<p><strong>ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಹಣ ಒದಗಿಸದು: ಸಚಿವ ಪೈ ವಿವರಣೆ</strong></p><p>ಮಂಗಳೂರು, ಆ. 4– ಕೇಂದ್ರ ಸರ್ಕಾರ ಪ್ರವಾಹ ಮತ್ತು ಕ್ಷಾಮಪೀಡಿತ ಪ್ರದೇಶಗಳ ಜನರಿಗೆ ಪರಿಹಾರ ಒದಗಿಸಲು ಹಣ ನೀಡುವುದನ್ನು ನಿಲ್ಲಿಸಿದೆ ಎಂದು ಕೇಂದ್ರ ಸಚಿವ ಟಿ.ಎ. ಪೈ ಅವರು ಇಂದು ಇಲ್ಲಿ ತಿಳಿಸಿದರು.</p><p>‘ಪರಿಹಾರಕ್ಕಾಗಿ ಕೊಟ್ಟ ಹಣದ ಸರಿಯಾದ ವಿನಿಯೋಗ ಮತ್ತು ಉಸ್ತುವಾರಿ ಕಷ್ಟಕರ. ಇಂತಹ ಕಷ್ಟಸ್ಥಿತಿ ಒದಗಿದಾಗ ಸಮಾಜ ಮುಂದೆ ಬಂದು ಸಂತ್ರಸ್ತರಿಗೆ ನೆರವು ನೀಡಬೇಕು’ ಎಂದು ಅವರು ಹೇಳಿದರು.</p><p>ಬಜಪೆ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನಿಂದ ಬಂದಿಳಿದ ಸಚಿವ ಪೈ ಅವರು, ಪ್ರವಾಹದಿಂದಾಗಿರುವ ಕಷ್ಟಸ್ಥಿತಿ ಮತ್ತು ಪರಿಹಾರ ಕಾರ್ಯಕ್ರಮ ಕುರಿತು ಮುಖಂಡರು ಮತ್ತು ಅಧಿಕಾರಿಗಳೊಡನೆ ಚರ್ಚಿಸಿದರು.</p><p><strong>ರಾಜ್ಯದ ಸಂಪತ್ ಸಾಧನ ಬಳಸಿ ಕಾಳಿ ಯೋಜನೆ ಪೂರೈಕೆ</strong></p><p>ಚಿತ್ರದುರ್ಗ, ಆ. 4– ರಾಜ್ಯ ಸರ್ಕಾರ ತನ್ನಲ್ಲಿರುವ ಎಲ್ಲ ಸಂಪತ್ ಸಾಧನಗಳಿಂದಲೇ ಕಾಳಿ ನದಿ ಜಲವಿದ್ಯುತ್ ಯೋಜನೆಯನ್ನು ನಿಲ್ಲಿಸದೆ ಮುಂದುವರಿಸಿಕೊಂಡು ಹೋಗುವುದಾಗಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಹೊಳಲ್ಕೆರೆಯಲ್ಲಿ ಹೇಳಿದರು.</p><p>ಹಿಂದಿನ ಸರ್ಕಾರಗಳಂತಲ್ಲದ ಪ್ರಸ್ತುತ ಸರ್ಕಾರ ತನ್ನ ಸಂಪತ್ತನ್ನು ಉತ್ಪಾದನಾ ಮತ್ತು ಸಂಪತ್ ಗಳಿಕೆಯ ಕಾರ್ಯಗಳಿಗಾಗಿ ಮಾತ್ರ ವೆಚ್ಚ ಮಾಡುತ್ತಿದೆಯೆಂದು ಹೇಳಿ, ಎಲ್ಲ ಕಾಮಗಾರಿಗಳಿಗೂ ಸಿಮೆಂಟ್ ಮತ್ತು ಕಬ್ಬಿಣವನ್ನೇ ಬಯಸುತ್ತಿರುವ ಇಂದಿನ ಎಂಜಿನಿಯರ್ಗಳ ಮನೋಭಾವನೆ ಬಗ್ಗೆ ಕಟುವಾಗಿ ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಹಣ ಒದಗಿಸದು: ಸಚಿವ ಪೈ ವಿವರಣೆ</strong></p><p>ಮಂಗಳೂರು, ಆ. 4– ಕೇಂದ್ರ ಸರ್ಕಾರ ಪ್ರವಾಹ ಮತ್ತು ಕ್ಷಾಮಪೀಡಿತ ಪ್ರದೇಶಗಳ ಜನರಿಗೆ ಪರಿಹಾರ ಒದಗಿಸಲು ಹಣ ನೀಡುವುದನ್ನು ನಿಲ್ಲಿಸಿದೆ ಎಂದು ಕೇಂದ್ರ ಸಚಿವ ಟಿ.ಎ. ಪೈ ಅವರು ಇಂದು ಇಲ್ಲಿ ತಿಳಿಸಿದರು.</p><p>‘ಪರಿಹಾರಕ್ಕಾಗಿ ಕೊಟ್ಟ ಹಣದ ಸರಿಯಾದ ವಿನಿಯೋಗ ಮತ್ತು ಉಸ್ತುವಾರಿ ಕಷ್ಟಕರ. ಇಂತಹ ಕಷ್ಟಸ್ಥಿತಿ ಒದಗಿದಾಗ ಸಮಾಜ ಮುಂದೆ ಬಂದು ಸಂತ್ರಸ್ತರಿಗೆ ನೆರವು ನೀಡಬೇಕು’ ಎಂದು ಅವರು ಹೇಳಿದರು.</p><p>ಬಜಪೆ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನಿಂದ ಬಂದಿಳಿದ ಸಚಿವ ಪೈ ಅವರು, ಪ್ರವಾಹದಿಂದಾಗಿರುವ ಕಷ್ಟಸ್ಥಿತಿ ಮತ್ತು ಪರಿಹಾರ ಕಾರ್ಯಕ್ರಮ ಕುರಿತು ಮುಖಂಡರು ಮತ್ತು ಅಧಿಕಾರಿಗಳೊಡನೆ ಚರ್ಚಿಸಿದರು.</p><p><strong>ರಾಜ್ಯದ ಸಂಪತ್ ಸಾಧನ ಬಳಸಿ ಕಾಳಿ ಯೋಜನೆ ಪೂರೈಕೆ</strong></p><p>ಚಿತ್ರದುರ್ಗ, ಆ. 4– ರಾಜ್ಯ ಸರ್ಕಾರ ತನ್ನಲ್ಲಿರುವ ಎಲ್ಲ ಸಂಪತ್ ಸಾಧನಗಳಿಂದಲೇ ಕಾಳಿ ನದಿ ಜಲವಿದ್ಯುತ್ ಯೋಜನೆಯನ್ನು ನಿಲ್ಲಿಸದೆ ಮುಂದುವರಿಸಿಕೊಂಡು ಹೋಗುವುದಾಗಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಹೊಳಲ್ಕೆರೆಯಲ್ಲಿ ಹೇಳಿದರು.</p><p>ಹಿಂದಿನ ಸರ್ಕಾರಗಳಂತಲ್ಲದ ಪ್ರಸ್ತುತ ಸರ್ಕಾರ ತನ್ನ ಸಂಪತ್ತನ್ನು ಉತ್ಪಾದನಾ ಮತ್ತು ಸಂಪತ್ ಗಳಿಕೆಯ ಕಾರ್ಯಗಳಿಗಾಗಿ ಮಾತ್ರ ವೆಚ್ಚ ಮಾಡುತ್ತಿದೆಯೆಂದು ಹೇಳಿ, ಎಲ್ಲ ಕಾಮಗಾರಿಗಳಿಗೂ ಸಿಮೆಂಟ್ ಮತ್ತು ಕಬ್ಬಿಣವನ್ನೇ ಬಯಸುತ್ತಿರುವ ಇಂದಿನ ಎಂಜಿನಿಯರ್ಗಳ ಮನೋಭಾವನೆ ಬಗ್ಗೆ ಕಟುವಾಗಿ ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>