ನವದೆಹಲಿ, ಜುಲೈ 30– ಐವತ್ತು ಸಾವಿರ ರೂ. ಅಥವಾ ಹೆಚ್ಚು ಹಣಕ್ಕಾಗಿ ಷೇರುಗಳನ್ನು ಒತ್ತೆ ಇಟ್ಟ ಕಂಪನಿಗಳಲ್ಲಿ, ಒತ್ತೆ ಇಟ್ಟುಕೊಂಡ ಬ್ಯಾಂಕುಗಳು ಮತ ಚಲಾಯಿಸುವ ಹಕ್ಕನ್ನು ಇನ್ನು ಮುಂದೆ ಪಡೆಯುತ್ತವೆ.
ಷೇರುಗಳನ್ನು ಪಡೆದು ಬ್ಯಾಂಕಿನಲ್ಲಿ ಒತ್ತೆ ಇಟ್ಟು, ಮತ್ತೆ ಷೇರುಗಳನ್ನು ಪಡೆದು ಸಂಸ್ಥೆಗಳ ಮೇಲೆ ಹತೋಟಿ ಪಡೆಯಲು ಪ್ರಯತ್ನಿಸುವ ಈ ಕ್ರಾಂತಿಕಾರಿ ಕ್ರಮವನ್ನು ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.
ಸಣ್ಣ ಉದ್ದಿಮೆದಾರರಿಗೆ ಸಾಲ ನೀಡಲು ಸಂಸ್ಥೆ
ನವದೆಹಲಿ, ಜುಲೈ 30– ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ರಚಿಸಲು ಕೇಂದ್ರ ಸಂಪುಟ ಇಂದು ನಿರ್ಧರಿಸಿತು.
ಕೃಷಿ, ಸಣ್ಣ ಪ್ರಮಾಣದ ಕೈಗಾರಿಕೆ ಮೊದಲಾದ ಕ್ಷೇತ್ರಗಳಲ್ಲಿನ ಸಣ್ಣ ಉದ್ದಿಮೆದಾರರಿಗೆ ಈಕಾರ್ಪೊರೇಷನ್ ಒಂದು ಲಕ್ಷ ರೂ.ವರೆಗೆ ಸಾಲ ನೀಡುತ್ತದೆ.