿಸುವುದರ ವಿರುದ್ಧ ರಕ್ಷಣೆ ನೀಡಿ ಸರ್ಕಾರ ಇಂದು ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತು.
ಗೇಣಿದಾರರಿಗೆ ಈ ರಕ್ಷಣೆ ನೀಡಲು ಕಳೆದ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಿದ್ದ ವಿಧೇಯಕವು ಶಾಸನವಾಗಲು ಸಾಧ್ಯವಾಗಲಿಲ್ಲವಾಗಿ ಸರ್ಕಾರ ಈಗ ಜರೂರು ಶಾಸನವನ್ನು ಜಾರಿಗೆ ತಂದಿದೆ.ಈ ತುರ್ತು ಶಾಸನ ಮೇ 11ರಿಂದ ಜಾರಿಗೆ ಬಂದಿದೆ. ಮಂಡಿಸಲಾಗಿದ್ದ ವಿಧೇಯಕದಲ್ಲಿದ್ದ ವಿಧಿಗಳೆಲ್ಲವೂ ಈ ಜರೂರು ಶಾಸನದಲ್ಲಿವೆ.
ಈ ವಿಧಿಗಳ ರೀತ್ಯ, ಗೇಣಿ ಬಾಕಿ ಕೊಡಲಿಲ್ಲವೆಂಬ ಕಾರಣದ ಮೇಲೆ ಭೂ ಮಾಲೀಕನ ಸ್ವಾಧೀನಕ್ಕೆ ಜಮೀನು ಹೋಗ ಬೇಕೆಂಬ ನ್ಯಾಯಾಲಯದ ಆಜ್ಞೆಯನ್ನೇ ಆಗಲಿ, ಗೇಣಿದಾರ 2 ವರ್ಷಗಳ ಗೇಣಿ ಬಾಕಿ ಪಾವತಿಸಿದಲ್ಲಿ ಜಾರಿಗೆ ತರುವಂತಿಲ್ಲ.