<p><strong>‘ವಂಶವೃಕ್ಷ’ದ ಗಿರೀಶ್, ಕಾರಂತ್ ಶ್ರೇಷ್ಠ ನಿರ್ದೇಶಕರು</strong></p>.<p>ನವದೆಹಲಿ, ಮೇ.1– ‘ವಂಶವೃಕ್ಷ’ ಕನ್ನಡ ಚಿತ್ರದ ನಿರ್ದೇಶಕರಾದ ಗಿರೀಶ ಕಾರ್ನಾಡ ಮತ್ತು ಬಿ.ವಿ.ಕಾರಂತ್ ಅವರು ಅತ್ಯುತ್ತಮ ನಿರ್ದೇಶಕರೆಂದು ಪರಿಗಣಿತರಾಗಿದ್ದಾರೆ.</p>.<p>‘ವಂಶವೃಕ್ಷ’ಕ್ಕೆ ಪ್ರಾದೇಶಿಕ ಪ್ರಶಸ್ತಿ ದೊರತಿದೆ.ಚಲನಚಿತ್ರಗಳ ಹತ್ತೊಂಬತ್ತನೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಇಂದು ಪ್ರಕಟಿ<br />ಸಲಾಯಿತು.</p>.<p>ಅಂತರ ರಾಷ್ಟ್ರೀಯ ಖ್ಯಾತಿ ಪಡೆದ ಸತ್ಯಜಿತ್ರಾಯ್ ಅವರ ಬಂಗಾಳಿ ಕಥಾಚಿತ್ರ ‘ಸೀಮಬದ್ಧ’ಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಕೊಡಲಾಗಿದೆ.</p>.<p>ಹಿಂದಿ ಕಥಾಚಿತ್ರ ‘ಅನುಭವ್’ ಎರಡನೆ ಅತ್ಯುತ್ತಮ ಚಿತ್ರವೆಂದು ಪರಿಗಣಿತವಾಗಿದೆ. ಕೆ.ಎ. ಅಬ್ಬಾಸ್ ಅವರ ‘ಧೋಬೂಂದ್ ಪಾನಿ’ ರಾಷ್ಟ್ರೈಕ್ಯದ ಕಥಾವಸ್ತುವಿಗಾಗಿ ಪ್ರಶಸ್ತಿ ಗಳಿಸಿದೆ.</p>.<p><strong>ಸಚಿವರ ಕಿಸೆಗೇ ಕಳ್ಳ ಕತ್ತರಿ</strong></p>.<p>ಬೆಂಗಳೂರು, ಮೇ.1– ರಾಜ್ಯದ //ಶಾಖೆಯ ರಾಜ್ಯ ಸಚಿವ ಶ್ರೀ.//ಡಿ.ಕಿತ್ತೂರ್ ಅವರ ಜೇಬು ಕಳ್ಳತನ ಮಾಡಿ, 500 ರೂಪಾಯಿ ಅಪಹರಿಸಿದ ಪ್ರಕರಣ ವರದಿ ಆಗಿದೆ.</p>.<p>ಕಳೆದ ಶನಿವಾರ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರು ಲಾಲ್// ಗಾಜಿನ ಮನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಈ ಪ್ರಕರಣ ನಡೆಯಿತೆಂದು ಹೇಳಲಾಗಿದೆ.</p>.<p>ವೇದಿಕೆಯಿಂದ ಸುಮಾರು 20 ಅಡಿ ಅಂತರದಲ್ಲಿ// 5 ಮತ್ತು 10 ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳ ಬಿದ್ದಿರುವುದು ಕಂಡುಬಂತು. ಸಚಿವ ಶ್ರೀ ಕಿತ್ತೂರ್ ಅವರು ಅವುಗಳನ್ನು ತೆಗೆದುಕೊಂಡು ತಮ್ಮ ಜೇಬಿಗೆ ಕೈ ಹಾಕಿದಾಗ //100 ರೂಪಾಯಿ ಮೌಲ್ಯದ ಐದು ಕರೆನ್ಸಿ ನೋಟುಗಳಿದ್ದ ಕವರ್ ಮಯಾವಾಗಿತ್ತು. ಶ್ರೀ ಕಿತ್ತೂರ್ ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ವಂಶವೃಕ್ಷ’ದ ಗಿರೀಶ್, ಕಾರಂತ್ ಶ್ರೇಷ್ಠ ನಿರ್ದೇಶಕರು</strong></p>.<p>ನವದೆಹಲಿ, ಮೇ.1– ‘ವಂಶವೃಕ್ಷ’ ಕನ್ನಡ ಚಿತ್ರದ ನಿರ್ದೇಶಕರಾದ ಗಿರೀಶ ಕಾರ್ನಾಡ ಮತ್ತು ಬಿ.ವಿ.ಕಾರಂತ್ ಅವರು ಅತ್ಯುತ್ತಮ ನಿರ್ದೇಶಕರೆಂದು ಪರಿಗಣಿತರಾಗಿದ್ದಾರೆ.</p>.<p>‘ವಂಶವೃಕ್ಷ’ಕ್ಕೆ ಪ್ರಾದೇಶಿಕ ಪ್ರಶಸ್ತಿ ದೊರತಿದೆ.ಚಲನಚಿತ್ರಗಳ ಹತ್ತೊಂಬತ್ತನೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಇಂದು ಪ್ರಕಟಿ<br />ಸಲಾಯಿತು.</p>.<p>ಅಂತರ ರಾಷ್ಟ್ರೀಯ ಖ್ಯಾತಿ ಪಡೆದ ಸತ್ಯಜಿತ್ರಾಯ್ ಅವರ ಬಂಗಾಳಿ ಕಥಾಚಿತ್ರ ‘ಸೀಮಬದ್ಧ’ಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಕೊಡಲಾಗಿದೆ.</p>.<p>ಹಿಂದಿ ಕಥಾಚಿತ್ರ ‘ಅನುಭವ್’ ಎರಡನೆ ಅತ್ಯುತ್ತಮ ಚಿತ್ರವೆಂದು ಪರಿಗಣಿತವಾಗಿದೆ. ಕೆ.ಎ. ಅಬ್ಬಾಸ್ ಅವರ ‘ಧೋಬೂಂದ್ ಪಾನಿ’ ರಾಷ್ಟ್ರೈಕ್ಯದ ಕಥಾವಸ್ತುವಿಗಾಗಿ ಪ್ರಶಸ್ತಿ ಗಳಿಸಿದೆ.</p>.<p><strong>ಸಚಿವರ ಕಿಸೆಗೇ ಕಳ್ಳ ಕತ್ತರಿ</strong></p>.<p>ಬೆಂಗಳೂರು, ಮೇ.1– ರಾಜ್ಯದ //ಶಾಖೆಯ ರಾಜ್ಯ ಸಚಿವ ಶ್ರೀ.//ಡಿ.ಕಿತ್ತೂರ್ ಅವರ ಜೇಬು ಕಳ್ಳತನ ಮಾಡಿ, 500 ರೂಪಾಯಿ ಅಪಹರಿಸಿದ ಪ್ರಕರಣ ವರದಿ ಆಗಿದೆ.</p>.<p>ಕಳೆದ ಶನಿವಾರ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರು ಲಾಲ್// ಗಾಜಿನ ಮನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಈ ಪ್ರಕರಣ ನಡೆಯಿತೆಂದು ಹೇಳಲಾಗಿದೆ.</p>.<p>ವೇದಿಕೆಯಿಂದ ಸುಮಾರು 20 ಅಡಿ ಅಂತರದಲ್ಲಿ// 5 ಮತ್ತು 10 ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳ ಬಿದ್ದಿರುವುದು ಕಂಡುಬಂತು. ಸಚಿವ ಶ್ರೀ ಕಿತ್ತೂರ್ ಅವರು ಅವುಗಳನ್ನು ತೆಗೆದುಕೊಂಡು ತಮ್ಮ ಜೇಬಿಗೆ ಕೈ ಹಾಕಿದಾಗ //100 ರೂಪಾಯಿ ಮೌಲ್ಯದ ಐದು ಕರೆನ್ಸಿ ನೋಟುಗಳಿದ್ದ ಕವರ್ ಮಯಾವಾಗಿತ್ತು. ಶ್ರೀ ಕಿತ್ತೂರ್ ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>